ಆ್ಯಪ್ನಗರ

ಎನ್‌ಜಿಟಿ ಅಧ್ಯಕ್ಷ ರ ನೇಮಕ ಜಟಾಪಟಿ: ಬಿಜೆಪಿ-ಎಲ್‌ಜೆಪಿ ಮೈತ್ರಿಭಂಗ?

ರಾಷ್ಟ್ರೀಯ ಹಸಿರು ನ್ಯಾಯಾಧಿಕರಣದ(ಎನ್‌ಜಿಟಿ) ಅಧ್ಯಕ್ಷ ರಾಗಿ ಸುಪ್ರೀಂ ಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ಎ.ಕೆ.ಗೋಯೆಲ್‌ ಅವರ ನೇಮಕವು ಬಿಜೆಪಿ ಮತ್ತು ಎನ್‌ಡಿಎ ಮೈತ್ರಿಪಕ್ಷ ಎಲ್‌ಜೆಪಿ ನಡುವೆ ವೈಮನಸ್ಸು ಸೃಷ್ಟಿಗೆ ಕಾರಣವಾಗಿದೆ.

Vijaya Karnataka 28 Jul 2018, 9:46 am
ಹೊಸದಿಲ್ಲಿ: ರಾಷ್ಟ್ರೀಯ ಹಸಿರು ನ್ಯಾಯಾಧಿಕರಣದ(ಎನ್‌ಜಿಟಿ) ಅಧ್ಯಕ್ಷ ರಾಗಿ ಸುಪ್ರೀಂ ಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ಎ.ಕೆ.ಗೋಯೆಲ್‌ ಅವರ ನೇಮಕವು ಬಿಜೆಪಿ ಮತ್ತು ಎನ್‌ಡಿಎ ಮೈತ್ರಿಪಕ್ಷ ಎಲ್‌ಜೆಪಿ ನಡುವೆ ವೈಮನಸ್ಸು ಸೃಷ್ಟಿಗೆ ಕಾರಣವಾಗಿದೆ.
Vijaya Karnataka Web ರಾಮ ವಿಲಾಸ್‌ ಪಾಸ್ವಾನ್‌


ಆ.9ರೊಳಗೆ ನ್ಯಾ.ಗೋಯೆಲ್‌ ಅವರ ನೇಮಕ ರದ್ದುಗೊಳಿಸದಿದ್ದರೆ ಲೋಕ ಜನಶಕ್ತಿ ಪಕ್ಷ ವು(ಎಲ್‌ಜೆಪಿ) ದಲಿತ ಸಂಘಟನೆಗಳು ಮುಂದಿನ ತಿಂಗಳು ನಡೆಸಲಿರುವ ಸರಕಾರ ವಿರೋಧಿ ಪ್ರತಿಭಟನೆಗೆ ಸಾಥ್‌ ನೀಡಲಿದೆ ಎಂದು ಪಕ್ಷದ ವರಿಷ್ಠ ಹಾಗೂ ಕೇಂದ್ರ ಸಚಿವ ರಾಮ ವಿಲಾಸ್‌ ಪಾಸ್ವಾನ್‌ ಗುಡುಗಿದ್ದಾರೆ. ರಾಮ್‌ ವಿಲಾಸ್‌ ಪುತ್ರ ಚಿರಾಗ್‌ ಪಾಸ್ವಾನ್‌ ಸಹ ತಂದೆಯ ಮಾತಿಗೆ ಧ್ವನಿಗೂಡಿಸಿದ್ದಾರೆ. ಇದರೊಂದಿಗೆ, ಟಿಡಿಪಿ ನಿರ್ಗಮನದ ಬಳಿಕ ಎನ್‌ಡಿಎ ಮೈತ್ರಿಕೂಟಕ್ಕೆ ಮತ್ತೊಂದು ಸಂಕಷ್ಟ ಎದುರಾಗಿದೆ.

''ಎನ್‌ಡಿಎಗೆ ನಮ್ಮ ಬೆಂಬಲವು ವಿಷಯಾಧಾರಿತವಾಗಿದೆ. ಆದರೆ, ಟಿಡಿಪಿಯಂತೆ ಎಲ್‌ಜೆಪಿಯು ಮೈತ್ರಿಕೂಟವನ್ನು ತೊರೆಯುವುದಿಲ್ಲ. ಸರಕಾರದ ಭಾಗವಾಗಿದ್ದುಕೊಂಡೇ ನಾವು ದಲಿತರ ಹಕ್ಕುಗಳಿಗಾಗಿ ಹೋರಾಡುತ್ತೇವೆ. ದಲಿತರು ಮತ್ತು ಬುಡಕಟ್ಟು ಸಮುದಾಯದ ಸ್ಥಿತಿಯನ್ನು ಕಂಡು ನಮ್ಮ ಸಹನೆಯು ಕ್ಷೀಣಿಸುತ್ತಿದೆ. ಪ್ರಧಾನಿ ಮೋದಿ ಅವರು ನಮ್ಮ ಬೇಡಿಕೆಗಳನ್ನು ಈಡೇರಿಸುತ್ತಾರೆ ಎಂದು ಆಶಿಸಿದ್ದೇವೆ,'' ಎಂದು ಚಿರಾಗ್‌ ಪಾಸ್ವಾನ್‌ ಹೇಳಿದ್ದಾರೆ.

ರಾಮ ವಿಲಾಸ ಪಾಸ್ವಾನ್‌ ಮತ್ತು ಚಿರಾಗ್‌ ಅವರು ಎನ್‌ಜಿಟಿ ಅಧ್ಯಕ್ಷ ಹುದ್ದೆಯಿಂದ ನ್ಯಾ.ಗೋಯಲ್‌ ಅವರನ್ನು ವಜಾಗೊಳಿಸುವಂತೆ ಆಗ್ರಹಿಸಿ ಬುಧವಾರ ಮೋದಿಯವರಿಗೆ ಪ್ರತ್ಯೇಕ ಪತ್ರಗಳನ್ನು ಬರೆದಿದ್ದರು.

ವಿರೋಧವೇಕೆ?

ನ್ಯಾ.ಗೋಯಲ್‌ ನೇತೃತ್ವದ ಸುಪ್ರೀಂ ಕೋರ್ಟ್‌ ದ್ವಿಸದಸ್ಯ ಪೀಠವು 'ಪರಿಶಿಷ್ಟ ಜಾತಿ ಮತ್ತು ಪ.ಪಂಗಡಗಳ (ದೌರ್ಜನ್ಯ ತಡೆ) ಕಾಯಿದೆ' ಕುರಿತಾಗಿ ನೀಡಿದ ತೀರ್ಪಿನಿಂದ ದಲಿತರ ವಿರುದ್ಧ ದೌರ್ಜನ್ಯ ಹೆಚ್ಚಾಗಿದೆ ಎಂದು ಎಲ್‌ಜೆಪಿ ಆರೋಪಿಸಿದೆ. ಈ ನ್ಯಾಯಪೀಠವು ಕಾಯಿದೆಯನ್ನು ದುರ್ಬಲಗೊಳಿಸಿದ್ದು, ತಲಿತರಿಗೆ ರಕ್ಷಣೆ ಇಲ್ಲದಂತಾಗಿದೆ. ಹೀಗಾಗಿ ನ್ಯಾ. ಗೋಯಲ್‌ ಅವರ ನೇಮಕ ಸಲ್ಲದು ಎಂದು ಎಲ್‌ಜಿಪಿ ಆಗ್ರಹಿಸಿದೆ.

ಕಳೆದ ತಿಂಗಳಷ್ಟೇ ನ್ಯಾ. ಗೋಯಲ್‌ ಅವರು ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿ ಹುದ್ದೆಯಿಂದ ನಿವೃತ್ತರಾಗಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ