ಆ್ಯಪ್ನಗರ

ಆರೆಸ್ಸೆಸ್‌ಗೆ ಆಸ್ತಿ ದಾನ ನೀಡಿದ ಅಮರ್ ಸಿಂಗ್‌

ನನ್ನ ತಂದೆಯ ಸ್ಮರಣಾರ್ಥ ಏನಾದರು ಮಾಡಬೇಕು ಎಂಬುದು ನನ್ನ ಅಪೇಕ್ಷೆಯಾಗಿತ್ತು. ನಮ್ಮ ಪೂರ್ವಜರ ಮನೆ ಅನೇಕ ವರ್ಷಗಳಿಂದ ಯಾರೂ ವಾಸ ಮಾಡದೇ ಹಾಗೇ ಖಾಲಿ ಇತ್ತು. ಸೇವಾಭಾರತಿ ಸಂಸ್ಥೆ ಸಮಾಜಕ್ಕೆ ಸಲ್ಲಿಸುತ್ತಿರುವ ಸೇವೆಯನ್ನು ಪರಿಗಣಿಸಿ ಈ ಆಸ್ತಿಯನ್ನು ಅವರಿಗೆ ನೀಡಿದ್ದೇನೆ.

Vijaya Karnataka Web 30 Nov 2018, 7:54 am
ಲಖನೌ: ರಾಜ್ಯಸಭಾ ಸದಸ್ಯ ಹಾಗೂ ಸಮಾಜವಾದಿ ಪಕ್ಷದ ಬಂಡಾಯ ನಾಯಕ ಅಮರ್‌ ಸಿಂಗ್‌ ಅವರು 15 ಕೋಟಿ ರೂ. ಮೌಲ್ಯದ ತಮ್ಮ ಪಿತ್ರಾರ್ಜಿತ ಆಸ್ತಿಯನ್ನು ಆರ್‌ಎಸ್‌ಎಸ್‌ ಅಂಗಸಂಸ್ಥೆ ಸೇವಾಭಾರತಿಗೆ ದಾನವಾಗಿ ನೀಡಿದ್ದಾರೆ.
Vijaya Karnataka Web amar sing


ಉತ್ತರ ಪ್ರದೇಶದ ಆಜಂಗಢ ಜಿಲ್ಲೆಯ ತರ್ವಾನ್‌ ಗ್ರಾಮದಲ್ಲಿರುವ ಪೂರ್ವಜರ ಮನೆ ಮತ್ತು ಭೂಮಿಯನ್ನು ಸೇವಾಭಾರತಿ ಸಂಸ್ಥೆಗೆ ಅಮರ್‌ಸಿಂಗ್‌ ನೀಡಿದ್ದಾರೆ.

ಈ ಕುರಿತು ಮಾಹಿತಿ ನೀಡಿದ ಅಮರ್‌ ಸಿಂಗ್‌, ನನ್ನ ತಂದೆಯ ಸ್ಮರಣಾರ್ಥ ಏನಾದರು ಮಾಡಬೇಕು ಎಂಬುದು ನನ್ನ ಅಪೇಕ್ಷೆಯಾಗಿತ್ತು. ನಮ್ಮ ಪೂರ್ವಜರ ಮನೆ ಅನೇಕ ವರ್ಷಗಳಿಂದ ಯಾರೂ ವಾಸ ಮಾಡದೇ ಹಾಗೇ ಖಾಲಿ ಇತ್ತು. ಸೇವಾಭಾರತಿ ಸಂಸ್ಥೆ ಸಮಾಜಕ್ಕೆ ಸಲ್ಲಿಸುತ್ತಿರುವ ಸೇವೆಯನ್ನು ಪರಿಗಣಿಸಿ ಈ ಆಸ್ತಿಯನ್ನು ಅವರಿಗೆ ನೀಡಿದ್ದೇನೆ ಎಂದು ತಿಳಿಸಿದ್ದಾರೆ.

ತಮ್ಮ ರಾಜಕೀಯ ಜೀವನ ಪುರ್ತಿ ಆರ್‌ಎಸ್‌ಎಸ್‌ ಅನ್ನು ಕೋಮುವಾದಿ ಎಂದು ಖಂಡಿಸುತ್ತಿದ್ದ ಅಮರ್‌ ಸಿಂಗ್‌, ಆರ್‌ಎಸ್‌ಎಸ್‌ ಅಂಗಸಂಸ್ಥೆಗೆ ದೊಡ್ಡ ಮೌಲ್ಯದ ಆಸ್ತಿ ದಾನ ಮಾಡಿರುವುದು, ಮುಂದಿನ ದಿನಗಳಲ್ಲಿ ಅವರು ಕೇಸರಿ ಪಾಳಯ ಸೇರುವ ಮುನ್ಸೂಚನೆ ಎಂದು ಕೆಲವು ರಾಜಕೀಯ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಆದರೆ ಈ ಕುರಿತು ಪ್ರತಿಕ್ರಿಯಿಸಲು ಅಮರ್‌ ಸಿಂಗ್‌ ನಿರಾಕರಿಸಿದ್ದಾರೆ. 2017ರ ಜನವರಿಯಲ್ಲಿ ಸಮಾಜವಾದಿ ಪಕ್ಷದಿಂದ ಅಮರ್‌ ಸಿಂಗ್‌ ಹೊರಬಂದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ