ಮುಂಬಯಿ: ಸಾಮಾಜಿಕ ಹೋರಾಟಗಾರ ಅಣ್ಣಾ ಹಜಾರೆ (81) ಅವರು ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದಾರೆ. ಅವರ ಮೆದುಳಿಗೆ ರಕ್ತ ಪೂರೈಕೆಯ ಕೊರತೆ ಉಂಟಾಗಿದೆ. ಇದರಿಂದಾಗಿ ಶಕ್ತಿ ಹೀನತೆ, ನರದೌರ್ಬಲ್ಯಮತ್ತಿತರ ತೊಂದರೆಗಳು ಕಂಡುಬಂದಿವೆ ಎಂದು ಹಜಾರೆ ಅವರಿಗೆ ಚಿಕಿತ್ಸೆ ನೀಡುತ್ತಿರುವ ಡಾ. ಬಾಪು ಕಂದೇಕರ್ ಹೇಳಿದ್ದಾರೆ. ಭ್ರಷ್ಟಾಚಾರ ವಿರೋಧಿ ಹೋರಾಟದ ಮೂಲಕ ಗಮನ ಸೆಳೆದಿದ್ದ ಹಜಾರೆ, ಲೋಕಪಾಲ ವಿಧೇಯಕ ಜಾರಿ, ಲೋಕಪಾಲರ ನೇಮಕಕ್ಕಾಗಿ ಕೆಲ ದಿನಗಳ ಹಿಂದಷ್ಟೇ ಏಳು ದಿನಗಳ ಕಾಲ ಉಪವಾಸ ಸತ್ಯಾಗ್ರಹ ನಡೆಸಿದ್ದರು. ತಮ್ಮ ಸ್ವಗ್ರಾಮ ರಾಳೇಗಣಸಿದ್ದಿಯಲ್ಲಿ ವಾಸವಿದ್ದ ಹಜಾರೆ ಅವರಿಗೆ ಮಹಾರಾಷ್ಟ್ರ ಅಹಮದ್ನಗರ ಜಿಲ್ಲೆಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಅಣ್ಣಾ ಹಜಾರೆ ಅಸ್ವಸ್ಥ; ಆಸ್ಪತ್ರೆಗೆ ದಾಖಲು
ಭ್ರಷ್ಟಾಚಾರ ವಿರೋಧಿ ಹೋರಾಟದ ಮೂಲಕ ಗಮನ ಸೆಳೆದಿದ್ದ ಹಜಾರೆ, ಲೋಕಪಾಲ ವಿಧೇಯಕ ಜಾರಿ, ಲೋಕಪಾಲರ ನೇಮಕಕ್ಕಾಗಿ ಕೆಲ ದಿನಗಳ ಹಿಂದಷ್ಟೇ ಏಳು ದಿನಗಳ ಕಾಲ ಉಪವಾಸ ಸತ್ಯಾಗ್ರಹ ನಡೆಸಿದ್ದರು.
Vijaya Karnataka 15 Feb 2019, 5:00 am