ಚೆನ್ನೈ: ತಮಿಳುನಾಡು ಮಾಜಿ ಸಿಎಂ ಜಯಲಲಿತಾ ಸಾವಿನ ಪ್ರಕರಣದ ತನಿಖೆ ನಡೆಸುತ್ತಿರುವ ನ್ಯಾಯಮೂರ್ತಿ ಎ. ಆರ್ಮುಘಸ್ವಾಮಿ ಆಯೋಗವು ವೈದ್ಯಕೀಯ ಪರಿಭಾಷೆಯ ಕೆಲ ಪದಗಳನ್ನು ತಪ್ಪಾಗಿ ಅರ್ಥೈಸಿಕೊಂಡಿದ್ದು, ಅವುಗಳನ್ನು ಸರಿಪಡಿಸುವಂತೆ ಅಪೋಲೊ ಆಸ್ಪತ್ರೆಯು ಆಯೋಗಕ್ಕೆ ಶನಿವಾರ ಮನವಿ ಸಲ್ಲಿಸಿದೆ. ಜಯಾ ಅವರಿಗೆ ಚಿಕಿತ್ಸೆ ನೀಡಿದ ಅಪೋಲೊ ವೈದ್ಯರ ತಂಡದಿಂದ ಹೇಳಿಕೆಗಳನ್ನು ದಾಖಲಿಸಿಕೊಳ್ಳುವ ವೇಳೆ ಆಯೋಗವು, 'ಇಂಟುಬೇಷನ್', 'ಎಂಟ್ರೋಕೋಕಸ್ ಬ್ಯಾಕ್ಟೀರಿಯಾ' ಇತ್ಯಾದಿ ಪದಗಳನ್ನು ಬೇರೆ ಅರ್ಥ ಬರುವಂತೆ ತಪ್ಪಾಗಿ ಟೈಪ್ ಮಾಡಿಕೊಂಡಿದೆ. ಇದು ನ್ಯಾಯ ತೀರ್ಮಾನಕ್ಕೆ ಬರುವಲ್ಲಿ ಗೊಂದಲಕ್ಕೆ ಎಡೆಮಾಡಿಕೊಡುತ್ತದೆ. ಹಾಗಾಗಿ ಈ ದೋಷ ಸರಿಪಡಿಸಿಕೊಳ್ಳುವಂತೆ ಅಪೋಲೊ ಆಸ್ಪತ್ರೆಯು ಆಯೋಗಕ್ಕೆ ಮನವಿ ಅರ್ಜಿ ಸಲ್ಲಿಸಿದೆ. ಅಲ್ಲದೇ ಜಯಾ ಅವರಿಗೆ ನೀಡಿದ ಚಿಕಿತ್ಸೆಯ ವಿಧಾನದ ಬಗ್ಗೆ ಅಪನಂಬಿಕೆಗಳಿದ್ದರೆ ವಿಶ್ವಾದ್ಯಂತ ಪರಿಣಿತ ವೈದ್ಯರಿಂದ ಸಮಿತಿಯೊಂದನ್ನು ರಚಿಸಿ ಅದು ನೀಡುವ ವರದಿಯನ್ನು ಪರಿಶೀಲಿಸಬೇಕು ಆಸ್ಪತ್ರೆ ಅರ್ಜಿಯಲ್ಲಿ ಸಲಹೆ ನೀಡಿದೆ.
ಜಯಾ ಸಾವಿನ ತನಿಖೆ: ವೈದ್ಯಕೀಯ ಪದ ಬಳಕೆಯಲ್ಲಿ ಎಡವಟ್ಟು
ಜಯಾ ಅವರಿಗೆ ಚಿಕಿತ್ಸೆ ನೀಡಿದ ಅಪೋಲೊ ವೈದ್ಯರ ತಂಡದಿಂದ ಹೇಳಿಕೆಗಳನ್ನು ದಾಖಲಿಸಿಕೊಳ್ಳುವ ವೇಳೆ ಆಯೋಗವು ಕೆಲ ಪದಗಳನ್ನು ಬೇರೆ ಅರ್ಥ ಬರುವಂತೆ ತಪ್ಪಾಗಿ ಟೈಪ್ ಮಾಡಿಕೊಂಡಿದೆ. ಇದು ನ್ಯಾಯ ತೀರ್ಮಾನಕ್ಕೆ ಬರುವಲ್ಲಿ ಗೊಂದಲಕ್ಕೆ ಎಡೆಮಾಡಿಕೊಡುತ್ತದೆ. ದೋಷ ಸರಿಪಡಿಸಿಕೊಳ್ಳುವಂತೆ ಅಪೋಲೊ ಆಸ್ಪತ್ರೆಯು ಆಯೋಗಕ್ಕೆ ಮನವಿ ಅರ್ಜಿ ಸಲ್ಲಿಸಿದೆ.
Vijaya Karnataka 30 Dec 2018, 9:30 am
ಹೈಲೈಟ್ಸ್:
- ಜಯಾ ಸಾವಿನ ಪ್ರಕರಣದ ತನಿಖೆಯಲ್ಲಿ ವೈದ್ಯಕೀಯ ಪರಿಭಾಷೆಯ ಕೆಲ ಪದಗಳನ್ನು ತಪ್ಪಾಗಿ ಅರ್ಥೈಸಿಕೊಳ್ಳಲಾಗಿದೆ
- ನ್ಯಾಯಮೂರ್ತಿ ಎ. ಆರ್ಮುಘಸ್ವಾಮಿ ಆಯೋಗಕ್ಕೆ ಅಪೋಲೊ ಆಸ್ಪತ್ರೆ ಶನಿವಾರ ಮನವಿ
- ವಿಶ್ವಾದ್ಯಂತ ಪರಿಣಿತ ವೈದ್ಯರಿಂದ ಸಮಿತಿಯೊಂದನ್ನು ರಚಿಸಿ ಅದು ನೀಡುವ ವರದಿಯನ್ನು ಪರಿಶೀಲಿಸಲು ಮನವಿ