ಆ್ಯಪ್ನಗರ

ಸರ್ವಪಕ್ಷ ಸಭೆ ವಿಫಲ

ಸಂಯಮ ಹಾಗೂ ಶಾಂತಿ ಪಾಲನೆಗೆ ರಾಜ್ಯಪಾಲ ಕೇಸರಿನಾಥ ತ್ರಿಪಾಠಿ ಕೆಲವು ಸಲಹೆಗಳನ್ನು ನೀಡಿದರು. ಆದರೆ ಅವುಗಳನ್ನು ತಕ್ಷಣ ಒಪ್ಪಲು ಟಿಎಂಸಿ ಪ್ರತಿನಿಧಿಗಳು ನಿರಾಕರಿಸಿದರಲ್ಲದೇ, ವರಿಷ್ಠರ ಜತೆ ಸಮಾಲೋಚಿಸಿ ಅಭಿಪ್ರಾಯ ತಿಳಿಸುವುದಾಗಿ ಹೇಳಿದರು

Agencies 14 Jun 2019, 5:00 am
ಕೋಲ್ಕೊತಾ: ಪಶ್ಚಿಮ ಬಂಗಾಳದಲ್ಲಿ ನಡೆಯುತ್ತಿರುವ ರಾಜಕೀಯ ಹಿಂಸಾಚಾರಕ್ಕೆ ಕಡಿವಾಣ ಹಾಕುವ ಸಲುವಾಗಿ ರಾಜ್ಯಪಾಲರು ಗುರುವಾರ ನಡೆಸಿದ ಸರ್ವಪಕ್ಷ ಸಭೆಯು ಅತಂತ್ರವಾಗಿ ಅಂತ್ಯಗೊಂಡಿದೆ. ಸಂಯಮ ಹಾಗೂ ಶಾಂತಿ ಪಾಲನೆಗೆ ರಾಜ್ಯಪಾಲ ಕೇಸರಿನಾಥ ತ್ರಿಪಾಠಿ ಕೆಲವು ಸಲಹೆಗಳನ್ನು ನೀಡಿದರು. ಆದರೆ ಅವುಗಳನ್ನು ತಕ್ಷಣ ಒಪ್ಪಲು ಟಿಎಂಸಿ ಪ್ರತಿನಿಧಿಗಳು ನಿರಾಕರಿಸಿದರಲ್ಲದೇ, ವರಿಷ್ಠರ ಜತೆ ಸಮಾಲೋಚಿಸಿ ಅಭಿಪ್ರಾಯ ತಿಳಿಸುವುದಾಗಿ ಹೇಳಿದರು. ಹೀಗಾಗಿ ಸಭೆ ಯಾವುದೇ ತೀರ್ಮಾನಕ್ಕೆ ಬರುವಲ್ಲಿ ವಿಫಲವಾಯಿತು. ಈ ಮಧ್ಯೆ, ರಾಜ್ಯಪಾಲರು ಕಾನೂನು-ಸುಭದ್ರತೆ ಬಗ್ಗೆ ಚರ್ಚೆಗೆ ಸಭೆ ಕರೆದಿರುವ ಆಕ್ಷೇಪ ವ್ಯಕ್ತಪಡಿದ್ದ ಟಿಎಂಸಿ ವರಿಷ್ಠ ನಾಯಕಿ ಹಾಗೂ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು, ''ಇದು ಬಿಜೆಪಿ ಸೂಚನೆಯಂತೆ ಕರೆಯಲಾದ ಸಭೆ. ಹೀಗಾಗಿ ನಾನು ಹಾಜರಾಗುವುದಿಲ್ಲ,'' ಎಂದಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ