ಆ್ಯಪ್ನಗರ

ನಮೋ ಆ್ಯಪ್‌ ಮೂಲಕ ದೇಣಿಗೆ ನೀಡಿದ ಅಮಿತ್‌

ನಮೋ ಆ್ಯಪ್‌ ಮೂಲಕವೇ ಹಣ ನೀಡಿ. ಪಾರದರ್ಶಕತೆ ಕಾಪಾಡಲು ಇದು ಅನುಕೂಲವಾಗಲಿದೆ,'' ಎಂದು ಅಮಿತ್ ಶಾ ಹೇಳಿದ್ದಾರೆ.

Vijaya Karnataka 24 Oct 2018, 7:20 am
ಹೊಸದಿಲ್ಲಿ: ದೇಣಿಗೆ ಪಡೆಯುವ ವಿಷಯದಲ್ಲಿ ಬಿಜೆಪಿ ಪಾರದರ್ಶಕತೆ ಕಾಪಾಡಿಕೊಂಡು ಬರುತ್ತದೆ ಎಂದು ಹೇಳಿರುವ ಪಕ್ಷದ ಅಧ್ಯಕ್ಷ ಅಮಿತ್‌ ಶಾ ಅವರು, ನಮೋ ಆ್ಯಪ್‌ ಬಳಸಿ ದೇಣಿಗೆ ನೀಡುವಂತೆ ಕಾರ‍್ಯಕರ್ತರು ಹಾಗೂ ಪಕ್ಷದ ಹಿತೈಷಿಗಳಿಗೆ ಮನವಿ ನೀಡಿದ್ದಾರೆ.
Vijaya Karnataka Web Amith Shah


ಸ್ವತಃ ತಾವು 1000 ರೂ. ದೇಣಿಗೆ ನೀಡಿದ ರಸೀದಿಯನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದು, ''ಬಿಜೆಪಿ ಕಾರ‍್ಯಕರ್ತನಾಗಿ ಈ ದೇಣಿಗೆ ನೀಡಿದ್ದೇನೆ. ಇನ್ಮುಂದೆ ನೀವು 5 ರಿಂದ 1000 ರೂ.ವರೆಗೆ ದೇಣಿಗೆ ನೀಡಬಹುದು. ಆದರೆ ನಮೋ ಆ್ಯಪ್‌ ಮೂಲಕವೇ ಹಣ ನೀಡಿ. ಪಾರದರ್ಶಕತೆ ಕಾಪಾಡಲು ಇದು ಅನುಕೂಲವಾಗಲಿದೆ,'' ಎಂದು ಹೇಳಿದ್ದಾರೆ.

ಸೋಮವಾರವಷ್ಟೇ ಕೇಂದ್ರ ಸಚಿವೆ ಸುಷ್ಮಾ ಸ್ವರಾಜ್‌ ಕೂಡ 1000 ರೂ. ದೇಣಿಗೆ ಕೊಟ್ಟಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ