ಆ್ಯಪ್ನಗರ

ಬಂಗಾಳ ಕೊಲ್ಲಿಯ ಎರಡನೇ ಸೂಪರ್ ಚಂಡಮಾರುತ: ಹವಾಮಾನ ಇಲಾಖೆ ಮುಖ್ಯಸ್ಥ!

ಅಂಫಾನ್ ಚಂಡಮಾರುತವನ್ನು ಪ್ರಚಂಡ ಚಂಡಮಾರುತ ಎಂದು ಬಣ್ಣಿಸಿರುವ ಭಾರತೀಯ ಹಚಾಮಾನ ಇಲಾಖೆ ಮುಖ್ಯಸ್ಥ ಎಂ. ಮೋಹಾಪಾತ್ರ, 1999ರಲ್ಲಿ ಬಂಗಾಳ ಕೊಲ್ಲಿಯಲ್ಲಿ ಮೊದಲನೇ ಸೂಪರ್ ಚಂಡಮಾರುತ ಅಪ್ಪಳಿಸಿದ್ದನ್ನು ಸ್ಮರಿಸಿಕೊಂಡಿದ್ದಾರೆ.

Vijaya Karnataka Web 19 May 2020, 5:15 pm
ನವದೆಹಲಿ: ಕೊರೊನಾ ವೈರಸ್ ಹಾವಳಿಯ ನಡುವೆಯೇ ದೇಶಕ್ಕೆ ಅಂಫಾನ್ ಚಂಡಮಾರುತ ಅಪಾಯ ಎದುರಾಗಿದ್ದು, ಬಂಗಾಳ ಕೊಲ್ಲಿಯಲ್ಲಿ ಉದ್ಭವಿಸಿರುವ ಈ ಚಂಡಮಾರುತವನ್ನು ಎದುರಿಸಲು ಪಶ್ಚಿಮ ಬಂಗಾಳ ಹಾಗೂ ಒಡಿಶಾ ಸರ್ಕಾರ ಸಜ್ಜಾಗಿವೆ.
Vijaya Karnataka Web M. Mohapatra
ಐಎಂಡಿ ಮುಖ್ಯಸ್ಥ ಎಂ. ಮೋಹಾಪಾತ್ರ


ಇನ್ನು ಅಂಫಾನ್ ಚಂಡಮಾರುತವನ್ನು ಪ್ರಚಂಡ ಚಂಡಮಾರುತ ಎಂದು ಬಣ್ಣಿಸಿರುವ ಭಾರತೀಯ ಹಚಾಮಾನ ಇಲಾಖೆ ಮುಖ್ಯಸ್ಥ ಎಂ. ಮೋಹಾಪಾತ್ರ, 1999ರಲ್ಲಿ ಬಂಗಾಳ ಕೊಲ್ಲಿಯಲ್ಲಿ ಮೊದಲನೇ ಸೂಪರ್ ಚಂಡಮಾರುತ ಅಪ್ಪಳಿಸಿದ್ದನ್ನು ಸ್ಮರಿಸಿಕೊಂಡಿದ್ದಾರೆ.

ಈ ಕುರಿತು ಪ್ರತಿಕ್ರಿಯೆ ನೀಡಿರುವ ಎಂ. ಮೋಹಾಪಾತ್ರ, 1999ರ ಬಳಿಕ ಇದು ಎರಡನೇ ಬಾರಿ ಬಂಗಾಳ ಕೊಲ್ಲಿಯಲ್ಲಿ ಸೂಪರ್ ಚಂಡಮಾರುತ ನಿರ್ಮಾಣವಾಗಿದೆ ಎಂದು ಹೇಳಿದ್ದಾರೆ.

ಲಾಕ್‌ಡೌನ್ ನಡುವೆ ಅಂಫಾನ್ ಕಾಟ: 1 ಮಿಲಿಯನ್ ಜನರ ಸ್ಥಳಾಂತರಕ್ಕೆ ನಡೆದಿದೆ ಸಿದ್ಧತೆ!


ಸದ್ಯ ಸಮುದ್ರದಲ್ಲಿ ಅಂಫಾನ್ ಚಂಡಮಾರುತದ ಗಾಳಿಯ ವೇಗ 200-240 ಕಿ.ಮೀಯಷ್ಟಿದ್ದು, ಉತ್ತರ ವಾಯುವ್ಯ ದಿಕ್ಕಿನತ್ತ ಮುನ್ನುಗ್ಗುತ್ತಿದೆ ಎಂದು ಎಂ. ಮೋಹಾಪಾತ್ರ ಸ್ಪಷ್ಟಪಡಿಸಿದ್ದಾರೆ.

ಇನ್ನು ಅಂಫಾನ್ ಚಂಡಮಾರುತ ಪಶ್ಚಿಮ ಬಂಗಾಳದ ಉತ್ತರ ಮತ್ತು ದಕ್ಷಿಣ 24 ಪರಗಣ ಜಿಲ್ಲೆಗಳು, ಪೂರ್ವ ಮಿಡ್ನಾಪೂರ ಜಿಲ್ಲೆಗಳಲ್ಲಿ ಅತ್ಯಂತ ಹೆಚ್ಚು ಪ್ರಭಾವ ಬೀರಲಿದೆ ಎಂದು ಮೋಹಾಪಾತ್ರ ಅಭಿಪ್ರಾಯಪಟ್ಟಿದ್ದಾರೆ.

ಕೋಲ್ಕತ್ತಾ, ಹೂಗ್ಲಿ, ಹೌರಾ, ಹಾಗೂ ದಕ್ಷಿಣ ಮಿಡ್ನಾಪೂರ ಜಿಲ್ಲೆಗಳಲ್ಲಿ ಗಾಳಿಯ ವೇಗ 135 ಕಿ.ಮೀಯಷ್ಟು ಇರಲಿದೆ ಎಂದೂ ಹವಾಮಾನ ಇಲಾಖೆ ಮುಖ್ಯಸ್ಥ ಎಚ್ಚರಿಸಿದ್ದಾರೆ.

ಅಂಫಾನ್ ಚಂಡಮಾರುತದ ವಿರುದ್ಧದ ಹೋರಾಟಕ್ಕೆ 37 ಎನ್‌ಡಿಆರ್‌ಎಫ್ ತಂಡ ರೆಡಿ!

second super cyclone
ವಾಯುವ್ಯ ಬಂಗಾಳ ಕೊಲ್ಲಿಯ ಗುಂಟ ಉತ್ತರ ಈಶಾನ್ಯ ದಿಕ್ಕಿನಲ್ಲಿ ಸಾಗುವ ಅಂಫಾನ್ ಚಂಡಮಾರುತ, ಮೇ.20ರಂದು ಪಶ್ಚಿಮ ಬಂಗಾಳದ ದಿಘಾ ಹಾಗೂ ಬಾಂಗ್ಲಾದೇಶದ ಹತಿಯಾ ದ್ವೀಪಗಳತ್ತ ಚಲಿಸಲಿದೆ ಎಂದು ಮೋಹಾಪಾತ್ರ ಅಂದಾಜಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ