ಆ್ಯಪ್ನಗರ

ಶೀಘ್ರದಲ್ಲೇ ಹೊಸ ಪಕ್ಷ ಕಟ್ಟಲಿದ್ದಾರೆ ಆಂಧ್ರ ಸಿಎಂ ಜಗನ್‌ ರೆಡ್ಡಿ ಸೋದರಿ ಶರ್ಮಿಳಾ!

​​ಈ ಬಗ್ಗೆ ಶರ್ಮಿಳಾ ಅವರ ತಾಯಿ ವೈ.ಎಸ್‌. ವಿಜಯಲಕ್ಷ್ಮಿ ಅವರು ಖಾತ್ರಿಪಡಿಸಿದ್ದು, ''ತಂದೆಯಂತೆಯೇ ಧೈರ್ಯವಾಗಿ ರಾಜಕೀಯ ಪ್ರವೇಶಿಸಿ ತೆಲಂಗಾಣ ಜನರ ಸೇವೆ ಮಾಡುವುದು ಮಗಳ ಗುರಿಯಾಗಿದೆ,'' ಎಂದಿದ್ದಾರೆ. ಶರ್ಮಿಳಾ ಅವರು ಶುಕ್ರವಾರ ಹೈದರಾಬಾದ್‌ನಿಂದ ಗಡಿ ಜಿಲ್ಲೆಯಾದ ಖಮ್ಮಂವರೆಗೆ ಬೃಹತ್‌ ಕಾರು ರಾರ‍ಯಲಿ ನಡೆಸಿ, ಬಳಿಕ ಬೆಂಬಲಿಗರ ಜತೆ 'ಸಂಕಲ್ಪ ಸಭೆ' ನಡೆಸಿದ್ದರು.

Vijaya Karnataka 11 Apr 2021, 7:10 am
ಹೈದರಾಬಾದ್‌: ಆಂಧ್ರಪ್ರದೇಶ ಮುಖ್ಯಮಂತ್ರಿ ವೈ.ಎಸ್‌. ಜಗನ್‌ಮೋಹನ್‌ ರೆಡ್ಡಿ ಅವರ ಸೋದರಿ ವೈ.ಎಸ್‌. ಶರ್ಮಿಳಾ ರೆಡ್ಡಿ ಅವರು ಹೊಸ ಪಕ್ಷ ಸ್ಥಾಪಿಸುವ ನಿರ್ಧಾರ ಪ್ರಕಟಿಸಿದ್ದಾರೆ. ತಮ್ಮ ತಂದೆ ಹಾಗೂ ಮಾಜಿ ಸಿಎಂ ಡಾ. ವೈ.ಎಸ್‌. ರಾಜಶೇಖರ ರೆಡ್ಡಿ ಅವರ ಜನ್ಮದಿನದ ಅಂಗವಾಗಿ ಜುಲೈ 8ರಂದು ತೆಲಂಗಾಣದಲ್ಲಿ ನಡೆಯುವ ಅದ್ಧೂರಿ ಕಾರ್ಯಕ್ರಮದಲ್ಲಿ ಹೊಸ ಪಕ್ಷದ ಹೆಸರು ಮತ್ತು ಲಾಂಛನವನ್ನು ಘೋಷಿಸಲಿದ್ದಾರೆ.
Vijaya Karnataka Web andhra cm


ಈ ಬಗ್ಗೆ ಶರ್ಮಿಳಾ ಅವರ ತಾಯಿ ವೈ.ಎಸ್‌. ವಿಜಯಲಕ್ಷ್ಮಿ ಅವರು ಖಾತ್ರಿಪಡಿಸಿದ್ದು, ''ತಂದೆಯಂತೆಯೇ ಧೈರ್ಯವಾಗಿ ರಾಜಕೀಯ ಪ್ರವೇಶಿಸಿ ತೆಲಂಗಾಣ ಜನರ ಸೇವೆ ಮಾಡುವುದು ಮಗಳ ಗುರಿಯಾಗಿದೆ,'' ಎಂದಿದ್ದಾರೆ. ಶರ್ಮಿಳಾ ಅವರು ಶುಕ್ರವಾರ ಹೈದರಾಬಾದ್‌ನಿಂದ ಗಡಿ ಜಿಲ್ಲೆಯಾದ ಖಮ್ಮಂವರೆಗೆ ಬೃಹತ್‌ ಕಾರು ರಾರ‍ಯಲಿ ನಡೆಸಿ, ಬಳಿಕ ಬೆಂಬಲಿಗರ ಜತೆ 'ಸಂಕಲ್ಪ ಸಭೆ' ನಡೆಸಿದ್ದರು. ಇದರ ಬೆನ್ನಲ್ಲಿಯೇ ಮಹತ್ವದ ಘೋಷಣೆ ಹೊರಬಿದ್ದಿರುವುದು ಆಂಧ್ರಪ್ರದೇಶ ಮತ್ತು ತೆಲಂಗಾಣ ರಾಜಕೀಯದಲ್ಲಿ ಭಾರಿ ಕುತೂಹಲ ಸೃಷ್ಟಿಸಿದೆ.

ರಾಜಕೀಯದಲ್ಲಿ ಸಕ್ರಿಯವಾಗಿ ಭಾಗಿಯಾಗುವೆ ಎಂದು ಕೆಲ ತಿಂಗಳ ಹಿಂದೆ ಸಾರ್ವಜನಿಕ ಸಭೆಯೊಂದ ರಲ್ಲಿ ಶರ್ಮಿಳಾ ಅವರು ಘೋಷಿಸಿದ್ದ ಬೆನ್ನಿಗೇ ಆಂಧ್ರ ಸಿಎಂ ಜಗನ್‌ಮೋಹನ್‌ ಅವರು ಅಂತರ ಕಾಯ್ದುಕೊಂಡಿದ್ದರು. 2023ರಲ್ಲಿ ತೆಲಂಗಾಣದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ. ''ಆಂಧ್ರಪ್ರದೇಶಕ್ಕೆ ಜಗನ್‌, ತೆಲಂಗಾಣಕ್ಕೆ ಶರ್ಮಿಳಾ ಎನ್ನುವುದು ಈ ಕುಟುಂಬದ ನಿರ್ಧಾರವಾಗಿರಬಹುದು,'' ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.

ಕಾಶಿಯ ವಿವಾದಕ್ಕಿಂತ 2024ಕ್ಕೆ ರಾಮ ಮಂದಿರ ಪೂರ್ಣವೇ ಮುಖ್ಯ: ವಿಎಚ್‌ಪಿ

ಮೂವರೂ ಎದುರಾಳಿಗಳು: ಈಗಾಗಲೇ ತಮ್ಮ ಹೊಸ ರಾಜಕೀಯ ಪಕ್ಷದ ಉದ್ದೇಶವನ್ನು ಕೆಲವು ಸಭೆಗಳಲ್ಲಿ ಶರ್ಮಿಳಾ ಅವರು ಸ್ಪಷ್ಟಪಡಿಸಿದ್ದಾರೆ. ಕೇವಲ ಆಡಳಿತಾರೂಢ ತೆಲಂಗಾಣ ರಾಷ್ಟ್ರೀಯ ಸಮಿತಿ (ಧಿಟಿಧಿಆರ್‌ಎಸ್‌) ಒಂದೇ ಅಲ್ಲದೇ, ಕಾಂಗ್ರೆಸ್‌ ಹಾಗೂ ಬಿಜೆಪಿ ಸೇರಿದಂತೆ ಮೂರೂ ಪಕ್ಷಗಳು ತಮಗೆ ಎದುರಾಳಿ ಎಂದಿದ್ದಾರೆ.

ತಮ್ಮ ರಾಜಕೀಯ ಜೀವನದ ಮೊದಲ ಪ್ರಮುಖ ಹೆಜ್ಜೆಯಾಗಿ ಏ.15 ರಂದು ಶರ್ಮಿಳಾ ಅವರು ಮೂರು ದಿನಗಳವರೆಗೆ ಸತ್ಯಾಗ್ರಹ ನಡೆಸಲಿದ್ದಾರೆ. ಟಿರ್‌ಎಸ್‌ ಸರಕಾರ ಖಾಲಿಯಿರುವ 1.91 ಲಕ್ಷ ಸರಕಾರಿ ಉದ್ಯೋಗಗಳನ್ನು ಶೀಘ್ರ ಭರ್ತಿ ಮಾಡಬೇಕು ಎಂದು ಅವರ ಆಗ್ರಹಿಸಲಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ