ಆ್ಯಪ್ನಗರ

ವಿದೇಶದ ನಾಯಕ ಹನುಮಂತನನ್ನು ಕೊಂಡಾಡಿದರೆ, ಇಲ್ಲಿನ ನಾಯಕ ನಿಂದಿಸಿದ್ರು: ಕೇಜ್ರಿವಾಲ್‌ ಹಳೆ ಟ್ವೀಟ್‌ ಸದ್ದು

ಸದ್ಯ ಟ್ವಿಟ್ಟರ್‌ನಲ್ಲಿ ಸಿಎಂ ಕೇಜ್ರಿವಾಲ್‌ಗೆ ಅತ್ತ ನುಂಗಲಾರದ ತುತ್ತಾಗಿರುವ ಪೋಸ್ಟ್‌ ನಾಲ್ಕು ವರ್ಷಗಳ ಹಿಂದಿನದ್ದಾಗಿದೆ. 2016ರಲ್ಲಿ ಮೋದಿ ಜೆಎನ್‌ಯುಗೆ ಹನುಮಂತ‌ನನ್ನು ಕಳುಹಿಸಿ ಬೆಂಕಿ ಹಾಕಿಸಿ, ಎಲ್ಲ ವಿಚಾರಗಳನ್ನು ಬೇರೆಡೆ ಸೆಳೆಯುತ್ತಿದ್ದಾರೆ ಎನ್ನುವ ರೀತಿಯ ಕಾರ್ಟೂನ್‌ ಇದಾಗಿತ್ತು. ಹನುಮಂತನನ್ನು ಕೆಟ್ಟ ರೀತಿ ಬಿಂಬಿಸಿದಕ್ಕೆ ನೆಟ್ಟಿಗರು ಅಂದೇ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು. ಕೇಜ್ರಿವಾಲ್‌ ಹನುಮಂತನಿಗೆ ಅವಮಾನ ಮಾಡಿದರು ಎನ್ನುವ ಹ್ಯಾಷ್‌ಟ್ಯಾಗ್‌ ಅಡಿ ಭಾರೀ ಆಂದೋಲನವೇ ನಡೆದಿತ್ತು.

Vijaya Karnataka Web 23 Jan 2021, 3:06 pm
ಬೆಂಗಳೂರು: ಕೊರೊನಾ ನಿರೋಧಕ ಲಸಿಕೆಗಳನ್ನು ಪೂರೈಸಿದ್ದಕ್ಕಾಗಿ ಬ್ರೆಜಿಲ್‌ ಅಧ್ಯಕ್ಷ ಜೇರ್‌ ಬೊಲ್ಸೊನಾರೊ ಅವರು ಭಾರತಕ್ಕೆ ರಾಮನ ಬಂಟ ಹನುಮಂತನನ್ನು ಹೋಲಿಸಿ ವಿಶಿಷ್ಟವಾಗಿ ಧನ್ಯವಾದ ಅರ್ಪಿಸಿದ್ದರು. ಕೊರೊನಾ ಲಸಿಕೆ ಸಂಬಂಧ ಟ್ವೀಟ್‌ ಮಾಡಿದ್ದ ಜೇರ್‌ ಬೊಲ್ಸೊನಾರೊ, ರಾಮಾಯಣದಲ್ಲಿ ಸಂಜೀವಿನಿ ಪರ್ವತ ಹೊತ್ತು ತಂದು ಲಕ್ಷ್ಮಣನಿಗೆ ಜೀವದಾನ ನೀಡಿದ ಹನುಮಂತನಂತೆ, ಕೊರೊನಾ ನಿರೋಧಕ ಲಸಿಕೆಗಳನ್ನು ಭಾರತದಿಂದ ಬ್ರೆಜಿಲ್‌ಗೆ ಕಳುಹಿಸಿಕೊಟ್ಟು ನಮ್ಮ ಪ್ರಜೆಗಳ ಜೀವ ಉಳಿಸಲಾಗಿದೆ ಎಂದು ಅವರು ಹನುಮಂತನ ಫೋಟೊವೊಂದನ್ನು ಟ್ವೀಟ್‌ ಮಾಡುವ ಮೂಲಕ ಬಿಂಬಿಸಿದ್ದರು.
Vijaya Karnataka Web Aravind kejirwal


ಇದಕ್ಕೆ ಭಾರತೀಯ ನೆಟ್ಟಿಗರು ಖುಷ್‌ ಆಗಿದ್ದು, ಲೈಕು, ಕಾಮೆಂಟ್‌ ಮೂಲಕ ಭಾರೀ ಸ್ಪಂದನೆ ಸೂಚಿಸಿದ್ದರು. ಬ್ರೆಜಿಲ್‌ ಅಧ್ಯಕ್ಷ ಜೇರ್‌ ಬೊಲ್ಸೊನಾರೊ ಪೋಸ್ಟ್‌ ಹಾಕಿದ ಕೆಲವೇ ಗಂಟೆಯಲ್ಲಿ ಭಾರೀ ಲೈಕ್ಸ್‌ ಹಾಗೂ ರಿಟ್ವೀಟ್‌ ದಕ್ಕಿದೆ. ಇದೀಗ ಈ ಪೋಸ್ಟ್‌, ಭಾರತದಲ್ಲಿ ಮತ್ತೊಂದು ಚರ್ಚೆಗೆ ದಾರಿ ಮಾಡಿಕೊಟ್ಟಿದೆ. ಹೌದು ಈ ಹಿಂದೆ ಭಗವಾನ್‌ ಹನುಮಂತನ ಫೋಟೊ ಬಳಸಿಕೊಂಡು ಸಿಎಂ ಅರವಿಂದ್‌ ಕೇಜ್ರಿವಾಲ್‌, ಪಿಎಂ ಮೋದಿ ವಿರುದ್ಧ ಮಾಡಿದ್ದ ಟೀಕೆಯ ಕಾರ್ಟೂನ್‌ ಬಗ್ಗೆ ಇದೀಗ ಚರ್ಚೆ ಆರಂಭವಾಗಿದೆ. ಟ್ವಿಟ್ಟರ್‌ನಲ್ಲಿ 2016ರ ಪೋಸ್ಟ್‌ನ ಫೋಟೊ ವೈರಲ್‌ ಆಗುತ್ತಿದೆ.

ನೆಟ್ಟಿಗರು ಏನು ಹೇಳುತ್ತಿದ್ದಾರೆ?
ಸದ್ಯ ಬ್ರೆಜಿಲ್‌ ಅಧ್ಯಕ್ಷ ಜೇರ್‌ ಬೊಲ್ಸೊನಾರೊ ಅವರ ಟ್ವೀಟನ್ನು ಉಲ್ಲೇಖಿಸಿಕೊಂಡು ಭಾರತೀಯ ನೆಟ್ಟಿಗರು, ದಿಲ್ಲಿ ಸಿಎಂ ಅರವಿಂದ ಕೇಜ್ರಿವಾಲ್‌ ವಿರುದ್ಧ ಮುಗಿಬಿದ್ದಿದ್ದಾರೆ. ಜೈನಿ ಎಂಬ ಟ್ವೀಟಿಗನೊಬ್ಬ ಈ ಸಂಬಂಧ ಟ್ವೀಟ್‌ ಮಾಡಿದ್ದು, ಭಾರತದ ನಾಯಕನ ಹನುಮಂತನನ್ನು ನಿಂದಿಸಿದ್ದಾರೆ. ಬ್ರೆಜಿಲ್‌ ಪ್ರಧಾನಿ ಹನುಮಂತನ ಚಿತ್ರದ ಮೂಲಕ ಕೃತಜ್ಞತೆ ಸಲ್ಲಿಸಿದ್ದಾರೆ ಎಂದು ಎರಡು ಫೋಟೊಗಳನ್ನು ಪೋಸ್ಟ್‌ ಮಾಡಿ ವ್ಯತ್ಯಾಸ ನೋಡಿ ಎಂದು ಹೇಳಿದ್ದಾನೆ. ಇಂತಹ ಹಲವು ಪೋಸ್ಟ್‌ಗಳು ಇದೀಗ ಟ್ವಿಟ್ಟರ್‌ನಲ್ಲಿ ಹರಿದಾಡುತ್ತಿದೆ. ಇನ್ನು ಇದಕ್ಕೆ ಅನೇಕರು ಕಾಮೆಂಟ್‌ ಮಾಡಿದ್ದು, ದಿಲ್ಲಿ ಸಿಎಂ ಕೇಜ್ರಿವಾಲ್‌ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಭಾರತಕ್ಕೆ ವಿಭಿನ್ನ ಧನ್ಯವಾದ: ಸಂಜೀವಿನ ಹೊತ್ತು ತರುವ ಹನುಮಂತನಿಗೆ ಹೋಲಿಸಿದ ಬ್ರೆಜಿಲ್‌ ಅಧ್ಯಕ್ಷ ಟ್ವೀಟ್‌!


ನೆಟ್ಟಿಗರಿಂದ ತರಾಟೆ!


ಇದು 2016ರ ಟ್ವೀಟ್‌!
ಸದ್ಯ ಟ್ವಿಟ್ಟರ್‌ನಲ್ಲಿ ಸಿಎಂ ಕೇಜ್ರಿವಾಲ್‌ಗೆ ಅತ್ತ ನುಂಗಲಾರದ ತುತ್ತಾಗಿರುವ ಪೋಸ್ಟ್‌ ನಾಲ್ಕು ವರ್ಷಗಳ ಹಿಂದಿನದ್ದಾಗಿದೆ. 2016ರಲ್ಲಿ ಮೋದಿ ಜೆಎನ್‌ಯುಗೆ ಹನುಮಂತ‌ನನ್ನು ಕಳುಹಿಸಿ ಬೆಂಕಿ ಹಾಕಿಸಿ, ಎಲ್ಲ ವಿಚಾರಗಳನ್ನು ಬೇರೆಡೆ ಸೆಳೆಯುತ್ತಿದ್ದಾರೆ ಎನ್ನುವ ರೀತಿಯ ಕಾರ್ಟೂನ್‌ ಇದಾಗಿತ್ತು. ಹನುಮಂತನನ್ನು ಕೆಟ್ಟ ರೀತಿ ಬಿಂಬಿಸಿದಕ್ಕೆ ನೆಟ್ಟಿಗರು ಅಂದೇ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು. ಕೇಜ್ರಿವಾಲ್‌ ಹನುಮಂತನಿಗೆ ಅವಮಾನ ಮಾಡಿದರು ಎನ್ನುವ ಹ್ಯಾಷ್‌ಟ್ಯಾಗ್‌ ಅಡಿ ಭಾರೀ ಆಂದೋಲನವೇ ನಡೆದಿತ್ತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ