ಶ್ರೀನಗರ: ಪಹಲ್ಗಾಂಮ್ ಮಾರ್ಗದಲ್ಲಿ ಕಳೆದ ಎರಡು ದಿನಗಳಿಂದ ಸ್ಥಗಿತಗೊಂಡಿದ್ದ ಅಮರನಾಥ ಯಾತ್ರೆ ಶುಕ್ರವಾರ ಮತ್ತೆ ಆರಂಭಗೊಂಡಿದೆ. ಆದರೆ, ಬಲ್ತಾಲ್ ಮಾರ್ಗದಲ್ಲಿ ಸತತ ಮೂರನೇ ದಿನವೂ ಯಾತ್ರೆ ಸ್ತಬ್ಧವಾಗಿದೆ. ಮಳೆಯಿಂದಾಗಿ ಭಾರಿ ಪ್ರಮಾಣದ ಭೂಕುಸಿತ ಮತ್ತು ನೀರ್ಗಲ್ಲುಗಳ ಹೊಡೆತದ ಕಾರಣಕ್ಕಾಗಿ ಸಂಚಾರಕ್ಕೆ ತೊಡಕಾಗಿತ್ತು. ದನಿಬಾಗ್ ಪ್ರದೇಶದಲ್ಲಿ ಭೂಕುಸಿತ ಸಂಭವಿಸಿದ್ದರಿಂದ ಕಣಿವೆ ಮತ್ತು ಲಡಾಖ್ ಪ್ರದೇಶವನ್ನು ಸಂಪರ್ಕಿಸುವ ಏಕೈಕ ರಸ್ತೆ ಶ್ರೀನಗರ-ಲೇಹ್ ಮಾರ್ಗ ಕೂಡಾ ಮುಚ್ಚಲ್ಪಟ್ಟಿದೆ.
ಅಮರನಾಥ ಯಾತ್ರೆ ಸ್ಥಗಿತ, ಮರು ಆರಂಭ
ಪಹಲ್ಗಾಂಮ್ ಮಾರ್ಗದಲ್ಲಿ ಕಳೆದ ಎರಡು ದಿನಗಳಿಂದ ಸ್ಥಗಿತಗೊಂಡಿದ್ದ ಅಮರನಾಥ ಯಾತ್ರೆ ಶುಕ್ರವಾರ ಮತ್ತೆ ಆರಂಭಗೊಂಡಿದೆ.ಆದರೆ, ಬಲ್ತಾಲ್ ಮಾರ್ಗದಲ್ಲಿ ಸತತ ಮೂರನೇ ದಿನವೂ ಯಾತ್ರೆ ಸ್ತಬ್ಧವಾಗಿದೆ.
Vijaya Karnataka 7 Jul 2018, 9:32 am