ಆ್ಯಪ್ನಗರ

ಅಭಿನಂದನ್ ಹೊಡೆದುರುಳಿಸಿದ F16 ಪೈಲಟ್‌ನನ್ನು ಭಾರತೀಯ ಎಂದು ಭ್ರಮಿಸಿ ಹೊಡೆದು ಕೊಂದ ಪಾಕಿಗಳು

ಪಾಕ್‌ ಸರಕಾರವೂ ಆರಂಭದಲ್ಲಿ ಎಫ್‌-16 ಪೈಲಟ್‌ನನ್ನು ಗುರುತಿಸಲಾರದೆ ಭಾರತೀಯನೇ ಎಂದು ತಿಳಿದಿತ್ತು. ಹೀಗಾಗಿಯೇ ಆರಂಭದಲ್ಲಿ ಇಬ್ಬರು ಭಾರತೀಯ ವಾಯುಪಡೆಯ ಪೈಲಟ್‌ಗಳು ತನ್ನ ವಶದಲ್ಲಿರುವುದಾಗಿ ಪಾಕ್‌ ಹೇಳಿತ್ತು. ಬಳಿಕ ಪಾಕಿಸ್ತಾನದ ಅಧಿಕಾರಿಗಳಿಗೆ ವಿಷಯ ಮನದಟ್ಟಾಗುತ್ತಿದ್ದಂತೆ, ಭಾರತದ ಅಭಿನಂದನ್‌ ಮಾತ್ರ ತಮ್ಮ ವಶದಲ್ಲಿ ಇದ್ದಿರುವುದಾಗಿ ಪಾಕ್‌ ಹೇಳಿಕೆ ಬದಲಿಸಿತ್ತು.

Vijaya Karnataka Web 3 Mar 2019, 10:21 am
ಹೊಸದಿಲ್ಲಿ: ಭಾರತದ ಮೇಲೆ ದಾಳಿ ನಡೆಸಲು ಬಂದಿದ್ದ ಪಾಕಿಸ್ತಾನದ ಎಫ್‌-16 ಯುದ್ಧ ವಿಮಾನದ ಪೈಲಟ್‌ನನ್ನು ಭಾರತೀಯನೆಂದು ತಿಳಿದು ಅಲ್ಲಿನ ಸ್ಥಳೀಯರೇ ಥಳಿಸಿ ಕೊಂದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
Vijaya Karnataka Web Air Surgial strike


ಭಾರತದ ವಾಯು ಪ್ರದೇಶ ಪ್ರವೇಶಿಸಿದ್ದ ಎಫ್‌-16 ಅನ್ನು ಭಾರತೀಯ ವಾಯುಪಡೆ ವಿಂಗ್‌ ಕಮಾಂಡರ್‌ ಅಭಿನಂದನ್‌ ಹೊಡೆದುರುಳಿಸಿದ್ದರು. ಈ
ವೇಳೆ ಎಫ್‌-16 ಪೈಲಟ್‌ ಪ್ಯಾರಾಚ್ಯೂಟ್‌ ನೆರವಿನಿಂದ ವಿಮಾನದಿಂದ ಕೆಳಗೆ ಹಾರಿದ್ದ. ಅರೆಪ್ರಜ್ಞಾವಸ್ಥೆಯಲ್ಲಿ ಕೆಳಗೆ ಬಿದ್ದ ಆತನನ್ನು ಭಾರತೀಯ ಪೈಲಟ್‌ ಎಂದು ಭಾವಿಸಿದ ಸ್ಥಳೀಯರು ಮಾರಣಾಂತಿಕವಾಗಿ ಥಳಿಸಿದ್ದರು. ಆತ ಪಾಕಿಸ್ತಾನಿ ಪೈಲಟ್‌ ಎಂದು ತಿಳಿಯುವಷ್ಟರಲ್ಲಿ ಕೊನೆಯುಸಿರೆಳೆದಿದ್ದ.


ಪಾಕ್‌ ಸರಕಾರವೂ ಆರಂಭದಲ್ಲಿ ಎಫ್‌-16 ಪೈಲಟ್‌ನನ್ನು ಗುರುತಿಸಲಾರದೆ ಭಾರತೀಯನೇ ಎಂದು ತಿಳಿದಿತ್ತು. ಹೀಗಾಗಿಯೇ ಆರಂಭದಲ್ಲಿ ಇಬ್ಬರು
ಭಾರತೀಯ ವಾಯುಪಡೆಯ ಪೈಲಟ್‌ಗಳು ತನ್ನ ವಶದಲ್ಲಿರುವುದಾಗಿ ಪಾಕ್‌ ಹೇಳಿತ್ತು. ಬಳಿಕ ಪಾಕಿಸ್ತಾನದ ಅಧಿಕಾರಿಗಳಿಗೆ ವಿಷಯ ಮನದಟ್ಟಾಗುತ್ತಿದ್ದಂತೆ, ಭಾರತದ ಅಭಿನಂದನ್‌ ಮಾತ್ರ ತಮ್ಮ ವಶದಲ್ಲಿ ಇದ್ದಿರುವುದಾಗಿ ಪಾಕ್‌ ಹೇಳಿಕೆ ಬದಲಿಸಿತ್ತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ