ಆ್ಯಪ್ನಗರ

ಯಾರದೋ ಕುಮ್ಮಕ್ಕಿನಿಂದ ವಿರೋಧ ಬೇಡ: ನೇಪಾಳಕ್ಕೆ ಭೂಸೇನಾ ಮುಖ್ಯಸ್ಥರಿಂದ ಖಡಕ್ ಎಚ್ಚರಿಕೆ!

ಕೈಲಾಸ ಮಾನಸ ಸರೋವರದ ಸುಗಮ ಯಾತ್ರೆಗಾಗಿ ನಿರ್ಮಿಸಿರುವ ಹೊಸ ರಸ್ತೆ ಕುರಿತು ನೇಪಾಳ ತಗಾದೆ ತೆಗೆದಿದ್ದು, ಈ ಹಿನ್ನೆಲೆಯಲ್ಲಿ ಭಾರತೀಯ ಭೂಸೇನಾ ಮುಖ್ಯಸ್ಥ ಜನರಲ್ ಮುಕುಂದ್ ನರವಣೆ ನೇಪಾಳಕ್ಕೆ ಸೂಕ್ಷ್ಮವಾಗಿ ಎಚ್ಚರಿಸಿದ್ದಾರೆ.

Vijaya Karnataka Web 15 May 2020, 11:20 pm
ನವದೆಹಲಿ: ಅಪರೂಪದಲ್ಲೇ ಅಪರೂಪ ಎನ್ನಬಹುದಾದ ಪ್ರಸಂಗವೊಂದರಲ್ಲಿ ಕೈಲಾಸ ಮಾನಸ ಸರೋವರ ಯಾತ್ರೆಗಾಗಿ ಉದ್ಘಾಟನೆಯಾಗಿರುವ ಹೊಸ ಮಾರ್ಗದ ಕುರಿತು ಚಕಾರ ಎತ್ತಿರುವ ನೇಪಾಳಕ್ಕೆ, ಭಾರತೀಯ ಭೂಸೇನಾ ಮುಖ್ಯಸ್ಥ ಜನರಲ್ ಮುಕುಂದ್ ನರವಣೆ ಎಚ್ಚರಿಕೆ ನೀಡಿದ್ದಾರೆ.
Vijaya Karnataka Web 1
ಸಂಗ್ರಹ ಚಿತ್ರ


ಕಳೆದ ಶುಕ್ರವಾರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಕೈಲಾಸ ಮಾನಸ ಸರೋವರ ಯಾತ್ರೆಯನ್ನು ಸುಗಮಗೊಳಿಸುವ 80 ಕಿ.ಮೀ ರಸ್ತೆಯನ್ನು ಉದ್ಘಾಟಿಸಿದ್ದರು. ಉತ್ತರಾಖಂಡ್‌ದಿಂದ ಲಿಪುಲೆಖ್ ಪಾಸ್‌ವರೆಗಿನ ಈ ರಸ್ತೆ ತನ್ನ ಗಡಿಯಲ್ಲೂ ಹಾದು ಹೋಗಿದೆ ಎಂದು ನೇಪಾಳ ತಗಾದೆ ತೆಗೆದಿದೆ.

ಭಾರತದೊಂದಿಗಿರುವ ಪಶ್ಚಿಮ ಗಡಿಯ ಕಾಲಾಪಾನಿ ಪ್ರದೇಶವೂ ಒಳಗೊಂಡಂತೆ ಪಕ್ಕದ ಸಂಪೂರ್ಣ ಪ್ರದೇಶ ತನ್ನದೆಂದು ನೇಪಾಳ ಹೇಳುತ್ತಿದ್ದು, ತನ್ನ ಅನುಮತಿ ಕೇಳದೇ ಈ ರಸ್ತೆ ನಿರ್ಮಿಸಲಾಗಿದೆ ಎಂದು ಕ್ಯಾತೆ ತೆಗೆದಿದೆ.

ಕೈಲಾಸ ಮಾನಸ ಸರೋವರ: ಸುಲಭ 'ಲಿಂಕ್ ರೋಡ್' ಉದ್ಘಾಟಿಸಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್

ಇದಕ್ಕೆ ಖಡಕ್ ಪ್ರತಿಕ್ರಿಯೆ ನೀಡಿರುವ ಭೂಸೇನಾ ಮುಖ್ಯಸ್ಥ ಜನರಲ್ ಮುಕುಂದ್ ನರವಣೆ, ಯಾರದೋ ಕುಮ್ಮಕ್ಕಿನಿಂದ ವಿನಾಕಾರಣ ವಿರೋಧ ಮಾಡುವುದು ಬೇಡ ಎಂದು ಚೀನಾದ ಹೆಸರನ್ನು ಉಲ್ಲೇಖಿಸದೇ ನೇಪಾಳಕ್ಕೆ ಎಚ್ಚರಿಕೆ ನೀಡಿದ್ದಾರೆ.


ಮನೋಹರ್ ಪರಿಕ್ಕರ್ ಇನ್‌ಸ್ಟಿಟ್ಯೂಟ್ ಫಾರ್ ಡಿಫೆನ್ಸ್ ಸ್ಟಡೀಸ್ ಅಂಡ್ ಅನಾಲಿಸಿಸ್ ಆಯೋಜಿಸಿದ್ದ ಆನ್‌ಲೈನ್ ಸಮ್ಮೇಳನದಲ್ಲಿ ಮಾತನಾಡಿದ ಜನರಲ್ ನರವಣೆ, ಕಾಳಿ ನದಿಯ ಪೂರ್ವದ ಭಾಗ ನೇಪಾಳಕ್ಕೂ ಹಾಗೂ ಪಶ್ಚಿಮದ ಭಾಗ ಭಾರತಕ್ಕೂ ಸೇರಿದೆ. ಅಲ್ಲದೇ ಹೊಸ ಮಾರ್ಗ ಪಶ್ಚಿಮ ಕಾಳಿ ನದಿಯ ಗುಂಟ ಹಾದುಹೋಗುತ್ತದೆ. ಇದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.

ಗಡಿಯಲ್ಲಿ ಭಾರತ-ಚೀನಾ ಸಂಘರ್ಷ ಹೊಸತೇನಲ್ಲ: ಭೂ ಸೇನಾ ಮುಖ್ಯಸ್ಥ

ನೇಪಾಳ ಯಾರದ್ದೋ(ಚೀನಾ) ಕುಮ್ಮಕ್ಕಿಗೆ ಒಳಗಾಗಿ ಭಾರತದ ವಿರುದ್ಧ ವಿನಾಕಾರಣ ತಗದೆ ತೆಗೆಯುತ್ತಿದೆ. ಇದು ಖಂಡಿತವಾಗಿಯೂ ಉತ್ತಮ ಬೆಳವಣಿಗೆಯಲ್ಲ ಎಂದು ನರವಣೆ ಸೂಕ್ಷ್ಮವಾಗಿ ಎಚ್ಚರಿಸಿದ್ದಾರೆ. ನೇಪಾಳ ಹಾಘೂ ಭಾರತದ ನಡುವೆ ಐತಿಹಾಸಿಕ ಸೌಹಾರ್ದತೆಯಿದ್ದು, ಇದರ ಮಹತ್ವವನ್ನು ನೇಪಾಳ ಅರಿಯಬೇಕಿದೆ ಎಂದು ನರವಣೆ ಸೂಚ್ಯವಾಗಿ ಹೇಳಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ