ಆ್ಯಪ್ನಗರ

ಈದ್ ರಜೆಗೆ ಬಂದಿದ್ದ ಸೈನಿಕನ ಹತ್ಯೆಗೈದ ಉಗ್ರರು

ಮೃತ ಸೈನಿಕನನ್ನು ಮನ್‌ಜೂರ್ ಅಹಮದ್ ಬೇಗ್ ನಿಶ್ಶಸ್ತ್ರರಾಗಿದ್ದಾಗ ಹೇಡಿಗಳಂತೆ ದಾಳಿಗೈಯಲಾಗಿದೆ. ಪರಿವಾರದ ಜತೆ ಈದ್ ಉಲ್ ಫಿತ್ರ ಹಬ್ಬವನ್ನಾಚರಿಸಲು ಸೈನಿಕ 12 ದಿನ ರಜೆ ಪಡೆದುಕೊಂಡು ಜೂನ್ 4 ರಂದು ಗ್ರಾಮಕ್ಕೆ ತೆರಳಿದ್ದರು ಎಂದು ತಿಳಿದುಬಂದಿದೆ.

Times Now 7 Jun 2019, 8:29 am
ಅನಂತ್‌ನಾಗ್: ಕಣಿವೆನಾಡಿನಲ್ಲಿ ಮತ್ತೆ ಉಗ್ರರು ಅಟ್ಟಹಾಸ ಮೆರೆದಿದ್ದು ಈದ್ ಹಬ್ಬವನ್ನಾಚರಿಸಲು ರಜೆಯ ಮೇಲೆ ಮನೆಗೆ ತೆರಳಿದ್ದ ಸೈನಿಕನನ್ನು ಗುಂಡಿಕ್ಕಿ ಹತ್ಯೆಗೈದಿದ್ದಾರೆ.
Vijaya Karnataka Web ಈದ್ ರಜೆಗೆ ಬಂದಿದ್ದ ಸೈನಿಕನ ಹತ್ಯೆಗೈದ ಉಗ್ರರು


ಅನಂತ್‌ನಾಗ್ ಜಿಲ್ಲೆಯ ಸದೂರಾ ಗ್ರಾಮದಲ್ಲಿ ಈ ದುಷ್ಕೃತ್ಯ ನಡೆದಿದೆ.

ಮೃತ ಸೈನಿಕನನ್ನು ಮನ್‌ಜೂರ್ ಅಹಮದ್ ಬೇಗ್ ನಿಶ್ಶಸ್ತ್ರರಾಗಿದ್ದಾಗ ಹೇಡಿಗಳಂತೆ ದಾಳಿಗೈಯಲಾಗಿದೆ. ಪರಿವಾರದ ಜತೆ ಈದ್ ಉಲ್ ಫಿತ್ರ ಹಬ್ಬವನ್ನಾಚರಿಸಲು ಸೈನಿಕ 12 ದಿನ ರಜೆ ಪಡೆದುಕೊಂಡು ಜೂನ್ 4 ರಂದು ಗ್ರಾಮಕ್ಕೆ ತೆರಳಿದ್ದರು ಎಂದು ತಿಳಿದುಬಂದಿದೆ.


ಈ ಘಟನೆ ಕಳೆದ ವರ್ಷ ಈದ್ ಸಂದರ್ಭದಲ್ಲಿ ನಡೆದ ಯೋಧ ಔರಂಗಜೇಬ್ ಹತ್ಯೆ ಪ್ರಕರಣವನ್ನು ನೆನಪಿಸಿದೆ.

44 ರಾಷ್ಟ್ರೀಯ ರೈಫಲ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದ ಔರಂಗಜೇಬ್, ಜೂನ್ 14, 2018ರಲ್ಲಿ ಪುಲ್ವಾಮಾದಲ್ಲಿ ಉಗ್ರರಿಂದ ಹತ್ಯೆಯಾಗಿದ್ದ. ಈದ್ ಆಚರಿಸಲು ಮನೆಗೆ ಬರುತ್ತಿದ್ದ ಆತನನ್ನು ಅಪಹರಿಸಿದ್ದ ಉಗ್ರರು ಅಮಾನುಷವಾಗಿ ಹತ್ಯೆಗೈದಿದ್ದರು. ಅವರ ತಲೆ, ಕತ್ತಿಗೆ ಗುಂಡು ಹಾರಿಸಿ ಹತ್ಯೆಗೈಯ್ಯಲಾಗಿತ್ತು. ಈ ಹತ್ಯೆ ದೇಶವಿದೇಶಗಳಲ್ಲಿ ಖಂಡಿಸಲ್ಪಟ್ಟಿತ್ತು. ವೀರ ಸೈನಿಕನಿಗೆ ಮರಣೋತ್ತರ ಶೌರ್ಯ ಚಕ್ರದಿಂದ ಸನ್ಮಾನಿಸಲಾಗಿದೆ.

ಬಳಿಕ ಆತನ ತಂದೆ ಹನೀಫ್ ಬಿಜೆಪಿ ಸೇರಿದ್ದರು. ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್, ಭಾರತೀಯ ಸೇನೆ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಕೂಡ ಜೇಬ್ ಮರಣದ ಬಳಿಕ ಅವರ ಮನೆಗೆ ಭೇಟಿ ಕೊಟ್ಟಿದ್ದರು.

ಹನೀಫ್ ಪರಿವಾರ ಉಗ್ರರು '' ಭಾರತದ ಪರ'' ಎಂದು ಗುರುತಿಸಿರುವ ಬಕರ್ವಾಲ್ ಸಮುದಾಯಕ್ಕೆ ಸೇರಿದ್ದಾರೆ. ಈ ಸಮುದಾಯ ಕಣಿವೆಯಲ್ಲಿ ಉಗ್ರ ವಿರೋಧಿ ಕಾರ್ಯಾಚರಣೆಗೆ ಸಹಕಾರ ನೀಡುವ ಮೂಲಕ ಗುರುತಿಸಿಕೊಂಡಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ