ಆ್ಯಪ್ನಗರ

ಕೋಲ್ಕೊತಾ ಮಂದಿರದಲ್ಲಿ ಅಮಿತಾಭ್‌ ಪ್ರತಿಮೆ

'ಸರ್ಕಾರ್‌ 3'ನಲ್ಲಿ ಬಚ್ಚನ್‌ ಹೇಗಿದ್ದಾರೆಂದು ನೋಡಲು ಕೋಲ್ಕೊತಾ ಜನ ಅಮಿತಾಭ್‌ ಮಂದಿರಕ್ಕೆ ಲಗ್ಗೆ ಇಡುತ್ತಿದ್ದಾರೆ.

ಟೈಮ್ಸ್ ಆಫ್ ಇಂಡಿಯಾ 13 May 2017, 12:54 pm
ಕೋಲ್ಕೊತಾ: 'ಸರ್ಕಾರ್‌ 3' ಚಿತ್ರದಲ್ಲಿ ಅಮಿತಾಭ್‌ ಬಚ್ಚನ್‌ ಹೇಗಿದ್ದಾರೆಂದು ನೋಡಲು ಕೋಲ್ಕೊತಾ ಜನ ಚಿತ್ರಮಂದಿರಗಳಿಗೆ ಹೋಗುತ್ತಿಲ್ಲ. ಬದಲಿಗೆ ಅಮಿತಾಭ್‌ ಮಂದಿರಕ್ಕೆ ಲಗ್ಗೆ ಇಡುತ್ತಿದ್ದಾರೆ.
Vijaya Karnataka Web amitabh bachchan gets his throne in kolkata temple
ಕೋಲ್ಕೊತಾ ಮಂದಿರದಲ್ಲಿ ಅಮಿತಾಭ್‌ ಪ್ರತಿಮೆ


'ಬಿಗ್‌ ಬಿ'ಗಾಗಿ ನಗರದಲ್ಲಿ ಸ್ಥಾಪಿಸಿರುವ ಮ್ಯೂಸಿಯಂ-ದೇಗುಲದಲ್ಲಿ ಅಖಿಲ ಬಂಗಾಳ ಅಮಿತಾಭ್‌ ಬಚ್ಚನ್‌ ಅಭಿಮಾನಿಗಳ ಸಂಘ ನಟನ ಆಳೆತ್ತೆರದ ಪ್ರತಿಮೆ ಅನಾವರಣಗೊಳಿಸಿದೆ.

'ಬಚ್ಚನ್‌ ನಮ್ಮ ಪಾಲಿನ ದೇವರೆಂದರೆ ತಪ್ಪಾಗದು. ನೆಚ್ಚಿನ ನಟನ ಆರಾಧನೆಗೆ ಪ್ರತಿಮೆ ನಿರ್ಮಿಸಲಾಗಿದೆ. ದೈವಿಕ ಶಕ್ತಿ ಇರುವವರಿಗಷ್ಟೇ ಇಂಥ ಚೈತನ್ಯ ಇರಲು ಸಾಧ್ಯ. ಐದು ದಶಕಗಳ ಕಾಲ ಜನರನ್ನು ಸಮ್ಮೋಹನಗೊಳಿಸಿದ್ದಾರೆ. ಇದಕ್ಕಾಗಿಯೇ ಅವರನ್ನು ದೇವರಂತೆ ಕಂಡು, ದೇಗುಲ ಕಟ್ಟಿ ಆರಾಧಿಸುತ್ತಿದ್ದೇವೆ,'ಎಂದು ಸಂಘಟನೆ ಮುಖ್ಯಸ್ಥ ರೋಹಿತ್‌ ಭುಟೋರಿಯಾ ಹೇಳಿದ್ದಾರೆ.

ಕಲಾವಿದ ಸುಬ್ರತಾ ಬೋಸ್‌ ಕಲ್ಪನೆ ಸರ್ಕಾರ್‌ ಅವತಾರದಲ್ಲಿರುವ ಬಚ್ಚನ್‌ ಪತ್ರಿಮೆ ರೂಪದಲ್ಲಿ ಅನಾವರಣಗೊಂಡಿದೆ. ಇದಲ್ಲದೇ, ನಟನ ಹಲವಾರು ಪ್ರತಿಮೆಗಳು ಮ್ಯೂಸಿಯಂನಲ್ಲಿವೆ. ಅಗ್ನಿಪತ್‌ ಚಿತ್ರದಲ್ಲಿ ಅಮಿತಾಭ್‌ ಧರಿಸಿರುವ ಬಿಳಿ ಶೂ ಸಹ ಇಲ್ಲಿದೆ. 'ಸನ್‌ಗ್ಲಾಸ್‌ ಹಾಗೂ ವಾಚ್‌ ಕೊಡುವುದಾಗಿ ಮಾತುಕೊಟ್ಟಿದ್ದಾರೆ. ತಿಂಗಳ ಕೊನೆಗೆ ಅವು ನಮ್ಮ ಕೈ ತಲುಪಬಹುದು,'ಎಂದು ಸಂಘದ ಪ್ರಧಾನ ಕಾರ್ಯದರ್ಶಿ ಕುಶಾಲ್‌ ದಾಸಗುಪ್ತ ಹೇಳಿದ್ದಾರೆ.

25 ಕೆ.ಜಿ. ತೂಕದ ಪ್ರತಿಮೆ ಮಾಡಲು ಬೋಸ್‌ಗೆ 3 ತಿಂಗಳು ಹಿಡಿದಿದೆ. ಆದರೆ, ಅಮಿತಾಭ್‌ ಈ ಪ್ರತಿಮೆಯನ್ನು ನೋಡಿಲ್ಲ. 'ಅವರಿಗೆ ಈ ವಿಷಯ ಗೊತ್ತು. ದೇಗುಲದಲ್ಲಿ ಅವರಿಗೆ ಪೂಜೆ ಮಾಡುವ ವೀಡಿಯೋ ನೋಡಿದ್ದಾರೆ. ಶೀಘ್ರದಲ್ಲೇ ಅವರನ್ನು ಇಲ್ಲಿಗೆ ಆಹ್ವಾನಿಸುತ್ತೇವೆ,'ಎಂದು ದಾಸಗುಪ್ತ ಹೇಳಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ