ಆ್ಯಪ್ನಗರ

ರಾಜಸ್ಥಾನ ಆಯ್ತು, ಆಂಧ್ರ ಪ್ರದೇಶದಲ್ಲೂ ತೈಲ ಬೆಲೆ ಇಳಿಕೆ

ಪೆಟ್ರೋಲ್‌ ಮತ್ತು ಡೀಸೆಲ್‌ ಮೇಲಿನ ವ್ಯಾಟ್‌ ಅನ್ನು ರಾಜಸ್ಥಾನ ಸರಕಾರವು ಶೇ. 4ರಷ್ಟು ಇಳಿಕೆ ಮಾಡಿದ್ದು, ಅದರ ಬೆನ್ನಲ್ಲೇ ಆಂ‍ಧ್ರ ಪ್ರದೇಶ ಸಿಎಂ ಚಂದ್ರಬಾಬು ನಾಯ್ಡು ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ತೆರಿಗೆಯನ್ನು ಪ್ರತಿ ಲೀ. 2 ರೂ ಕಡಿಮೆ ಮಾಡಿದ್ದಾರೆ.

Vijaya Karnataka Web 10 Sep 2018, 7:31 pm
ಅಮರಾವತಿ: ತೈಲ ಬೆಲೆ ಏರಿಕೆ ವಿರೋಧಿಸಿ ಬಂದ್ ನಡೆಸುತ್ತಿರುವಂತೆಯೇ ಪೆಟ್ರೋಲ್‌ ಮತ್ತು ಡೀಸೆಲ್‌ ಮೇಲಿನ ವ್ಯಾಟ್‌ ಅನ್ನು ರಾಜಸ್ಥಾನ ಸರಕಾರವು ಶೇ. 4ರಷ್ಟು ಇಳಿಕೆ ಮಾಡಿದ್ದು, ಅದರ ಬೆನ್ನಲ್ಲೇ ಆಂ‍ಧ್ರ ಪ್ರದೇಶ ಸಿಎಂ ಚಂದ್ರಬಾಬು ನಾಯ್ಡು ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ತೆರಿಗೆಯನ್ನು ಪ್ರತಿ ಲೀಟರ್‌ಗೆ 2 ರೂ ಕಡಿಮೆ ಮಾಡಿದ್ದಾರೆ.
Vijaya Karnataka Web Andhra Pradesh Chief Minister N Chandrababu Naidu


ರಾಜಸ್ಥಾನ ಸಿಎಂ ವಸುಂಧರಾ ರಾಜೆ ಅವರು ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಪ್ರಸ್ತುತ ಶೇ. 30ರಷ್ಟಿರುವ ವ್ಯಾಟ್‌ ಅನ್ನು ಶೇ. 26ಕ್ಕೆ ಇಳಿಕೆ ಮಾಡಿದ್ದರು. ಇದರಿಂದ ಪ್ರತಿ ಲೀ. ತೈಲಕ್ಕೆ 2.50 ರೂ. ದರ ಇಳಿಕೆಯಾಗಿತ್ತು. ಆದರೆ ಸರಕಾರಕ್ಕೆ ವಾರ್ಷಿಕ 2000 ಕೋಟಿ ರೂ. ಹೊರೆಯಾಗಲಿದೆ.
ರಾಜಸ್ಥಾನದಲ್ಲೂ ತೈಲ ಬೆಲೆ ಇಳಿಕೆ

ಚಂದ್ರಬಾಬು ನಾಯ್ಡು ಕೂಡ ವ್ಯಾಟ್ ದರ ಇಳಿಕೆ ಮಾಡಿರುವುದರಿಂದ ಆಂಧ್ರ ಪ್ರದೇಶ ಸರಕಾರಕ್ಕೆ ವಾರ್ಷಿಕ 1,120 ಕೋಟಿ ರೂ. ಹೊರೆ ಬೀಳಲಿದೆ. ಮತ್ತೊಂದೆಡೆ ಕೇಂದ್ರ ಸರಕಾರ ಪೆಟ್ರೋಲ್, ಡೀಸೆಲ್ ಬೆಲೆ ಕಡಿಮೆ ಮಾಡಲು ಯಾವುದೇ ಕ್ರಮ ತೆಗೆದುಕೊಂಡಿಲ್ಲ ಎಂದು ಟೀಕಿಸಿದ್ದಾರೆ.

ಮಹಾರಾಷ್ಟ್ರದಲ್ಲೂ ಇಂಧನ ದರ ಇಳಿಕೆಯ ಮಾರ್ಗಗಳ ಬಗ್ಗೆ ಚಿಂತನೆ ನಡೆಸಿರುವುದಾಗಿ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್‌ ಹೇಳಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ