ಆ್ಯಪ್ನಗರ

ಬಾಂಬ್‌ ಒಯ್ಯುತ್ತಿದ್ದೇನಾ ಎಂದು ಕೇಳಿದ ಪ್ರಯಾಣಿಕ ಪೊಲೀಸ್‌ ವಶಕ್ಕೆ!

ಬಾಂಬ್‌ ಎಂಬ ಶಬ್ದ ಕೇಳುತ್ತಿದ್ದಂತೆ ಒಳಪ್ರವೇಶಿಸಲು ಬಿಡದೇ ಕೆಳಗಿಳಿಸಿದ ಸಿಬ್ಬಂದಿ, ಭದ್ರತಾ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಧಾವಿಸಿದ ಭದ್ರತಾ ಅಧಿಕಾರಿಗಳು ಬ್ಯಾಗ್‌ ತಪಾಸಣೆ ನಡೆಸಿದಾಗ ಏನೂ ಪತ್ತೆಯಾಗಲಿಲ್ಲ. ನಂತರ ಅವರನ್ನು ಸ್ಥಳೀಯ ಪೊಲೀಸರ ವಶಕ್ಕೆ ಒಪ್ಪಿಸಲಾಯಿತು.

Vijaya Karnataka 7 Mar 2019, 3:34 pm
ಚೆನ್ನೈ: ಪಾಕಿಸ್ತಾನದಿಂದ ಸಂಭವನೀಯ ದಾಳಿ ಹಿನ್ನೆಲೆಯಲ್ಲಿ ವಿಮಾನ ನಿಲ್ದಾಣದಲ್ಲಿ ಭದ್ರತಾ ತಪಾಸಣೆ ಹೆಚ್ಚಿಸಿರುವುದನ್ನು ಪ್ರತಿಭಟಿಸಿದ ಪ್ರಯಾಣಿಕರೊಬ್ಬರನ್ನು ಇಂಡಿಗೊ ಏರ್‌ಲೈನ್ಸ್‌ ವಿಮಾನದಿಂದ ಕೆಳಗಿಳಿಸಿದೆ.
Vijaya Karnataka Web indigo


ಪ್ರತಿಭಟಿಸುವ ಭರದಲ್ಲಿ ಆತ ವಿಮಾನಯಾನ ಸಂಸ್ಥೆ ಸಿಬ್ಬಂದಿ ಜತೆ, 'ಬಾಂಬ್‌' ಎಂಬ ಪದ ಬಳಸಿದ್ದೇ ಇದಕ್ಕೆ ಕಾರಣ! ಚೆನ್ನೈನ ವಿಮಾನ ನಿಲ್ದಾಣದಲ್ಲಿ ಮಂಗಳವಾರ ಈ ಘಟನೆ ನಡೆದಿದೆ. ಕೊಚ್ಚಿಯಿಂದ ಭುವನೇಶ್ವರಕ್ಕೆ ತೆರಳುತ್ತಿದ್ದ ವಿಮಾನವನ್ನು ಕೇರಳದ ಪಥನಂತಿಟ್ಟ ನಿವಾಸಿ ಅಲೆಕ್ಸ್‌ ಮ್ಯಾಥ್ಯೂ ಚೆನ್ನೈನಲ್ಲಿ ಏರಿದ್ದರು. ವಿಮಾನ ಪ್ರವೇಶಿಸುವ ಮುನ್ನ ಸಿಬ್ಬಂದಿ 'ಸೆಕೆಂಡರಿ ಲ್ಯಾಡರ್‌ ಪಾಯಿಂಟ್‌ ಸೆಕ್ಯುರಿಟಿ' ಅನ್ವಯ ತಪಾಸಣೆಗೆ ಮುಂದಾದರು.

ಇದಕ್ಕೂ ಮುನ್ನ ನಿಲ್ದಾಣದಲ್ಲಿ ಕಟ್ಟುನಿಟ್ಟಿನ ತಪಾಸಣೆಗೆ ಒಳಗಾಗಿದ್ದ ಮ್ಯಾಥ್ಯೂ, ''ನಾನೇನು ಬ್ಯಾಗ್‌ನಲ್ಲಿ ಬಾಂಬ್‌ ಒಯ್ಯುತ್ತಿದ್ದೇನಾ,'' ಎಂದು ಆಕ್ರೋಶದಿಂದ ಪ್ರಶ್ನಿಸಿದ್ದಾರೆ. ಬಾಂಬ್‌ ಎಂಬ ಶಬ್ದ ಕೇಳುತ್ತಿದ್ದಂತೆ ಒಳಪ್ರವೇಶಿಸಲು ಬಿಡದೇ ಕೆಳಗಿಳಿಸಿದ ಸಿಬ್ಬಂದಿ, ಭದ್ರತಾ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.

ಸ್ಥಳಕ್ಕೆ ಧಾವಿಸಿದ ಭದ್ರತಾ ಅಧಿಕಾರಿಗಳು ಬ್ಯಾಗ್‌ ತಪಾಸಣೆ ನಡೆಸಿದಾಗ ಏನೂ ಪತ್ತೆಯಾಗಲಿಲ್ಲ. ನಂತರ ಅವರನ್ನು ಸ್ಥಳೀಯ ಪೊಲೀಸರ ವಶಕ್ಕೆ ಒಪ್ಪಿಸಲಾಯಿತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ