ಆ್ಯಪ್ನಗರ

Army Chopper Crash: ಅರುಣಾಚಲ ಪ್ರದೇಶದಲ್ಲಿ ಸೇನಾ ಹೆಲಿಕಾಪ್ಟರ್ ಪತನ: ಚೀನಾ ಗಡಿಯಲ್ಲಿ ಅಪಘಾತ

Army Chopper Crash: ಅರುಣಾಚಲ ಪ್ರದೇಶದ ಸಿಂಗಿಂಗ್ ಎಂಬ ಗ್ರಾಮದಲ್ಲಿ ಈ ಹೆಲಿಕಾಪ್ಟರ್ ಪತನಗೊಂಡಿದೆ ಎಂದು ತಿಳಿದು ಬಂದಿದೆ. ಈ ಪ್ರದೇಶವು ಸಿಯಾಂಗ್ ಜಿಲ್ಲೆಯ ಪಾಲಿಂಗ್ ವೃತ್ತದಲ್ಲಿ ಬರುತ್ತದೆ. ಜಿಲ್ಲಾ ಕೇಂದ್ರದಿಂದ 25 ಕಿ. ಮೀ. ದೂರದಲ್ಲಿ ಈ ಘಟನೆ ನಡೆದಿದೆ. ರಕ್ಷಣಾ ಇಲಾಖೆ ಮೂಲಗಳ ಪ್ರಕಾರ ಈ ಹೆಲಿಕಾಪ್ಟರ್‌ನಲ್ಲಿ ಪೈಲಟ್ ಜೊತೆಗೆ ಮತ್ತೋರ್ವ ಪ್ರಯಾಣಿಕರೂ ಇದ್ದರು ಎಂದು ತಿಳಿದು ಬಂದಿದೆ. ರಕ್ಷಣಾ ಪಡೆಗಳು ಸ್ಥಳಕ್ಕೆ ದೌಡಾಯಿಸಿದ್ದು, ಹೆಚ್ಚಿನ ಮಾಹಿತಿ ಇನ್ನಷ್ಟೇ ಹೊರ ಬೀಳಬೇಕಿದೆ.

Authored byದಿಲೀಪ್ ಡಿ. ಆರ್. | Vijaya Karnataka Web 21 Oct 2022, 1:59 pm

ಹೈಲೈಟ್ಸ್‌:

  • ಶುಕ್ರವಾರ ಬೆಳಗ್ಗೆ 10.45ಕ್ಕೆ ಪತನಗೊಂಡ ಸೇನಾ ಹೆಲಿಕಾಪ್ಟರ್
  • ಚೀನಾ ಗಡಿಯಲ್ಲಿ ಇರುವ ಅರುಣಾಚಲ ಪ್ರದೇಶದ ಸಿಯಾಂಗ್ ಜಿಲ್ಲೆಯಲ್ಲಿ ಹೆಲಿಕಾಪ್ಟರ್ ಪತನ
  • ಇದೊಂದು ದುರ್ಗಮ ಪ್ರದೇಶವಾಗಿದ್ದು, ರಕ್ಷಣಾ ಕಾರ್ಯಾಚರಣೆ ಭರದಿಂದ ಸಾಗಿದೆ
ಹೈಲೈಟ್ಸ್‌ ಮಾತ್ರವೇ ಓದಲು ಆ್ಯಪ್‌ ಡೌನ್‌ಲೋಡ್‌ ಮಾಡಿ
Vijaya Karnataka Web army chopper
ಗುವಾಹಟಿ: ಭಾರತೀಯ ಸೇನೆಯ ಅತ್ಯಾಧುನಿಕ ಲಘು ಹೆಲಿಕಾಪ್ಟರ್ ಅರುಣಾಚಲ ಪ್ರದೇಶದಲ್ಲಿ ಶುಕ್ರವಾರ ಬೆಳಗ್ಗೆ ಪತನಗೊಂಡಿದೆ. ಶುಕ್ರವಾರ ಬೆಳಗ್ಗೆ 10.45ಕ್ಕೆ ಈ ಘಟನೆ ಸಂಭವಿಸಿದೆ. ಚೀನಾ ಗಡಿಯಲ್ಲಿ ಇರುವ ಅರುಣಾಚಲ ಪ್ರದೇಶದ ಸಿಯಾಂಗ್ ಜಿಲ್ಲೆಯಲ್ಲಿ ಈ ಹೆಲಿಕಾಪ್ಟರ್ ಪತನವಾಗಿದೆ. ಇದೊಂದು ದುರ್ಗಮ ಪ್ರದೇಶವಾಗಿದ್ದು, ರಕ್ಷಣಾ ಕಾರ್ಯಾಚರಣೆ ಭರದಿಂದ ಸಾಗಿದೆ.
ರಕ್ಷಣಾ ಇಲಾಖೆ ಮೂಲಗಳ ಪ್ರಕಾರ ಈ ಹೆಲಿಕಾಪ್ಟರ್‌ನಲ್ಲಿ ಪೈಲಟ್ ಜೊತೆಗೆ ಮತ್ತೋರ್ವ ಪ್ರಯಾಣಿಕರೂ ಇದ್ದರು ಎಂದು ತಿಳಿದು ಬಂದಿದೆ. ರಕ್ಷಣಾ ಪಡೆಗಳು ಸ್ಥಳಕ್ಕೆ ದೌಡಾಯಿಸಿದ್ದು, ಹೆಚ್ಚಿನ ಮಾಹಿತಿ ಇನ್ನಷ್ಟೇ ಹೊರ ಬೀಳಬೇಕಿದೆ.

ಅರುಣಾಚಲ ಪ್ರದೇಶದ ಸಿಂಗಿಂಗ್ ಎಂಬ ಗ್ರಾಮದಲ್ಲಿ ಈ ಹೆಲಿಕಾಪ್ಟರ್ ಪತನಗೊಂಡಿದೆ ಎಂದು ತಿಳಿದು ಬಂದಿದೆ. ಈ ಪ್ರದೇಶವು ಸಿಯಾಂಗ್ ಜಿಲ್ಲೆಯ ಪಾಲಿಂಗ್ ವೃತ್ತದಲ್ಲಿ ಬರುತ್ತದೆ. ಜಿಲ್ಲಾ ಕೇಂದ್ರದಿಂದ 25 ಕಿ. ಮೀ. ದೂರದಲ್ಲಿ ಈ ಘಟನೆ ನಡೆದಿದೆ.

Army Chopper Crash: ಅತ್ಯಾಧುನಿಕ Mi-17 ಹೆಲಿಕಾಪ್ಟರ್‌ನ ವಿಶೇಷತೆಗಳೇನು..?
ಇದೇ ವರ್ಷ ಅಕ್ಟೋಬರ್ 5 ರಂದೂ ಕೂಡಾ ಈ ಭಾಗದಲ್ಲಿ ಚೀತಾ ಹೆಲಿಕಾಪ್ಟರ್ ಪತನಗೊಂಡಿದ್ದು, ಭಾರತೀಯ ಸೇನೆಗೆ ಸೇರಿದ ಈ ಹೆಲಿಕಾಪ್ಟರ್ ಪತನಗೊಂಡು ಇಬ್ಬರು ಪೈಲಟ್‌ಗಳ ಪೈಕಿ ಓರ್ವ ಮೃತಪಟ್ಟಿದ್ದರು. ತವಾಂಗ್‌ನಿಂದ ದೈನಂದಿತ ಅಭ್ಯಾಸಕ್ಕೆ ತೆರಳಿದ್ದ ವೇಳೆ ಈ ಹೆಲಿಕಾಪ್ಟರ್ ಪತನ ಆಗಿತ್ತು.

ತವಾಂತ್ ಜಿಲ್ಲೆಯಲ್ಲಿ ಬಾಪ್ ತೆಂಗ್ ಕಾಂಗ್ ಎಂಬ ಜಲಪಾತವಿದೆ. ಇಲ್ಲಿ ಚೀತಾ ಹೆಲಿಕಾಪ್ಟರ್ ಪತನಗೊಂಡಿತ್ತು. ಸುರ್ವಾ ಸಾಂಬಾ ಎಂಬ ಪ್ರದೇಶದಿಂದ ದೈನಂದಿನ ಅಭ್ಯಾಸ ಮುಗಿಸಿ ಪೈಲಟ್‌ಗಳು ವಾಪಸ್ ಆಗುವಾಗ ಹೆಲಿಕಾಪ್ಟರ್ ಪತನಗೊಂಡಿತ್ತು.


ಹೆಲಿಕಾಪ್ಟರ್ ಅಪಘಾತದಲ್ಲಿ ರಾವತ್ ನಿಧನರಾಗಿದ್ದರು

ಡಿಸೆಂಬರ್ 8, 2021ರಲ್ಲಿ ತಮಿಳುನಾಡಿನಲ್ಲಿ ಸೇನಾ ಹೆಲಿಕಾಪ್ಟರ್ ಪತನಗೊಂಡು ರಕ್ಷಣಾ ಪಡೆಗಳ ಮುಖ್ಯಸ್ಥರಾದ ಬಿಪಿನ್ ರಾವತ್ ನಿಧನರಾಗಿದ್ದರು. ಸೇನಾ ಸಿಬ್ಬಂದಿ ಹಾಗೂ ಕುಟುಂಬ ಸಮೇತರಾಗಿ ಪ್ರಯಾಣ ಮಾಡುತ್ತಿದ್ದ ವೇಳೆ ಈ ಅಪಘಾತ ಸಂಭವಿಸಿತ್ತು. ಅಪಘಾತ ಸ್ಥಳದಿಂದ 11 ಮೃತದೇಹಗಳನ್ನು ಹೊರ ತೆಗೆಯಲಾಗಿತ್ತು.

ಜ.ರಾವತ್‌ ಸಾವಿನ ಬಗ್ಗೆ ವರದಿ: ದಿಢೀರ್‌ ಹವಾಮಾನ ಬದಲಾವಣೆಯಿಂದ ಕಾಪ್ಟರ್‌ ಪತನ
ವಾರದ ಹಿಂದಷ್ಟೇ ಯುದ್ಧ ವಿಮಾನ ಪತನವಾಗಿತ್ತು!

ಅಕ್ಟೋಬರ್ 12 ರಂದು ಗೋವಾ ಕಡಲ ತೀರದಲ್ಲಿ ಮಿಗ್ - 29ಕೆ ಯುದ್ಧ ವಿಮಾನವು ಪತನಗೊಂಡಿತ್ತು. ಎಂದಿನಂತೆ ಅಭ್ಯಾಸ ನಡೆಸುತ್ತಿದ್ದ ವೇಳೆ ತಾಂತ್ರಿಕ ದೋಷದಿಂದಾಗಿ ವಿಮಾನ ಪತನಗೊಂಡಿದೆ ಎಂದು ನೌಕಾ ಪಡೆ ತನ್ನ ಪ್ರಕಟಣೆಯಲ್ಲಿ ತಿಳಿಸಿತ್ತು.

ಮಿಗ್ - 29ಕೆ ಯುದ್ಧ ವಿಮಾನ ಪತನಗೊಳ್ಳುವ ಮುನ್ನ ಅದರಲ್ಲಿದ್ದ ಪೈಲಟ್ ಸುರಕ್ಷಿತವಾಗಿ ಪ್ಯಾರಾಚೂಟ್ ನೆರವಿನೊಂದಿಗೆ ಹೊರಗೆ ಬಂದಿದ್ದರು. ಕೂಡಲೇ ಕಾರ್ಯಾಚರಣೆ ನಡೆಸಿ ಅವರನ್ನು ರಕ್ಷಣೆ ಮಾಡಲಾಗಿತ್ತು.

ಮಿಗ್ - 29 ಕೆ ಯುದ್ಧ ವಿಮಾನದಲ್ಲಿ ರಷ್ಯಾ ನಿರ್ಮಿತ ಕೆ - 36 ಡಿ - 3.5 ತುರ್ತು ನಿರ್ಗಮನ ಸೀಟ್ ಅಳವಡಿಕೆ ಮಾಡಲಾಗಿದೆ. ಈ ಆಸನವು ವಿಶ್ವಾದ್ಯಂತ ಬಳಕೆಯಲ್ಲಿದ್ದು, ಪೈಲಟ್‌ಗಳ ಜೀವ ರಕ್ಷಣೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಈ ಸೀಟ್‌ ಅನ್ನು ಅತ್ಯಂತ ಸುರಕ್ಷಿತ ಎಂದೇ ಭಾವಿಸಲಾಗಿದೆ. ಕಳೆದ ವಾರ ಕೂಡಾ ಇದೇ ಸೀಟು ಪೈಲಟ್‌ನ ಜೀವ ರಕ್ಷಿಸಿತ್ತು.
ಲೇಖಕರ ಬಗ್ಗೆ
ದಿಲೀಪ್ ಡಿ. ಆರ್.
ವಿಜಯ ಕರ್ನಾಟಕದ ಡಿಜಿಟಲ್ ಪತ್ರಕರ್ತನಾಗಿ 2019ರ ಆಗಸ್ಟ್‌ನಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡ ಟಿವಿ ನ್ಯೂಸ್ ವಾಹಿನಿಗಳಲ್ಲಿ 14 ವರ್ಷಕ್ಕೂ ಹೆಚ್ಚು ಕಾಲ ವಿವಿಧ ಹುದ್ದೆಗಳಲ್ಲಿ ಕಾರ್ಯ ನಿರ್ವಹಿಸಿದ ಅನುಭವ ಹೊಂದಿದ್ದಾರೆ. ರಾಜಕೀಯ, ವಿಜ್ಞಾನ-ತಂತ್ರಜ್ಞಾನ ರಂಗಗಳು ಇವರ ಆಸಕ್ತಿಯ ವಿಷಯಗಳು. ಇದಲ್ಲದೆ ಹಾಸ್ಯ, ವಿಡಂಬನಾತ್ಮಕ ಬರಹ, ವ್ಯಕ್ತಿ ಚಿತ್ರ, ಜೀವ ಪರ ನಿಲುವಿನ ಸಂವೇದನಾತ್ಮಕ ಲೇಖನಗಳನ್ನು ಹೆಚ್ಚಾಗಿ ಬರೆಯುತ್ತಾರೆ. ಕಾಡು, ಹಸಿರು, ಬೆಟ್ಟ ಗುಡ್ಡಗಳ ಚಾರಣ ಮಾಡುವುದು ಇವರ ಹವ್ಯಾಸ.... ಇನ್ನಷ್ಟು ಓದಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ