ಆ್ಯಪ್ನಗರ

ಅಂಬೇಡ್ಕರ್‌ ಪ್ರತಿಮೆಯನ್ನು ಗಂಗಾಜಲದಿಂದ ಶುದ್ಧೀಕರಿಸಿದ ದಲಿತ ನ್ಯಾಯವಾದಿಗಳು!

ಬಿಜೆಪಿಯ ನಾಯಕರು ಡಾ. ಬಿ.ಆರ್‌. ಅಂಬೇಡ್ಕರ್‌ ಪ್ರತಿಮೆಗೆ ಮಾಲಾರ್ಪಣೆ ಮಾಡಿದ್ದಕ್ಕೆ, ಪ್ರತಿಮೆಯನ್ನು ಗಂಗಾಜಲ, ಹಾಲಿನಿಂದ ಶುದ್ಧಗೊಳಿಸಿದ ಪ್ರಸಂಗ ಮೀರತ್‌ನಲ್ಲಿ ನಡೆದಿದೆ.

TIMESOFINDIA.COM 11 Aug 2018, 6:46 pm
ಮೀರತ್‌: ಬಿಜೆಪಿಯ ನಾಯಕರು ಡಾ. ಬಿ.ಆರ್‌. ಅಂಬೇಡ್ಕರ್‌ ಪ್ರತಿಮೆಗೆ ಮಾಲಾರ್ಪಣೆ ಮಾಡಿದ್ದಕ್ಕೆ, ಪ್ರತಿಮೆಯನ್ನು ಗಂಗಾಜಲ, ಹಾಲಿನಿಂದ ಶುದ್ಧಗೊಳಿಸಿದ ಪ್ರಸಂಗ ಮೀರತ್‌ನಲ್ಲಿ ನಡೆದಿದೆ.
Vijaya Karnataka Web ambedkar


ಜಿಲ್ಲಾ ನ್ಯಾಯಾಲಯದ ಬಳಿಕ ಇದ್ದ ಅಂಬೇಡ್ಕರ್‌ ಪ್ರತಿಮೆಗೆ ಶುಕ್ರವಾರ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಸುನಿಲ್‌ ಬನ್ಸಾಲ್‌ ಹೂ ಮಾಲೆ ಅರ್ಪಿಸಿದ್ದರು. ಬಿಜೆಪಿ ವಿರುದ್ಧ ಪ್ರತಿಭಟನೆಯ ಪ್ರತೀಕವಾಗಿ ದಲಿತ ನ್ಯಾಯವಾದಿಗಳು ಗಂಗಾಜಲ ಹಾಗೂ ಹಾಲೆರೆದು ಪ್ರತಿಮೆಯನ್ನು ಶುದ್ಧಮಾಡಿದ್ದಾರೆ.

ಆರ್‌ಎಸ್‌ಎಸ್‌ ಹಾಗೂ ಬಿಜೆಪಿಯವರು ದಲಿತರ ವಿಚಾರದಲ್ಲಿ ಸ್ಪಷ್ಟ ನಿರ್ಧಾರ ಹೊಂದಿಲ್ಲ ಎಂದು ನ್ಯಾಯವಾದಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಉತ್ತರ ಪ್ರದೇಶದಲ್ಲಿ ಬಿಜೆಪಿ ಕಾರ್ಯಕಾರಿ ಸಮಿತಿ ಸಭೆ ಆರಂಭವಾಗಿದ್ದು, ಈ ಸಂಬಂಧ ಮೀರತ್‌ ನಗರದಲ್ಲಿ ಕೇಸರಿ ಎಲ್ಲೆಲ್ಲೂ ಹರಿದಾಡುತ್ತಿದೆ. ಸುನಿಲ್‌ ಬನ್ಸಾಲ್‌, ಉತ್ತರ ಪ್ರದೇಶ ಬಿಜೆಪಿ ಮುಖ್ಯಸ್ಥ ಅಶ್ವನಿ ತ್ಯಾಗಿ ಅವರೊಂದಿಗೆ ಅಂಬೇಡ್ಕರ್‌ ಪ್ರತಿಮೆಗೆ ಮಾಲಾರ್ಪಣೆ ಮಾಡಿದ್ದರು.

Read This in English

ಬಿಜೆಪಿ-ಆರ್‌ಎಸ್‌ಎಸ್‌ ದಲಿತರ ವಿಚಾರದಲ್ಲಿ ದ್ವಂದ್ವ ನೀತಿ ಅನುಸರಿಸುತ್ತಿದೆ. ಒಂದು ಭಾಗದಲ್ಲಿ ದಲಿತ ಎಂಜಿನಿಯರ್‌ಗಳನ್ನು ಶೋಷಣೆ ಮಾಡುತ್ತಿದ್ದರೆ, ಮತ್ತೊಂದೆಡೆ ನಮ್ಮ ನಾಯಕ ಅಂಬೇಡ್ಕರ್‌ಗೆ ಮಾಲಾರ್ಪಣೆ ಮಾಡುತ್ತಾರೆ. ಇದಕ್ಕಾಗಿಯೇ ಪ್ರತಿಮೆಯ ಶುದ್ಧೀಕರಣ ಕಾರ್ಯಕ್ರಮ ಮಾಡಲಾಗಿದೆ ಎಂದು ನ್ಯಾಯವಾದಿ ಪ್ರವೀಣ್‌ ಭಾರತಿ ಹೇಳಿದ್ದಾರೆ.

ಸಹಾರಣ್‌ಪುರದಲ್ಲಿ ಏ.2ರಂದು ನಡೆದ ಗಲಭೆಯಲ್ಲಿ ಸುಮಾರು 200ಕ್ಕೂ ಅಧಿಕ ದಲಿತರನ್ನು ಉತ್ತರ ಪ್ರದೇಶದ ಬಿಜೆಪಿ ಸರಕಾರ ಜೈಲಿಗಟ್ಟಿದೆ. ಬಿಜೆಪಿ ಅಧಿಕಾರಕ್ಕೆ ಬಂದ ಬಳಿಕ ದಲಿತರ ಮೇಲಿನ ಶೋಷಣೆ ಹೆಚ್ಚಾಗಿದೆ ಎಂದು ಅವರು ಆರೋಪಿಸಿದ್ದಾರೆ.

ಬಿಜೆಪಿ ದಲಿತ ವಿರೋಧಿ ಎಂದು ಬಿಂಬಿಸುವ ಪ್ರಯತ್ನ ವಿಪಕ್ಷಗಳು ಮಾಡುತ್ತಿವೆ. ಬಿಜೆಪಿ ಎಂದಿಗೂ ದಲಿತರನ್ನು ವಿರೋಧಿಸಿಲ್ಲ. ಅಲ್ಲದೆ ಡಾ. ಬಿ.ಆರ್‌. ಅಂಬೇಡ್ಕರ್‌ ರಾಷ್ಟ್ರ ನಾಯಕರಾಗಿದ್ದು, ಅವರ ಜೀವನ ಎಲ್ಲರಿಗೂ ಆದರ್ಶ ಎಂದು ಬಿಜೆಪಿ ವಕ್ತಾರ ಚಂದ್ರಮೋಹನ್‌ ಹೇಳಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ