ಜಮ್ಮು: ಗಡಿ ನಿಯಂತ್ರಣ ರೇಖೆಗುಂಟ ಪಾಕಿಸ್ತಾನ ಸೇನೆ ನಡೆಸಿದ ಅಪ್ರಚೋದಿತ ಗುಂಡಿನ ದಾಳಿಯಲ್ಲಿ ಭಾರತೀಯ ಯೋಧರೊಬ್ಬರು ಹುತಾತ್ಮರಾಗಿದ್ದಾರೆ.
ಶನಿವಾರ ಸಂಜೆ 5.30ರ ಸುಮಾರಿಗೆ ಪಾಕಿಸ್ತಾನ ಸೇನೆ ಇದ್ದಕ್ಕಿದ್ದಂತೆ ಗುಂಡಿನ ದಾಳಿ ಆರಂಭಿಸಿತು. ಭಾರತೀಯ ಸೇನಾ ನೆಲೆಗಳು ಮತ್ತು ನಾಗರಿಕರನ್ನು ಗುರಿಯಾಗಿರಿಸಿಕೊಂಡು ದಾಳಿ ನಡೆಸಲಾಯಿತು. ಭಾರತೀಯ ಪಡೆಗಳು ಪ್ತತ್ಯುತ್ತರ ನೀಡಲು ತೊಡಗಿದವು. ಭಾನುವಾರ ನಸುಕಿನವರೆಗೂ ಗುಂಡಿನ ಚಕಮಕಿ ಮುಂದುವರಿಯಿತು. ನಸುಕಿನ 4 ಗಂಟೆ ಸುಮಾರಿಗೆ ಯೋಧ ಹರಿ ಭಾಕರ್ ಗುಂಡೇಟು ತಗುಲಿ ತೀವ್ರವಾಗಿ ಗಾಯಗೊಂಡರು. ಸೇನಾ ಆಸ್ಪತ್ರೆಗೆ ಕರೆದೊಯ್ಯುವಷ್ಟರಲ್ಲಿ ಕೊನೆಯುಸಿರೆಳೆದಿದ್ದರು. ಪಾಕಿಸ್ತಾನ ಕಡೆಯೂ ಸಾವು ಸಂಭವಿಸಿರುವುದು ಖಚಿತ ಎಂದು ಲೆಫ್ಟಿನೆಂಟ್ ಕರ್ನಲ್ ದೇವೇಂದ್ರ ಆನಂದ್ ತಿಳಿಸಿದ್ದಾರೆ.
ಪಾಕ್ ಗುಂಡೇಟಿಗೆ ನಾಲ್ಕು ದಿನಗಳಲ್ಲಿ ಹುತಾತ್ಮರಾದ ಎರಡನೇ ಯೋಧ ಹರಿ ಭಾಕರ್. ರಾಜೌರಿ ಜಿಲ್ಲೆಯಲ್ಲಿ ಗುರುವಾರ ಯಶ್ಪಾಲ್ (24) ಹುತಾತ್ಮರಾಗಿದ್ದಾರೆ. ಪುಲ್ವಾಮಾದಲ್ಲಿ ಜೈಷೆ ಮೊಹಮದ್ ಉಗ್ರರು ಫೆ.14ರಂದು ದಾಳಿ ನಡೆಸಿ ಸಿಆರ್ಪಿಎಫ್ನ 44 ಯೋಧರನ್ನು ಬಲಿ ಪಡೆದಿದ್ದರು. ಫೆ.26ರಂದು ಭಾರತವು ಪಾಕಿಸ್ತಾನದ ಬಾಲಾಕೋಟ್ ಪ್ರದೇಶದಲ್ಲಿ ವಾಯುದಾಳಿ ನಡೆಸಿ ಉಗ್ರರ ಶಿಬಿರಗಳನ್ನು ಧ್ವಂಸಗೊಳಿಸಿದೆ. ಆ ಬಳಿಕ ಇಲ್ಲಿಯವರೆಗೆ ಪಾಕ್ ಸೇನೆ 125 ಬಾರಿ ಕದನ ವಿರಮ ಉಲ್ಲಂಘಿಸಿದೆ. 2018ರಲ್ಲಿ 2,936 ಬಾರಿ ಕದನ ವಿರಾಮ ಉಲ್ಲಂಘನೆಯಾಗಿದ್ದು, ಕಳೆದ 15 ವರ್ಷಗಳಲ್ಲೇ ಅತಿಹೆಚ್ಚು ಬಾರಿಯಾಗಿದೆ.
ಶನಿವಾರ ಸಂಜೆ 5.30ರ ಸುಮಾರಿಗೆ ಪಾಕಿಸ್ತಾನ ಸೇನೆ ಇದ್ದಕ್ಕಿದ್ದಂತೆ ಗುಂಡಿನ ದಾಳಿ ಆರಂಭಿಸಿತು. ಭಾರತೀಯ ಸೇನಾ ನೆಲೆಗಳು ಮತ್ತು ನಾಗರಿಕರನ್ನು ಗುರಿಯಾಗಿರಿಸಿಕೊಂಡು ದಾಳಿ ನಡೆಸಲಾಯಿತು. ಭಾರತೀಯ ಪಡೆಗಳು ಪ್ತತ್ಯುತ್ತರ ನೀಡಲು ತೊಡಗಿದವು. ಭಾನುವಾರ ನಸುಕಿನವರೆಗೂ ಗುಂಡಿನ ಚಕಮಕಿ ಮುಂದುವರಿಯಿತು. ನಸುಕಿನ 4 ಗಂಟೆ ಸುಮಾರಿಗೆ ಯೋಧ ಹರಿ ಭಾಕರ್ ಗುಂಡೇಟು ತಗುಲಿ ತೀವ್ರವಾಗಿ ಗಾಯಗೊಂಡರು. ಸೇನಾ ಆಸ್ಪತ್ರೆಗೆ ಕರೆದೊಯ್ಯುವಷ್ಟರಲ್ಲಿ ಕೊನೆಯುಸಿರೆಳೆದಿದ್ದರು. ಪಾಕಿಸ್ತಾನ ಕಡೆಯೂ ಸಾವು ಸಂಭವಿಸಿರುವುದು ಖಚಿತ ಎಂದು ಲೆಫ್ಟಿನೆಂಟ್ ಕರ್ನಲ್ ದೇವೇಂದ್ರ ಆನಂದ್ ತಿಳಿಸಿದ್ದಾರೆ.
ಪಾಕ್ ಗುಂಡೇಟಿಗೆ ನಾಲ್ಕು ದಿನಗಳಲ್ಲಿ ಹುತಾತ್ಮರಾದ ಎರಡನೇ ಯೋಧ ಹರಿ ಭಾಕರ್. ರಾಜೌರಿ ಜಿಲ್ಲೆಯಲ್ಲಿ ಗುರುವಾರ ಯಶ್ಪಾಲ್ (24) ಹುತಾತ್ಮರಾಗಿದ್ದಾರೆ. ಪುಲ್ವಾಮಾದಲ್ಲಿ ಜೈಷೆ ಮೊಹಮದ್ ಉಗ್ರರು ಫೆ.14ರಂದು ದಾಳಿ ನಡೆಸಿ ಸಿಆರ್ಪಿಎಫ್ನ 44 ಯೋಧರನ್ನು ಬಲಿ ಪಡೆದಿದ್ದರು. ಫೆ.26ರಂದು ಭಾರತವು ಪಾಕಿಸ್ತಾನದ ಬಾಲಾಕೋಟ್ ಪ್ರದೇಶದಲ್ಲಿ ವಾಯುದಾಳಿ ನಡೆಸಿ ಉಗ್ರರ ಶಿಬಿರಗಳನ್ನು ಧ್ವಂಸಗೊಳಿಸಿದೆ. ಆ ಬಳಿಕ ಇಲ್ಲಿಯವರೆಗೆ ಪಾಕ್ ಸೇನೆ 125 ಬಾರಿ ಕದನ ವಿರಮ ಉಲ್ಲಂಘಿಸಿದೆ. 2018ರಲ್ಲಿ 2,936 ಬಾರಿ ಕದನ ವಿರಾಮ ಉಲ್ಲಂಘನೆಯಾಗಿದ್ದು, ಕಳೆದ 15 ವರ್ಷಗಳಲ್ಲೇ ಅತಿಹೆಚ್ಚು ಬಾರಿಯಾಗಿದೆ.