ಆ್ಯಪ್ನಗರ

ಸರ್ವ ಕಾರ್ಯಕ್ಕೂ ಒಂದೇ ಸ್ಮಾರ್ಟ್‌ ಕಾರ್ಡ್‌ : 2021ಕ್ಕೆ ಡಿಜಿಟಲ್‌ ಗಣತಿ

2011ರ ಜನಗಣತಿ ಸಿಂಧುತ್ವ ಮುಗಿಯುತ್ತಿದ್ದು, 2021ರ ಜನಗಣತಿ ಕಾರ್ಯ ಆರಂಭವಾಗಬೇಕಿದೆ. ಈ ಬಾರಿ ಮೊಬೈಲ್‌ ಆಪ್‌ ಮೂಲಕವೇ ಗಣತಿ ಕಾರ್ಯ ನಡೆಯಲಿದೆ. ಜತೆಗೆ ದೇಶದ ಎಲ್ಲ ಜನರಿಗೂ ಸರ್ವ ಕಾರ್ಯಗಳಿಗೂ ಒಂದೇ ಗುರುತಿನ ಚೀಟಿ (ಎಪಿಪ್‌ ಕಾರ್ಡ್‌) ವಿತರಿಸುವ ಕುರಿತು ಕೇಂದ್ರ ಗೃಹ ಸಚಿವ ಅಮಿತ್‌ ಶಾ ತಿಳಿಸಿದ್ದಾರೆ.

Vijaya Karnataka Web 23 Sep 2019, 5:19 pm
ಹೊಸದಿಲ್ಲಿ: ಇಂದು ಒಂದೊಂದು ಕೆಲಸಕ್ಕೆ ಒಂದೊಂದು ಗುರುತಿನ ಚೀಟಿ ಹೊಂದಬೇಕಾದ ಅನಿವಾರ್ಯತೆ ಇದೆ. ಕಿಸೆತುಂಬ ಐಡಿ ಕಾರ್ಡ್‌ ತುರುಕಿಕೊಂಡು ಓಡಾಡುವ ಪಾಡು ಜನಸಾಮಾನ್ಯನದ್ದು. ಈ ಸಮಸ್ಯೆ ಇನ್ನು ನಿವಾರಣೆಯಾಗಲಿದೆ. ಎಲ್ಲ ಕೆಲಸಗಳಿಗೂ ಒಂದೇ ಗುರುತಿನ ಚೀಟಿ ಪರಿಚಯಿಸಲು ಕೇಂದ್ರ ಸರ್ಕಾರ ಯೋಜಿಸಿದೆ. ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರು ಪಾಸ್‌ಪೋರ್ಟ್‌, ಆಧಾರ್‌, ವೋಟರ್‌ ಐಡಿ, ಡ್ರೈವಿಂಗ್‌ ಲೈಸೆನ್ಸ್‌, ಬ್ಯಾಂಕ್‌ ಅಕೌಂಟ್‌ ಸೇರಿದಂತೆ ಎಲ್ಲ ಕೆಲಸಗಳಿಗೂ ಒಂದೇ ಬಹುಉದ್ದೇಶಿತ ಗುರುತಿನ ಚೀಟಿ (ಮಲ್ಟಿಪರ್ಪಸ್‌ ಐಡಿ ಕಾರ್ಡ್‌) ಪರಿಚಯಿಸುವುದಾಗಿ ಪ್ರಸ್ತಾಪಿಸಿದ್ದಾರೆ.
Vijaya Karnataka Web amith shaw



ದೆಹಲಿಯಲ್ಲಿ ಜನಗಣನ(ಜನಗಣತಿ) ಕಟ್ಟಡದ ಶಂಕುಸ್ಥಾಪನೆ ನರವೇರಿಸಿ ಮಾತನಾಡಿದರು. ಇದುವರೆಗೆ ಸಾಂಪ್ರದಾಯಿಕ ವಿಧಾನದಲ್ಲಿ ಕಾಗದವನ್ನು ಬಳಸಿ ಜನಗಣತಿ ಮಾಡಲಾಗುತಿತ್ತು. ಆದರೆ, 2021ರಲ್ಲಿ ಮೊಬೈಲ್ ಅಪ್ಲಿಕೇಶನ್ ಮೂಲಕ ಜನಗಣತಿ ನಡೆಯಲಿದೆ ಎಂದು ತಿಳಿಸಿದರು.

ಮೋದಿ-ಶಾ ಮತ್ತೆ ನಂ.1 ಜೋಡಿ!

2011ರ ಗಣತಿಯ ಅವಧಿ ಮುಗಿಯುತ್ತಿದ್ದು, 2021ರ ಜನಗಣತಿ ಆರಂಭಿಸುವ ಕಾಲ ಬಂದಿದೆ. 2021ರ ಜನಗಣತಿಯನ್ನು ಮೊಬೈಲ್ ಅಪ್ಲಿಕೇಶನ್ (ಆಪ್‌) ಮೂಲಕ ನಡೆಸಲು ಯೋಜಿಸಲಾಗಿದೆ ಎಂದು ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.

ಪಿಒಕೆ ಸೃಷ್ಟಿಗೆ ನೆಹರು ಕಾರಣ: ಅಮಿತ್‌ ಶಾ
2021ರ ಜನಗಣತಿಗೆ ಒಂದು ಮೊಬೈಲ್ ಆಪ್‌ ರೂಪಿಸಲಾಗುವುದು. ಇದು ಇಲ್ಲಿಯವರೆಗೆ ನಡೆಯುತ್ತಿದ್ದ ಸಾಂಪ್ರದಾಯಿಕ ಸಮೀಕ್ಷೆಯನ್ನು ಡಿಜಿಟಲ್ ಸಮೀಕ್ಷೆಯನ್ನಾಗಿ ಪರಿವರ್ತಿಸಲಿದೆ ಎಂದು ಹೇಳಿದರು.
ಈ ಭಾರಿ 2 ಹಂತಗಳಲ್ಲಿ ಜನಗಣತಿ ನಡೆಯಲಿದೆ. ಮೊದಲ ಹಂತವು 2021ರ ಮಾರ್ಚ್‌ 1ರಂದು ಆರಂಭವಾಗಲಿದೆ. ಮೊದಲ ಹಂತದಲ್ಲಿ ಜಮ್ಮು ಮತ್ತು ಕಾಶ್ಮೀರ, ಹಿಮಾಚಲ ಪ್ರದೇಶ, ಉತ್ತರಾಖಂಡಗಳಲ್ಲಿ ನಡೆಯಲಿದೆ.

ರಾಷ್ಟ್ರೀಯ ಜನಸಂಖ್ಯಾ ನೋಂದಣಿ (ಎನ್‌ಪಿಆರ್‌ : 2021 ರ ಜನಗಣತಿ ಕಾರ್ಯಕ್ಕೆ 12,000 ಕೋಟಿ ರೂಪಾಯಿ ಅನುದಾನ ಮೀಸಲಿರಿಸಲಾಗಿದೆ. ಜತೆಗೆ 2020ರ ವೇಳೆಗೆ ದೇಶದ ಎಲ್ಲ ಜನತೆಯನ್ನು ನೋಂದಣಿ ಮಾಡುವ "ರಾಷ್ಟ್ರೀಯ ಜನಸಂಖ್ಯಾ ನೋಂದಣಿ" (ಎನ್‌ಪಿಆರ್‌) ಗೆ ಸಿದ್ದತೆ ನಡೆಸುವುದಾಗಿಯೂ ಅಮಿತ್‌ ಶಾ ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ