ಆ್ಯಪ್ನಗರ

ಇಂದಿನಿಂದ ಟೋಲ್ ಶೇ.5ರಿಂದ 7ಕ್ಕೆ ಹೆಚ್ಚಳ

ರಾಷ್ಟ್ರೀಯ ಹೆದ್ದಾರಿಗಳ ಟೋಲ್ ಶುಲ್ಕ ಏರಿಕೆಯಾಗಿದ್ದು ವಾಹನದಾರರ ಜೇಬಿಗೆ ಏಪ್ರಿಲ್ 1ರಿಂದ ಇನ್ನಷ್ಟು ಹೊರೆ ಬೀಳಲಿದೆ. ಮಾರ್ಚ್ 31ರ ಮಧ್ಯರಾತ್ರಿಯಿಂದ ಜಾರಿಯಾಗಲಿರುವ ಹೊಸ ಟೋಲ್ ಶುಲ್ಕದ ಹಿನ್ನೆಲೆಯಲ್ಲಿ ರಾಷ್ಟ್ರೀಯ ಹೆದ್ದಾರಿಯಲ್ಲಿನ ಪ್ರಯಾಣ ಇನ್ನಷ್ಟು ತುಟ್ಟಿಯಾಗಲಿದೆ.

TNN 1 Apr 2018, 7:08 am
ಹೊಸದಿಲ್ಲಿ: ರಾಷ್ಟ್ರೀಯ ಹೆದ್ದಾರಿಗಳ ಟೋಲ್ ಶುಲ್ಕ ಏರಿಕೆಯಾಗಿದ್ದು ವಾಹನದಾರರ ಜೇಬಿಗೆ ಏಪ್ರಿಲ್ 1ರಿಂದ ಇನ್ನಷ್ಟು ಹೊರೆ ಬೀಳಲಿದೆ. ಮಾರ್ಚ್ 31ರ ಮಧ್ಯರಾತ್ರಿಯಿಂದ ಜಾರಿಯಾಗಲಿರುವ ಹೊಸ ಟೋಲ್ ಶುಲ್ಕದ ಹಿನ್ನೆಲೆಯಲ್ಲಿ ರಾಷ್ಟ್ರೀಯ ಹೆದ್ದಾರಿಯಲ್ಲಿನ ಪ್ರಯಾಣ ಇನ್ನಷ್ಟು ತುಟ್ಟಿಯಾಗಲಿದೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್‌ಎಚ್‌ಎಐ) ಟೋಲ್ ಶುಲ್ಕವನ್ನು ಶೇ.5ರಿಂದ ಶೇ.7ರಷ್ಟು ಹೆಚ್ಚಳ ಮಾಡಿರುವುದೇ ಇದಕ್ಕೆ ಕಾರಣ.
Vijaya Karnataka Web toll-plaza


ಬಹಳಷ್ಟು ಟೋಲ್ ಪ್ಲಾಜಾಗಳಲ್ಲಿ ಎಲ್ಲಾ ರೀತಿಯ ವಾಹನಗಳಿಗೆ ಟೋಲ್ ಶುಲ್ಕ ಶೇ.5ರಷ್ಟು ಹೆಚ್ಚಳವಾಗಲಿದೆ. ತಿಂಗಳ ಪಾಸ್ (ತಿಂಗಳಿಗೆ 50 ಟ್ರಿಪ್) ದರಗಳನ್ನೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಏರಿಕೆ ಮಾಡಿದೆ. ಇದರಿಂದಾಗಿ ದಿನನಿತ್ಯದ ಅಗತ್ಯ ವಸ್ತುಗಳ ಬೆಲೆಯೂ ಏರಿಕೆಯಾಗುವ ಸಾಧ್ಯತೆ ಇದೆ. ರಾಷ್ಟ್ರೀಯ ಹೆದ್ದಾರಿಗಳಲ್ಲಿ ಟೋಲ್ ಪ್ಲಾಜಾಗಳನ್ನು ವ್ಯವಸ್ಥೆ ಮಾಡಿದ ಬಳಿಕ ಪ್ರತಿ ವರ್ಷ ಏಪ್ರಿಲ್‌ನಲ್ಲಿ ಶುಲ್ಕಗಳನ್ನು ಏರಿಕೆ ಮಾಡುತ್ತಿರುವುದು ಗೊತ್ತೇ ಇದೆ.

ಈ ಹಿನ್ನೆಲೆಯಲ್ಲಿ ಏಪ್ರಿಲ್ 1ರಿಂದ ಏರಿಕೆಯಾಗಿರುವ ಟೋಲ್ ಶುಲ್ಕ ಜಾರಿಗೆ ಬರಲಿದೆ. ನ್ಯಾಶನಲ್ ಹೈವೇ 2 ಯೋಜನೆ ನಿರ್ದೇಶಕ ಮೊಹಮ್ಮದ್ ಸಫಿ ಟೈಮ್ಸ್ ಆಫ್ ಇಂಡಿಯಾ ಜತೆ ಮಾತನಾಡಿದ್ದು, 'ದೇಶದಾದ್ಯಂತ ಒಟ್ಟು 372 ಟೋಲ್ ಪ್ಲಾಜಾಗಳಿವೆ. ಟೋಲ್ ದರ ಹೊಂದಾಣಿಕೆ ಪ್ರತಿ ಹಣಕಾಸು ವರ್ಷ ಆರಂಭವಾಗುವುದಕ್ಕೂ ಮುನ್ನವೇ ನಡೆಯುತ್ತದೆ. ಮುಖ್ಯವಾಗಿ ಟೋಲ್ ಸಗಟು ಬೆಲೆ ಸೂಚ್ಯಂಕ (ಡಬ್ಲ್ಯುಪಿಐ) ಆಧಾರವಾಗಿ ಪರಿಷ್ಕೃತ ದರ ಇರುತ್ತದೆ. ಹಾಗಾಗಿ ಆಯಾ ಪ್ರದೇಶಕ್ಕೆ ಸಂಬಂಧಿಸಿದರೆ ದರ ಬದಲಾಗುತ್ತದೆ' ಎಂದಿದ್ದಾರೆ.

ರಾಷ್ಟ್ರೀಯ ಹೆದ್ದಾರಿ 2ರಲ್ಲಿ ಆಗ್ರಾದಿಂದ ದಿಲ್ಲಿಗೆ ಪ್ರಯಾಣಿಸುವ ಸಣ್ಣ ಕಾರಿನವರು ಮಾರ್ಚ್ 31ರ ಮಧ್ಯರಾತ್ರಿಯಿಂದ 10 ರೂ. ಹೆಚ್ಚು ಟೋಲ್ ಶುಲ್ಕ ತೆರಬೇಕಾಗುತ್ತದೆ. ಅದೇ ರೀತಿ ಎನ್‍ಎಚ್-21ರಲ್ಲಿ ಆಗ್ರಾದಿಂದ ಜೈಪುರಕ್ಕೆ ಪ್ರಯಾಣಿಸುವ ವಾಹನಗಳು ಶೇ.6ರಷ್ಟು ಹೆಚ್ಚು ಟೋಲ್ ಸುಂಕ ಕಟ್ಟಬೇಕು.

ಇನ್ನೊಂದು ಕಡೆ ಈಗಾಗಲೆ ರಾಷ್ಟ್ರೀಯ ಹೆದ್ದಾರಿಗಳ ಟೋಲ್ ಶುಲ್ಕ ಹೆಚ್ಚಾಗಿದೆ, ಇದೀಗ ಮತ್ತೆ ದರ ಹೆಚ್ಚಿಸಿರುವುದು ಅವೈಜ್ಞಾನಿಕ ಎಂದು ಟೋಲ್ ಶುಲ್ಕ ಏರಿಕೆ ಬಗ್ಗೆ ಸಾರಿಗೆದಾರರ ಕ್ಷೇಮಾಭಿವೃದ್ಧಿ ಸಂಘಟನೆ ಆಕ್ರೋಶ ವ್ಯಕ್ತಪಡಿಸಿದೆ. ಒಂದು ಕಡೆ ಇ-ವೇ ಬಿಲ್, ಹೆಚ್ಚುತ್ತಿರುವ ಡೀಸೆಲ್ ಬೆಲೆಯ ಜತೆಗೆ ಟೋಲ್ ಶುಲ್ಕದಲ್ಲೂ ಹೆಚ್ಚಳವಾಗಿರುವುದು ಅಗತ್ಯ ವಸ್ತುಗಳ ಬೆಲೆ ಹೆಚ್ಚಳಕ್ಕೂ ಕಾರಣವಾಗಲಿದೆ ಎಂದಿದ್ದಾರೆ ಆಗ್ರಾ ಸಾರಿಗೆದಾರರ ಕ್ಷೇಮಾಭಿವೃದ್ಧಿ ಸಂಘಟನೆಯ ಅಧ್ಯಕ್ಷ ವೀರೇಂದ್ರ ಗುಪ್ತಾ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ