ಆ್ಯಪ್ನಗರ

ಭದ್ರತಾ ಪಡೆಯ ಭರ್ಜರಿ ಬೇಟೆ: ಓರ್ವ ಉಗ್ರ, ಆತನ ನಾಲ್ವರು ಸಹಚರರ ಬಂಧನ, ಭಾರಿ ಶಸ್ತ್ರಾಸ್ತ್ರ ವಶಕ್ಕೆ!

​​ಪಾಕಿಸ್ತಾನದಿಂದ ರವಾನೆಯಾಗುತ್ತಿರುವ ಶಸ್ತ್ರಾಸ್ತ್ರಗಳನ್ನ ಜಮ್ಮು ಮತ್ತು ಕಾಶ್ಮೀರದ ಕುಪ್ವಾರ ಜಿಲ್ಲೆಯ ಗಡಿ ನಿಯಂತ್ರಣ ರೇಖೆ ಬಳಿ ದಾಸ್ತಾನು ಮಾಡಲಾಗುತ್ತಿದೆ ಎಂಬ ಕುರಿತು ಸೇನೆಗೆ ಮಾಹಿತಿ ಲಭ್ಯವಾಗಿತ್ತು. ಹೀಗಾಗಿ ಮಂಗಳವಾರ ಸೇನೆ, ಸಿಆರ್‌ಪಿಎಫ್‌ ಹಾಗೂ ಕುಪ್ವಾರ ಪೊಲೀಸರನ್ನು ಒಳಗೊಂಡ ಜಂಟಿ ತಂಡಗಳು ಶೋಧ ಕಾರ್ಯ ಕೈಗೊಂಡು ಗೋದಾಮು ಪತ್ತೆ ಮಾಡುವಲ್ಲಿ ಯಶಸ್ವಿಯಾದವು.

Vijaya Karnataka Web 12 Aug 2020, 4:01 pm
ಶ್ರೀನಗರ: ಪಾಕಿಸ್ತಾನ ಪೋಷಿತ ಉಗ್ರ ಸಂಘಟನೆ ಹಿಜ್ಬುಲ್‌ ಮುಜಾಹಿದ್ದೀನ್‌ನ ಒಬ್ಬ ಉಗ್ರ ಮತ್ತು ಆತನ ನಾಲ್ವರು ಸಹಚರರನ್ನು ಮಂಗಳವಾರ ಬಂಧಿಸಿರುವ ಭದ್ರತಾ ಪಡೆಗಳು, ಯುದ್ಧಕ್ಕೆ ಬಳಕೆಯಾಗುವ ಶಸ್ತ್ರಾಸ್ತ್ರಗಳಿದ್ದ ದೊಡ್ಡ ಸಂಗ್ರಹಾಗಾರವನ್ನೇ ಭೇದಿಸಿದ್ದಾರೆ.
Vijaya Karnataka Web 11


ಪಾಕಿಸ್ತಾನದಿಂದ ರವಾನೆಯಾಗುತ್ತಿರುವ ಶಸ್ತ್ರಾಸ್ತ್ರಗಳನ್ನ ಜಮ್ಮು ಮತ್ತು ಕಾಶ್ಮೀರದ ಕುಪ್ವಾರ ಜಿಲ್ಲೆಯ ಗಡಿ ನಿಯಂತ್ರಣ ರೇಖೆ ಬಳಿ ದಾಸ್ತಾನು ಮಾಡಲಾಗುತ್ತಿದೆ ಎಂಬ ಕುರಿತು ಸೇನೆಗೆ ಮಾಹಿತಿ ಲಭ್ಯವಾಗಿತ್ತು. ಹೀಗಾಗಿ ಮಂಗಳವಾರ ಸೇನೆ, ಸಿಆರ್‌ಪಿಎಫ್‌ ಹಾಗೂ ಕುಪ್ವಾರ ಪೊಲೀಸರನ್ನು ಒಳಗೊಂಡ ಜಂಟಿ ತಂಡಗಳು ಶೋಧ ಕಾರ್ಯ ಕೈಗೊಂಡು ಗೋದಾಮು ಪತ್ತೆ ಮಾಡುವಲ್ಲಿ ಯಶಸ್ವಿಯಾದವು.

ಇನ್ನು ಬಂಧನವಾದ ಉಗ್ರ ಸ್ಥಳೀಯ ಹಿಜ್ಬುಲ್‌ ಉಗ್ರ ಎಂದು ಗುರುರಿಸಲಾಗಿದ್ದು, ಆತನ ಹೆಸರು ಪರ್ವೇಜ್‌ ಅಹ್ಮದ್‌ ಭಟ್‌ (22) ಎಂದಾಗಿದೆ. ಈತನಿಂದ ಚೀನಾ ನಿರ್ಮಿತ 9ಎಂಎಂ ಪಿಸ್ತೂಲ್‌, ಎಕೆ-47 ರೈಫಲ್‌, 60 ಸುತ್ತು ಗುಂಡುಗಳು, 12 ಇತರ ಪಿಸ್ತೂಲ್‌ಗಳು ಮತ್ತು ಹಲವು ಗ್ರೆನೇಡ್‌ಗಳನ್ನು ವಶಕ್ಕೆ ಪಡೆಯಲಾಗಿದೆ.

ಪ್ರಣಬ್‌ ಮುಖರ್ಜಿ ಆರೋಗ್ಯ ಮತ್ತಷ್ಟು ಗಂಭೀರ; ವರ್ಷದ ಹಿಂದಿನ ಘಟನೆ ಸ್ಮರಿಸಿ ಪ್ರಾರ್ಥಿಸಿದ ಪುತ್ರಿ ಶರ್ಮಿಷ್ಠಾ

ಬಂಡಿಪೊರಾದಲ್ಲಿನ ಉಗ್ರ ಕಮಾಂಡರ್‌ಗಳಾದ ರಿಯಾಜ್‌ ಮತ್ತು ಅಮ್ಜದ್‌ನ ಸಂಪರ್ಕ ಬೆಳೆಸಿಕೊಂಡಿದ್ದ ಪರ್ವೇಜ್‌ ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿನ ಸೋನಾರ್‌ನಲ್ಲಿನ ಉಗ್ರರ ಶಿಬಿರಗಳಿಂದ ಶಸ್ತಾ್ರಸ್ತ್ರಗಳನ್ನು ತರುತ್ತಿದ್ದ. ಬಂಧಿತರು ಶಸ್ತಾ್ರಸ್ತ್ರಗಳನ್ನು ಗಡಿಯಿಂದ ಎರಡೂ ಬದಿಗೆ ಭದ್ರತಾ ಪಡೆಗಳ ಕಣ್ತಪ್ಪಿಸಿ ಒಯ್ಯುವ ಮಾರ್ಗ ಕಂಡುಕೊಂಡಿದ್ದರು ಎಂದು ಪೊಲೀಸ್‌ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ