ಹೊಸದಿಲ್ಲಿ: ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರ ಕಾರಿನ ಮೇಲೆ ಶುಕ್ರವಾರ ಕೆಲವರು ದಾಳಿ ನಡೆಸಿದ್ದಾರೆ. ದಿಲ್ಲಿ ಹೊರವಲಯದಲ್ಲಿನ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ಮರಳುತ್ತಿದ್ದ ವೇಳೆ ಸುಮಾರು 100 ಜನರಿದ್ದ ಗುಂಪು ಕಾರನ್ನು ಅಡ್ಡಗಟ್ಟಿ, ಬಡಿಗೆಗಳಿಂದ ಕಾರಿನ ಮೇಲೆ ಆಕ್ರಮಣ ನಡೆಸಿದೆ. ಘಟನೆಯಲ್ಲಿ ಯಾರಿಗೂ ಗಾಯಗಳಾಗಿಲ್ಲ. ಬಿಜೆಪಿ ಕಾರ್ಯಕರ್ತರೇ ಈ ಕೃತ್ಯ ಎಸಗಿದ್ದಾರೆ ಎಂದು ಆಮ್ ಆದ್ಮಿ ಪಾರ್ಟಿ ಆರೋಪಿಸಿದೆ. ಅಲ್ಲದೇ, ''ಮುಖ್ಯಮಂತ್ರಿಗೇ ರಕ್ಷಣೆ ಕೊಡಲಾಗದ ದಿಲ್ಲಿ ಪೊಲೀಸರು ಜನಸಾಮಾನ್ಯರಿಗೆ ಹೇಗೆ ರಕ್ಷಣೆ ನೀಡುತ್ತಾರೆ,'' ಎಂದು ಪಕ್ಷವು ಟ್ವಿಟರ್ನಲ್ಲಿ ಕಿಡಿಕಾರಿದೆ.
ಕೇಜ್ರಿವಾಲ್ ಕಾರಿನ ಮೇಲೆ ದಾಳಿ
ದಿಲ್ಲಿ ಹೊರವಲಯದಲ್ಲಿನ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ಮರಳುತ್ತಿದ್ದ ವೇಳೆ ಸುಮಾರು 100 ಜನರಿದ್ದ ಗುಂಪು ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಕಾರನ್ನು ಅಡ್ಡಗಟ್ಟಿ, ಬಡಿಗೆಗಳಿಂದ ಕಾರಿನ ಮೇಲೆ ಆಕ್ರಮಣ ನಡೆಸಿದೆ.
Vijaya Karnataka 9 Feb 2019, 5:00 am