ಆ್ಯಪ್ನಗರ

ಅಂಬಾಲಾ ವಾಯುನೆಲೆಗೆ ಭೇಟಿ ನೀಡಿದ ಭೂಸೇನಾ ಮುಖ್ಯಸ್ಥ: ಸಿದ್ಧತೆ ಪರಿಶೀಲನೆ!

ಅಂಬಾಲಾದಲ್ಲಿರುವ ಭಾರತೀಯ ವಾಯುಸೇನೆಯ ವಾಯುನೆಲೆಗೆ ಭೇಟಿ ನೀಡಿದ ಭಾರತೀಯ ಭೂಸೇನೆ ಮುಖ್ಯಸ್ಥ ಜನರಲ್ ಎಂಎಂ ನರವಣೆ, ವಾಯುಸೇನೆಯ ಸಮರ ಸಿದ್ಧತೆಯನ್ನು ಪರೀಶಿಲಿಸಿದರು. ವೆಸ್ಟರ್ನ್ ಏರ್ ಕಮಾಂಡ್ ಮುಖ್ಯಸ್ಥ ಏರ್ ಮಾರ್ಷಲ್ ವಿ.ಆರ್. ಚೌಧರಿ ಜನರಲ್ ನರವಣೆ ಅವರಿಗೆ ಕಾರ್ಯಾಚರಣೆ ಸಿದ್ಧತೆಯ ಮಾಹಿತಿ ನೀಡಿದರು.

Vijaya Karnataka Web 19 Oct 2020, 11:33 pm
ಅಂಬಾಲಾ: ಅಂಬಾಲಾದಲ್ಲಿರುವ ಭಾರತೀಯ ವಾಯುಸೇನೆಯ ವಾಯುನೆಲೆಗೆ ಭೇಟಿ ನೀಡಿದ ಭಾರತೀಯ ಭೂಸೇನೆ ಮುಖ್ಯಸ್ಥ ಜನರಲ್ ಎಂಎಂ ನರವಣೆ, ವಾಯುಸೇನೆಯ ಸಮರ ಸಿದ್ಧತೆಯನ್ನು ಪರೀಶಿಲಿಸಿದರು.
Vijaya Karnataka Web Genaral MM Naravane
ಅಂಬಾಲಾ ವಾಯುನೆಲೆಗೆ ಭೇಟಿ ನೀಡಿದ ಭೂಸೇನಾ ಮುಖ್ಯಸ್ಥ


ಅಂಬಾಲಾ ವಾಯುನೆಲೆಗೆ ಭೇಟಿ ನೀಡಿದ ಜನರಲ್ ಎಂಎಂ ನರವಣೆ ಅವರನ್ನು, ವೆಸ್ಟರ್ನ್ ಏರ್ ಕಮಾಂಡ್ ಮುಖ್ಯಸ್ಥ ಏರ್ ಮಾರ್ಷಲ್ ವಿ.ಆರ್. ಚೌಧರಿ ಸ್ವಾಗತಿಸಿದರು.

ಈ ವೇಳೆ ಚೌಧರಿ ನೇತೃತ್ವದಲ್ಲಿ ವಾಯುನೆಲೆಯ ಅಧಿಕಾರಿಗಳು ಕಾರ್ಯಾಚರಣೆ ಸಿದ್ಧತೆ ಕುರಿತು ಭೂಸೇನಾ ಮುಖ್ಯಸ್ಥರಿಗೆ ವಿಸ್ತಾರವಾದ ಮಾಹಿತಿ ನೀಡಿದರು.

ಚಿನಾರ್ ಕಾರ್ಪ್ಸ್‌ಗೆ ಭೇಟಿ ನೀಡಿದ ಭೂಸೇನಾ ಮುಖ್ಯಸ್ಥ: ಕಾರ್ಯಾಚರಣೆ ಸಿದ್ಧತೆ ಪರಿಶೀಲನೆ!



ಲಡಾಖ್ ಗಡಿ ಸಂಘರ್ಷದ ಪರಿಣಾಮವಾಗಿ ಭಾರತೀಯ ವಾಯುಸೇನೆ ಹಾಗೂ ಭೂಸೇನೆ ಜಂಟಿ ಕಾರ್ಯಾಚರಣೆಗಳಿಗೆ ಒತ್ತು ನೀಡಿದ್ದು, ಈ ನಿಟ್ಟಿನಲ್ಲಿ ಜನರಲ್ ನರವಣೆ ಅವರ ಅಂಬಾಲಾ ವಾಯುನೆಲೆ ಭೇಟಿ ಮಹತ್ವ ಪಡೆದುಕೊಂಡಿದೆ.

ಚೀನಾಕ್ಕೆ ತಕ್ಕ ಉತ್ತರ ನೀಡಲು ನಾವು ಸಿದ್ಧ: ವಾಯುಸೇನೆ ಮುಖ್ಯಸ್ಥ

ಈಗಾಗಲೇ ಲಡಾಖ್ ಗಡಿಯಲ್ಲಿ ಭಾರತೀಯ ಸೇನೆಗೆ ಪೂರಕವಾಗಿ ವಾಯುಸೇನೆ ಕರ್ತವ್ಯ ನಿರ್ವಹಿಸುತ್ತಿದ್ದು, ಯಾವುದೇ ಸಂದಿಗಗ್ಧ ಪರಿಸ್ಥಿತಿಯನ್ನು ಎದುರಿಸಲು ಎರಡೂ ರಕ್ಷಣಾ ಪಡೆಗಳು ಸರ್ವ ಸನ್ನದ್ಧವಾಗಿರುವುದು ಸ್ಪಷ್ಟ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ