ಆ್ಯಪ್ನಗರ

ರಾಹುಲ್ ಗಾಂಧಿ ಜನಿವಾರ ತೋರಿಸಿದರೂ ಬಿಜೆಪಿಗೆ ತೊಂದರೆಯಿಲ್ಲ: ಅಮಿತ್ ಶಾ

ಗುಜರಾತ್ ಚುನಾವಣಾ ಪ್ರಚಾರ ಕಾರ್ಯ ಭರದಿಂದ ಸಾಗಿದ್ದು, ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ದೇವಸ್ಥಾನಗಳಿಗೆ ಭೇಟಿ ನೀಡಿದ್ದನ್ನೇ ವಿಷಯವಾಗಿಸಿಕೊಂಡಿರುವ ಬಿಜೆಪಿ, ಈ ನಡೆಗೆ ಟೀಕಿಸುವುದನ್ನು ಮುಂದುವರಿಸಿದೆ.

Vijaya Karnataka Web 3 Dec 2017, 1:47 pm
ಅಹ್ಮದಾಬಾದ್: ಗುಜರಾತ್ ಚುನಾವಣಾ ಪ್ರಚಾರ ಕಾರ್ಯ ಭರದಿಂದ ಸಾಗಿದ್ದು, ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ದೇವಸ್ಥಾನಗಳಿಗೆ ಭೇಟಿ ನೀಡಿದ್ದನ್ನೇ ವಿಷಯವಾಗಿಸಿಕೊಂಡಿರುವ ಬಿಜೆಪಿ, ಈ ನಡೆಗೆ ಟೀಕಿಸುವುದನ್ನು ಮುಂದುವರಿಸಿದೆ.
Vijaya Karnataka Web amit shah why doesnt rahul gandhi visit temples in delhi
ರಾಹುಲ್ ಗಾಂಧಿ ಜನಿವಾರ ತೋರಿಸಿದರೂ ಬಿಜೆಪಿಗೆ ತೊಂದರೆಯಿಲ್ಲ: ಅಮಿತ್ ಶಾ


'ಗುಜರಾತ್‌ ದೇವಸ್ಥಾನಗಳಿಗೆ ಭೇಟಿ ನೀಡಿದಂತೆ, ದಿಲ್ಲಿಯ ದೇವಾಲಯಗಳಿಗೆ ರಾಹುಲ್ ಏಕೆ ಭೇಟಿ ನೀಡುವುದಿಲ್ಲ,' ಎಂದು ಪ್ರಶ್ನಿಸಿದ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ 'ಧರ್ಮ ವಿಚಾರವನ್ನು ಕಾಂಗ್ರೆಸ್ ಎತ್ತಿದ್ದರಿಂದ, ಈ ಪ್ರಶ್ನೆಗೆ ಆ ಪಕ್ಷವೇ ಉತ್ತರಿಸಬೇಕು,' ಎಂದು ಆಗ್ರಹಿಸಿದರು.

ಗುಜರಾತ್ ಚುನಾವಣೆ ಹಿನ್ನೆಲೆಯಲ್ಲಿ ಟೈಮ್ಸ್ ಆಫ್ ಇಂಡಿಯಾಗೆ ನೀಡಿದ ವಿಶೇಷ ಸಂದರ್ಶನದಲ್ಲಿ, ಶಾ ಕಾಂಗ್ರೆಸ್‌ನ ವಂಶಾಡಳಿತ ಬಗ್ಗೆಯೂ ಟೀಕಿಸಿದ್ದಾರೆ.

ಅಮಿತ್ ಶಾ ಸಂದರ್ಶನದ ವೀಡಿಯೋ ನೋಡಿ

'ರಾಹುಲ್ ಗಾಂಧಿ ಧರ್ಮದ ಬಗ್ಗೆ ವಿಷಯ ಎತ್ತಿದ್ದು ಬಿಜೆಪಿ' ಎಂಬ ಆರೋಪಕ್ಕೆ ಉತ್ತರಿಸಿದ ಶಾ, ಈ ವಿಷಯವನ್ನು ಎತ್ತಿದ್ದು ಕಾಂಗ್ರೆಸ್. ನಂಬಿಕೆ ಎನ್ನುವುದು ವೈಯಕ್ತಿಕವಾದದ್ದು. ಆದರೆ, ಧಾರ್ಮಿಕ ವಿಷಯವನ್ನು ಆ ಪಕ್ಷವೇ ಎತ್ತಿದ್ದರಿಂದ ನಮ್ಮ ಪ್ರಶ್ನೆಗಳಿಗೆ ಉತ್ತರಿಸಲಿ,' ಎಂದು ಶಾ ಆಗ್ರಹಿಸಿದ್ದಾರೆ.

ಸೋಮನಾಥ ಮಂದಿರಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಹಿಂದೂಯೇತರ ಪಟ್ಟಿಯಲ್ಲಿ ಸಹಿ ಹಾಕಿದ್ದಕ್ಕೆ ಸಂಬಂಧಿಸಿದಂತೆ ಉತ್ತರಿಸಿದ ಶಾ, 'ಇದು ಕಾಂಗ್ರೆಸ್‌ನಿಂದಲೇ ಆದ ತಪ್ಪೇ ಹೊರತು, ಇದನ್ನು ಯಾವುದೇ ರೀತಿಯಲ್ಲಿಯೂ ತಿರುಚಲಾಗಿಲ್ಲ. ಅದೂ ಅಲ್ಲದೇ ನಂಬಿಕೆಗಳನ್ನು ಮುಚ್ಚಿಡುವುದೂ ಅಸಾಧ್ಯ. ಅದೂ ಅಲ್ಲದೇ ರಾಹುಲ್ ಗಾಂಧಿ ತಮ್ಮ ಜನಿವಾರ ಪ್ರದರ್ಶಿಸಲು ನಿರ್ಧರಿಸಿದರೂ, ಬಿಜೆಪಿಗೆ ಯಾವುದೇ ತೊಂದರೆಯಿಲ್ಲ. ಇದರಿಂದ ಅವರಮ್ಮ ಸೋನಿಯಾ ಗಾಂಧಿಗೂ ತೊಂದರೆಯಿಲ್ಲವೆಂದುಕೊಳ್ಳುತ್ತೇನೆ,' ಎಂದು ಶಾ ಟಾಂಗ್ ನೀಡಿದ್ದಾರೆ.

ಗುಜರಾತ್ ಚುನಾವಣೆಯಲ್ಲಿ ಬಿಜೆಪಿ 150 ರಿಂದ 182 ಕ್ಷೇತ್ರಗಳನ್ನು ಗೆಲ್ಲುವ ಮೂಲಕ ಪ್ರಚಂಡ ಗೆಲುವು ಸಾಧಿಸುವುದಾಗಿ ವಿಶ್ವಾಸ ವ್ಯಕ್ತಪಡಿಸಿದ ಶಾ, ರಾಜ್ಯದ ಅಭಿವೃದ್ಧಿ ಕಾರ್ಯದಲ್ಲಿಯೂ ಯಾವುದೇ ಹಿನ್ನೆಡೆಯಾಗಿಲ್ಲ. ಜನರು ಬಿಜೆಪಿ ಮೇಲೆ ವಿಶ್ವಾಸ ಇಟ್ಟಿದ್ದು, ಇದು ಚುನಾವಣೆಯಲ್ಲಿ ಸಾಬೀತಾಗುತ್ತದೆ,' ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

'ಕಾಂಗ್ರೆಸ್ ಹಾಗೂ ರಾಹುಲಗ್ ಗಾಂಧಿ ಮೇಲೆ ಜನರಿಗೆ ವಿಶ್ವಾಸವಿಲ್ಲವೆಂಬುವುದು ಇತ್ತೀಚೆಗೆ ಉತ್ತರ ಪ್ರದೇಶದಲ್ಲಿ ಹೊರಬಿದ್ದ ಸ್ಥಳೀಯ ಸಂಸ್ಥೆ ಚುನಾವಣೆ ಫಲಿತಾಂಶವೇ ಸಾಕ್ಷಿ. ಅವರು ಪ್ರತಿನಿಧಿಸುವ ಕ್ಷೇತ್ರದಲ್ಲಿಯೇ ಜನರು ಕಾಂಗ್ರೆಸ್‌ ಅನ್ನು ಧಿಕ್ಕರಿಸಿದ್ದಾರೆಂದರೆ, ಆ ಪಕ್ಷದ ಬಗ್ಗೆ ಜನರಿಗೆ ಇರುವ ವಿಶ್ವಾಸ ಎಷ್ಟು ಎಂಬುವುದು ತಿಳಿಯುತ್ತದೆ,' ಎಂದರು.

'ಅಭಿವೃದ್ಧಿಯೊಂದನ್ನೇ ಮಂತ್ರವಾಗಿಸಿಕೊಂಡು ಬಿಜೆಪಿ ಗುಜರಾತ್ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದೆ. ಆದರೆ, ಕಾಂಗ್ರೆಸ್ ಜಾತಿ ಹಾಗೂ ಧರ್ಮದ ಆಧಾರದ ಮೇಲೆ ಜನರನ್ನು ಒಡೆದು, ಮತಯಾಚಿಸುತ್ತಿದೆ. ಇದು ಕಾಂಗ್ರೆಸ್‌ಗೆ ಮುಳುವಾಗಲಿದೆ,' ಎಂದು ಶಾ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ