ಆ್ಯಪ್ನಗರ

ಜಮ್ಮು-ಕಾಶ್ಮೀರ ಅಭಿವೃದ್ಧಿಗೆ 35ಎ ವಿಧಿ ಅಡ್ಡಿ

ವಾಸ್ತವಿಕವಾಗಿ ಸಂವಿಧಾನದ ಮೂಲ ಕರಡಿನಲ್ಲಿ 35ಎ ವಿಧಿ ಇರಲಿಲ್ಲ. ಅದನ್ನು ನಂತರ ಸೇರಿಸಲಾಯಿತು. ಇದು ರಾಜ್ಯದ ಹಿನ್ನೆಡೆಯ ಜತೆಗೆ ಅನೇಕ ರೀತಿಯ ತಾರತಮ್ಯಗಳಿಗೆ ಆಸ್ಪದ ಮಾಡಿಕೊಟ್ಟಿದೆ.

Vijaya Karnataka 29 Mar 2019, 5:00 am
ಹೊಸದಿಲ್ಲಿ: ಜಮ್ಮು-ಕಾಶ್ಮೀರದಲ್ಲಿ ಹೊರ ರಾಜ್ಯದವರು ಆಸ್ತಿ ಖರೀದಿಸಲು ಅನುಮತಿ ನೀಡದಿರುವ ಸಂವಿಧಾನದ 35ಎ ವಿಧಿಯಿಂದಾಗಿ ಕಣಿವೆ ರಾಜ್ಯ ಅಭಿವೃದ್ಧಿಯಿಂದ ವಂಚಿತಗೊಂಡಿದೆ ಎಂದು ಹಣಕಾಸು ಸಚಿವ ಅರುಣ್‌ ಜೇಟ್ಲಿ ಅಭಿಪ್ರಾಯಪಟ್ಟಿದ್ದಾರೆ. ರಾಜ್ಯವನ್ನು ಪ್ರತ್ಯೇಕಿಸುವ ಇದು 'ಸಂವಿಧಾತ್ಮಕ ದುರ್ಬಲತೆ'. ಇದರಿಂದಲೇ ರಾಜ್ಯದ ಆರ್ಥಿಕ ಪ್ರಗತಿಗೆ ತೀವ್ರ ಹಿನ್ನಡೆ ಉಂಟಾಗಿದೆ. ಕಳೆದ ಏಳು ದಶಕಗಳಿಂದ ಭಾರತದ ಬದಲಾವಣೆಯ ವೇಗದ ಜತೆಗೆ ಹೆಜ್ಜೆ ಹಾಕಲಾಗದೇ ಈ ರಾಜ್ಯ ಸೋತು ಹೋಗಿದೆ. ಇವತ್ತಿನ ಈ ದುಸ್ಥಿತಿಗೆ ಪಂಡಿತ್‌ ನೆಹರೂ ಅನುಸರಿಸಿದ ಅಸಂಬದ್ಧ ನೀತಿಗಳೇ ಕಾರಣ ಎಂದು ಜೇಟ್ಲಿ ತಮ್ಮ ಬ್ಲಾಗ್‌ ಬರಹದಲ್ಲಿ ದೂರಿದ್ದಾರೆ.
Vijaya Karnataka Web arun jaitley


ವಾಸ್ತವಿಕವಾಗಿ ಸಂವಿಧಾನದ ಮೂಲ ಕರಡಿನಲ್ಲಿ 35ಎ ವಿಧಿ ಇರಲಿಲ್ಲ. ಅದನ್ನು ನಂತರ ಸೇರಿಸಲಾಯಿತು. ಇದು ರಾಜ್ಯದ ಹಿನ್ನೆಡೆಯ ಜತೆಗೆ ಅನೇಕ ರೀತಿಯ ತಾರತಮ್ಯಗಳಿಗೆ ಆಸ್ಪದ ಮಾಡಿಕೊಟ್ಟಿದೆ. ಎರಡು ರಾಜ್ಯಗಳ ಪ್ರಜೆಗಳ ನಡುವೆ ಅದು ಭಿನ್ನತೆಯ ಗೆರೆಯನ್ನು ಎಳೆದಿದೆ. ಇದರಿಂದ ಸಾಮರಸ್ಯ ಕೊರತೆಯ ಜತೆಗೆ ಸಾಧನೆಯೂ ಶೂನ್ಯವಾಗಿದೆ. ಎಂದು ವಿಶ್ಲೇಷಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ