ಆ್ಯಪ್ನಗರ

ಕಾಂಗ್ರೆಸ್‌ಗೆ ವರ್ಚಸ್ವಿ ಯುವ ನಾಯಕತ್ವದ ಅಗತ್ಯವಿದೆ: ಕ್ಯಾಪ್ಟನ್‌

ಕಾಂಗ್ರೆಸ್‌ ಅಧ್ಯಕ್ಷ ಹುದ್ದೆಗೆ ಮಲ್ಲಿಕಾರ್ಜುನ ಖರ್ಗೆ, ಸುಶೀಲ್‌ ಕುಮಾರ್‌ ಶಿಂಧೆ ಅವರಂತಹ ಹಿರಿಯ ನಾಯಕರ ಹೆಸರುಗಳು ಚಾಲ್ತಿಯಲ್ಲಿರುವುದರಿಂದ ಅಮರೀಂದರ್‌ ಈ ಹೇಳಿಕೆ ನೀಡಿದ್ದಾರೆ ಎನ್ನಲಾಗಿದೆ.

PTI 7 Jul 2019, 5:00 am
ಚಂಡೀಗಢ: ಕಾಂಗ್ರೆಸ್‌ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿರುವ ರಾಹುಲ್‌ ಗಾಂಧಿ ಅವರ ಉತ್ತರಾಧಿಕಾರಿಯಾಗಿ ವರ್ಚಸ್ವಿ ಯುವ ನಾಯಕನನ್ನು ಹುಡುಕುವಂತೆ ಕಾಂಗ್ರೆಸ್‌ ಕಾರ‍್ಯಕಾರಿ ಸಮಿತಿಗೆ (ಸಿಡಬ್ಲ್ಯೂಸಿ) ಪಂಜಾಬ್‌ ಮುಖ್ಯಮಂತ್ರಿ ಕ್ಯಾಪ್ಟನ್‌ ಅಮರೀಂದರ್‌ ಸಿಂಗ್‌ ಸಲಹೆ ನೀಡಿದ್ದಾರೆ. ಕಾಂಗ್ರೆಸ್‌ ಅಧ್ಯಕ್ಷ ಹುದ್ದೆಗೆ ಮಲ್ಲಿಕಾರ್ಜುನ ಖರ್ಗೆ, ಸುಶೀಲ್‌ ಕುಮಾರ್‌ ಶಿಂಧೆ ಅವರಂತಹ ಹಿರಿಯ ನಾಯಕರ ಹೆಸರುಗಳು ಚಾಲ್ತಿಯಲ್ಲಿರುವುದರಿಂದ ಅಮರೀಂದರ್‌ ಈ ಹೇಳಿಕೆ ನೀಡಿದ್ದಾರೆ ಎನ್ನಲಾಗಿದೆ.
Vijaya Karnataka Web caption


ರಾಜೀನಾಮೆ ನಿರ್ಧಾರದಿಂದ ರಾಹುಲ್‌ ಹಿಂದೆ ಸರಿಯದಿರುವುದು ದುರದೃಷ್ಟಕರ ಎಂದಿರುವ ಕ್ಯಾಪ್ಟನ್‌ ಸಿಂಗ್‌, ''ಪಕ್ಷ ವನ್ನು ಸಜ್ಜುಗೊಳಿಸುವುದು ಸೇರಿದಂತೆ ಕಾಂಗ್ರೆಸ್‌ ಮುಂದೆ ಅನೇಕ ಸವಾಲುಗಳಿವೆ. ರಾಹುಲ್‌ ಸ್ಥಾನಕ್ಕೆ ನವ ಭಾರತ ಒಪ್ಪುವಂತಹ ಪ್ರಖರ ನಿಲುವಿನ ವರ್ಚಸ್ವಿ ಹಾಗೂ ಉತ್ಸಾಹಿ ಯುವ ನಾಯಕನ ನೇಮಕವಾಗಬೇಕಿದೆ. ಯುವಕರ ಆಕಾಂಕ್ಷೆಗಳಿಗೆ ಅನುಗುಣವಾಗಿ ಮತ್ತು ತಳಮಟ್ಟದೊಂದಿಗೆ ಸಂಪರ್ಕ ಹೊಂದಿರುವ ಯುವ ನಾಯಕನ ಅಗತ್ಯವನ್ನು ಗಮನಿಸಿ ಸಿಡಬ್ಲ್ಯೂಸಿ ನಿರ್ಧಾರ ಕೈಗೊಳ್ಳಬೇಕು,'' ಎಂದು ಹೇಳಿದ್ದಾರೆ.

ಕಾಂಗ್ರೆಸ್‌ ಅಧ್ಯಕ್ಷ ರಾಗಿ ಮತ್ತೊಬ್ಬ ಕ್ರಿಯಾತ್ಮಕ ಯುವ ನಾಯಕನನ್ನು ಕಾಣುವ ಭರವಸೆ ವ್ಯಕ್ತಪಡಿಸಿರುವ ಅವರು, ಪಕ್ಷದಲ್ಲಿರುವ ಹಿರಿಯರು ಯುವ ನಾಯಕರಿಗೆ ತಮ್ಮ ಸ್ಥಾನಗಳನ್ನು ಬಿಟ್ಟುಕೊಟ್ಟು ಮಾರ್ಗದರ್ಶನ ಮಾಡÜಬೇಕು. ಇಲ್ಲದಿದ್ದರೆ ಪಕ್ಷವು ಯುವ ಸಮುದಾಯದಿಂದ ದೂರ ಉಳಿಯುವ ಅಪಾಯವಿದೆ ಎಂದು ಅವರು ಎಚ್ಚರಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ