ಆ್ಯಪ್ನಗರ

ಅಮರನಾಥ ಯಾತ್ರೆ ಪುನರಾರಂಭ

ಕಾಶ್ಮೀರ ಕಣಿವೆಯಲ್ಲಿ ಪ್ರತ್ಯೇಕತಾವಾದಿಗಳ ಮುಷ್ಕರದಿಂದ ಭಾನುವಾರ ಸ್ಥಗಿತಗೊಂಡಿದ್ದ ಅಮರನಾಥ ಯಾತ್ರೆ ಪುನರಾರಂಭಗೊಂಡಿದೆ.

Vijaya Karnataka 10 Jul 2018, 10:05 am
ಜಮ್ಮು: ಕಾಶ್ಮೀರ ಕಣಿವೆಯಲ್ಲಿ ಪ್ರತ್ಯೇಕತಾವಾದಿಗಳ ಮುಷ್ಕರದಿಂದ ಭಾನುವಾರ ಸ್ಥಗಿತಗೊಂಡಿದ್ದ ಅಮರನಾಥ ಯಾತ್ರೆ ಪುನರಾರಂಭಗೊಂಡಿದೆ.
Vijaya Karnataka Web Amaranath


6,162 ಯಾತ್ರಿಗಳನ್ನು ಒಳಗೊಂಡ ಹೊಸ ತಂಡ ಸೋಮವಾರ ಜಮ್ಮುವಿನಿಂದ ಪ್ರಯಾಣ ಆರಂಭಿಸಿದೆ. ಹೊಸ ತಂಡವು 1,360 ಮಹಿಳೆಯರು ಮತ್ತು 222 ಸಾಧುಗಳನ್ನು ಒಳಗೊಂಡಿದೆ. ಜಮ್ಮು-ಶ್ರೀನಗರ ನಡುವಿನ ಸರ್ವಋುತು ಹೆದ್ದಾರಿಯಲ್ಲೂ ವಾಹನಗಳ ಸಂಚಾರ ಪುನರಾರಂಭಗೊಂಡಿದೆ.

516 ಮಹಿಳೆಯರು ಸೇರಿದಂತೆ 3,163 ಯಾತ್ರಿಗಳು ಮತ್ತು 197 ಸಾಧುಗಳು ಅನಂತ್‌ನಾಗ್‌ ಜಿಲ್ಲೆಯ, 36 ಕಿ.ಮೀ. ದೂರದ ಸಾಂಪ್ರದಾಯಿಕ ಪಹಲ್ಗಾಮ್‌ ಮಾರ್ಗವನ್ನು ಆಯ್ಕೆ ಮಾಡಿಕೊಂಡಿದ್ದಾರೆ. 844 ಮಹಿಳೆಯರು ಮತ್ತು 25 ಸಾಧುಗಳು ಸೇರಿದಂತೆ ಉಳಿದ 2,999 ಯಾತ್ರಿಗಳು ಗಂದರ್ಬಲ್‌ ಜಿಲ್ಲೆಯ 12 ಕಿ.ಮೀ. ದೂರದ ಬಲ್ಟಾ ಟ್ರ್ಯಾಕ್‌ ಮೂಲಕ ಅಮರನಾಥ ತಲುಪಲು ಇಚ್ಛಿಸಿದ್ದಾರೆ.

ಹಿಜ್ಬುಲ್‌ ಮುಜಾಹಿದೀನ್‌ ಉಗ್ರ ಮುಖಂಡ ಬುಹ್ರಾನ್‌ ವಾನಿಯ ಹತ್ಯೆಯ ಎರಡನೇ ವರ್ಷಾಚರಣೆಯ ಹಿನ್ನೆಲೆಯಲ್ಲಿ ಪ್ರತ್ಯೇಕತಾವಾದಿಗಳು ಜುಲೈ 8ರಂದು ಬಂದ್‌ಗೆ ಕರೆ ನೀಡಿದ್ದರು. ಕಾನೂನು ಮತ್ತು ಸುವ್ಯವಸ್ಥೆ ದೃಷ್ಟಿಯಿಂದ ಮುನ್ನೆಚ್ಚರಿಕಾ ಕ್ರಮದಿಂದ ಅಮರನಾಥ ಯಾತ್ರೆಯನ್ನು ತಡೆಹಿಡಿಯಲಾಗಿತ್ತು. ಇದರಿಂದ ಸಾವಿರಾರು ಯಾತ್ರಾರ್ಥಿಗಳು ಪರದಾಟ ಅನುಭವಿಸಿದ್ದರು. ಇದಕ್ಕೂ ಮುನ್ನ, ಭಾರಿ ಮಳೆ, ಗುಡ್ಡ ಕುಸಿತ ಸೇರಿದಂತೆ ಹಲವು ಕಾರಣಗಳಿಗಾಗಿ ಎರಡು ಸಲ ಯಾತ್ರೆ ಸ್ಥಗಿತಗೊಂಡಿತ್ತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ