ಆ್ಯಪ್ನಗರ

ಕಪ್ಪೆ ಮದುವೆ ತಡೆಯುವಂತೆ ಪೊಲೀಸ್ ಠಾಣೆಯಲ್ಲಿ ದೂರು

ಕಪ್ಪೆ ಮದುವೆ ಮಾಡಿಸಿದ ಆರೋಪದ ಮೇಲೆ ಮಧ್ಯಪ್ರದೇಶದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಹಾಯಕ ಸಚಿವೆಯ ವಿರುದ್ಧ ಸ್ವಯಂ ಸೇವಾ ಸಂಸ್ಥೆಯೊಂದು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದೆ.

TIMESOFINDIA.COM 26 Jun 2018, 3:44 pm
ಭೋಪಾಲ್: ಕಪ್ಪೆ ಮದುವೆ ಮಾಡಿಸಿದ ಆರೋಪದ ಮೇಲೆ ಮಧ್ಯಪ್ರದೇಶದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಹಾಯಕ ಸಚಿವೆಯ ವಿರುದ್ಧ ಸ್ವಯಂ ಸೇವಾ ಸಂಸ್ಥೆಯೊಂದು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದೆ.
Vijaya Karnataka Web Frog


ಮಳೆ ದೇವರನ್ನು (ವರುಣ) ಮೆಚ್ಚಿಸಲು ಛತರ್ಪುರದ ದೇವಸ್ಥಾನವೊಂದರಲ್ಲ ಕಪ್ಪೆ ಮದುವೆಯನ್ನು ಆಯೋಜಿಸಲಾಗಿತ್ತು. ಸಚಿವೆ ಲಲಿತಾ ಯಾದವ್ ಸೇರಿದಂತೆ ನೂರಾರು ಜನರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಈ ಕೃತ್ಯವನ್ನು ಕ್ರೂರತೆ ಎಂದು ಬಣ್ಣಿಸಿರುವ ಪ್ರಾಣಿ ಹಕ್ಕುಗಳ ಹೋರಾಟ ಸಂಸ್ಥೆ ಕಾರ್ಯಕರ್ತ ನರೇಶ್ ಕದ್ಯಾನ್, ಬಲವಂತವಾಗಿ ಕಪ್ಪೆ ಮದುವೆ ನಡೆಯುತ್ತಿದ್ದರೆ ತಡೆಯಬೇಕು ಮತ್ತು ಕೋರ್ಟ್ ವಿಚಾರಣೆ (ಕಪ್ಪೆ ಮದುವೆ ತಡೆ ಕುರಿತ) ಮುಗಿಯುವವರೆಗೆ ಅವನ್ನು ಸಾಕ್ಷ್ಯವಾಗಿಟ್ಟುಕೊಳ್ಳಬೇಕು ಎಂದು ದೂರಿನಲ್ಲಿ ಕೇಳಿಕೊಂಡಿದ್ದಾರೆ.

ಮದುವೆ ಮಾಡುವುದರ ಮೂಲಕ ಕಪ್ಪೆಯ ಮೇಲೆ ಕ್ರೌರ್ಯ ಮೆರೆದಿರುವ ಆಯೋಜಕರ ಮೇಲೆ ಮತ್ತು ಕಾರ್ಯಕ್ರಮದಲ್ಲಿ ಹಾಜರಿದ್ದ ಸಚಿವೆ ವಿರುದ್ಧ ಪ್ರಾಣಿ ದಯಾ ಸಂಸ್ಥೆ ಸದಸ್ಯರು ಕಿಡಿಕಾರಿದ್ದಾರೆ. ಸಚಿವೆಗೆ ಕನಿಷ್ಠ 3 ವರ್ಷ ಜೈಲು ಶಿಕ್ಷೆ ನೀಡಬೇಕು ಎಂದು ಆಗ್ರಹಿಸಿರುವ ಅವರು, ಸೂಕ್ತ ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರಲ್ಲಿ ಮನವಿ ಮಾಡಿಕೊಂಡಿದ್ದಾರೆ.

ಎರಡು ಕಪ್ಪೆಗಳಿಗೆ ಮದುವೆ ನೆಪದಲ್ಲಿ ಹಿಂಸೆ ನೀಡಲಾಯಿತು. ಇದು ಪ್ರಾಣಿ ಹಿಂಸೆ ತಡೆ ಕಾಯಿದೆ 1960ರ ಸೆಕ್ಷನ್ 3 ಮತ್ತು 11ರ ಉಲ್ಲಂಘನೆಯಾಗಿದೆ ಎಂದು ಕದ್ಯಾನ್ ಹೇಳಿದ್ದಾರೆ.

ಮುಂಗಾರು ಮಳೆ ವಿಳಂಬವಾದರೆ ವರುಣ ದೇವನನ್ನು ಮೆಚ್ಚಿಸಲು ಕಪ್ಪೆ ಮದುವೆಯಂತ ವಿಲಕ್ಷಣ ಆಚರಣೆ ಮಧ್ಯಪ್ರದೇಶದಲ್ಲಿ ಸಾಮಾನ್ಯವಾಗಿದೆ.

ಶುಕ್ರವಾರ ಛತರ್ಪುರದಲ್ಲಿ ಆಯೋಜಿಸಲಾಗಿದ್ದ ಮದುವೆಯಲ್ಲಿ ಉಪಸ್ಥಿತರಿದ್ದ ಸಚಿವೆ ಲಲಿತಾ ಯಾದವ್, ನವದಂಪತಿಗೆ ಆಶೀರ್ವಾದ ಮಾಡಿ, ಈ ಮದುವೆಯಿಂದ ಹರ್ಷಿತರಾಗಿ ವರುಣದೇವ ಮಧ್ಯಪ್ರದೇಶದ ಮೇಲೆ ಕರುಣೆ ತೋರಲಿದ್ದಾನೆ, ಎಂದು ಆಶಿಸಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ