ಆ್ಯಪ್ನಗರ

ಅತ್ಯಾಚಾರಿಗೆ 3 ವಾರದೊಳಗೆ ಮರಣದಂಡನೆ : ಕಠಿಣ ಕಾನೂನು ಜಾರಿಗೆ ಆಂಧ್ರ ಸಿದ್ಧತೆ

ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳನ್ನು ತ್ವರಿತವಾಗಿ (21 ದಿನದೊಳಗೆ) ವಿಲೇವಾರಿ ಮಾಡಿ ಅಪರಾಧಿಗಳಿಗೆ ಮರಣದಂಡನೆ ಶಿಕ್ಷೆ ವಿಧಿಸಲು ಸಾಧ್ಯವಾಗಿಸುವ ಕರಡು ಮಸೂದೆಗೆ ಆಂಧ್ರಪ್ರದೇಶ ಸಚಿವ ಸಂಪುಟ ಬುಧವಾರ ಅಂಗೀಕಾರ ನೀಡಿದೆ.

Vijaya Karnataka Web 12 Dec 2019, 5:26 pm
ಅಮರಾವತಿ: ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳನ್ನು ತ್ವರಿತವಾಗಿ (21 ದಿನದೊಳಗೆ) ವಿಲೇವಾರಿ ಮಾಡಲು ಹಾಗೂ ಅಪರಾಧಿಗಳಿಗೆ ಮರಣದಂಡನೆ ಶಿಕ್ಷೆ ವಿಧಿಸಲು ಸಾಧ್ಯವಾಗಿಸುವ ಕರಡು ಮಸೂದೆಗೆ ಆಂಧ್ರಪ್ರದೇಶ ಸಚಿವ ಸಂಪುಟ ಬುಧವಾರ ಅಂಗೀಕಾರ ನೀಡಿದೆ.
Vijaya Karnataka Web jagan mohan reddy
ಜಗನ್‌ ಮೋಹನ್‌ ರೆಡ್ಡಿ


ಆಂಧ್ರ ಪ್ರದೇಶ ಮುಖ್ಯ ಮಂತ್ರಿ ಜಗನ್‌ ಮೋಹನ್‌ ರೆಡ್ಡಿ ಅವರ ಅಧ್ಯಕ್ಷತೆಯಲ್ಲಿ ಬುಧವಾರ ನಡೆದ ಸಂಪು ಸಭೆಯಲ್ಲಿ ದಿಶಾ ಪ್ರಕರಣ ಸೇರಿದಂತೆ ಮಹಿಳೆಯರ ವಿರುದ್ಧದ ಅಪರಾಧಗಳ ಕುರಿತು ಸಮಗ್ರ ಚರ್ಚೆ ನಡೆಸಲಾಗಿದೆ. ಈ ಅಪರಾಧಗಳ ತಡೆಗೆ ಸಂಬಂಧಿಸಿದಂತೆ ಮಹತ್ವದ ಹೊಸ ಕಠಿಣ ಕಾನೂನುಗಳನ್ನು ಜಾರಿಗೊಳಿಸುವ ನಿರ್ಧಾರ ಕೈಗೊಂಡಿದೆ.

ಈ ಹಿನ್ನೆಲಯಲ್ಲಿ ಆಂಂಧ್ರಪ್ರದೇಶ ದಿಶಾ ಕಾಯಿದೆ, ಆಂಧ್ರ ಪ್ರದೇಶ ಕ್ರಿಮಿನಲ್‌ ಕಾನೂನು (ತಿದ್ದುಪಡಿ) ಕಾಯಿದೆ -2019, ಎಪಿ ವಿಶೇಷ ನ್ಯಾಯಾಲಯ ಕಾಯಿದೆ-2019 ಹಾಗೂ 'ಮಕ್ಕಳ ಕಾಯಿದೆ-2109'. ಈ ಹೊಸ ಕಾಯಿದೆಗಳನ್ನು ಶೀಘ್ರದಲ್ಲೇ ಜಾರಿಗೆ ತರಲು ಆಂಧ್ರಪ್ರದೇಶ ಸರಕಾರ ಚಿಂತನೆ ನಡೆಸಿದೆ.

'ದಿಶಾ' ಎನ್‌ಕೌಂಟರ್‌ ಪ್ರಕರಣಕ್ಕೆ ಬಿಗ್‌ ಟ್ವಿಸ್ಟ್‌ : ಸ್ವತಂತ್ರ ತನಿಖೆಗೆ ಒಪ್ಪಿದ ಸುಪ್ರೀಂ

21 ದಿನದೊಳಗೆ ಅಪರಾಧಿಗೆ ಶಿಕ್ಷೆ
'ಎಪಿ ದಿಶಾ ಕಾಯಿದೆಯಡಿ, ಲೈಂಗಿಕ ದೌರ್ಜನ್ಯ ಪ್ರಕರಣದ ದೂರು ದಾಖಲಾದ ಒಂದು ವಾರದೊಳಗೆ (7 ದಿನ) ಪೊಲೀಸರು ತನಿಖೆ ಪೂರ್ಣಗೊಳಿಸಿ, ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಬೇಕು. ನಂತರ, ನ್ಯಾಯಾಲಯವು 14 ದಿನಗಳೊಳಗೆ ವಿಚಾರಣೆ ಪೂರ್ಣಗೊಳಿಸಿ, ಅಪರಾಧಿಗೆ ಶಿಕ್ಷೆ ವಿಧಿಸಬೇಕು. ಒಟ್ಟಾರೆ 21 ದಿನಗಳೊಳಗೆ ಲೈಂಗಿಕ ದೌರ್ಜನ್ಯ ಪ್ರಕರಣಗಳು ವಿಲೇವಾರಿಯಾಗಬೇಕು ಎಂಬುದು ಹೊಸ ಕರಡು ಮಸೂದೆಯ ಮುಖ್ಯಾಂಶ.


ಮಹಿಳೆಯರಿಗೆ ರಕ್ಷಣೆ ಹೆಚ್ಚಿಸುವ ಕಾನೂನುಗಳ ಜಾರಿಗೆ ಕ್ರಮ ಕೈಗೊಂಡ ಹಿನ್ನೆಲೆಯಲ್ಲಿ, ಆಂಧ್ರಪ್ರದೇಶದ ಮಹಿಳಾ ಶಾಸಕಿಯರು, ಮುಖ್ಯಮಂತ್ರಿ ಜಗನ್‌ ಮೋಹನ್‌ ರೆಡ್ಡಿಗೆ ರಾಖಿ ಕಟ್ಟುವ ಮೂಲಕ ಅಭಿನಂದಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ