ಆ್ಯಪ್ನಗರ

ವಯನಾಡಿನ ನೆರೆ ಸಂತ್ರಸ್ತರಿಗೆ ರಾಹುಲ್‌ರಿಂದ ಕಿಟ್‌ ವಿತರಣೆ

5 ಕೆ.ಜಿ. ಅಕ್ಕಿ, ಸಕ್ಕರೆ, ದವಸ ಧಾನ್ಯಗಳು, ಟೀ-ಕಾಫಿ ಪುಡಿ, ಅಡುಗೆ ಎಣ್ಣೆ ಹಾಗೂ ಸ್ವಚ್ಛತಾ ವಸ್ತುಗಳು ಮತ್ತು ಬ್ಲ್ಯಾಂಕೆಟ್‌, ದಿನ ಬಳಕೆಯ ಬಟ್ಟೆಗಳನ್ನು ಒಳಗೊಂಡ ಮೂರು ಕಿಟ್‌ಗಳ ವಿತರಣೆ ನಡೆಯಲಿದೆ ಎಂದು ಅವರು ಹೇಳಿದ್ದಾರೆ.

PTI 17 Aug 2019, 5:00 am
ವಯನಾಡ್‌: ಕೇರಳದ ವಯನಾಡಿನ ನೆರೆ ಸಂತ್ರಸ್ತರ ಭೇಟಿ ವೇಳೆ ನೀಡಿದ ಭರವಸೆಯಂತೆ ಸಂಸದ ರಾಹುಲ್‌ ಗಾಂಧಿ ಅವರು ಮೂರ್ನಾಲ್ಕು ದಿನಗಳಲ್ಲಿ 18 ಸಾವಿರ ಸಂತ್ರಸ್ತ ಕುಟುಂಬಗಳಿಗೆ ಆಹಾರದ ಕಿಟ್‌ ವಿತರಿಸಲಿದ್ದಾರೆ ಎಂದು ಕಾಂಗ್ರೆಸ್‌ ತಿಳಿಸಿದೆ. ''ವಯನಾಡಿನಲ್ಲಿ ಪ್ರವಾಹ ತಗ್ಗಿದ್ದು ಮುಂದಿನ ಎರಡು ದಿನಗಳಲ್ಲಿ ಸಂತ್ರಸ್ತರು ತಮ್ಮ ನೆಲೆಗಳಿಗೆ ವಾಪಸ್‌ ಆಗಲಿದ್ದಾರೆ. ರಾಹುಲ್‌ ಆಗಸ್ಟ್‌ 20ರಂದು ಪುನಃ ಇಲ್ಲಿಗೆ ಆಗಮಿಸುವ ಸಾಧ್ಯತೆಗಳಿವೆ. ಅಂದು ರಾಹುಲ್‌ ಮೂರು ಬಗೆಯಲ್ಲಿ ಕಿಟ್‌ಗಳನ್ನು ವಿತರಿಸಲಿದ್ದಾರೆ,'' ಎಂದು ಅವರ ಕಚೇರಿಯ ಕಾರ‍್ಯದರ್ಶಿ ಬೈಜು ಹೇಳಿದ್ದಾರೆ. 5 ಕೆ.ಜಿ. ಅಕ್ಕಿ, ಸಕ್ಕರೆ, ದವಸ ಧಾನ್ಯಗಳು, ಟೀ-ಕಾಫಿ ಪುಡಿ, ಅಡುಗೆ ಎಣ್ಣೆ ಹಾಗೂ ಸ್ವಚ್ಛತಾ ವಸ್ತುಗಳು ಮತ್ತು ಬ್ಲ್ಯಾಂಕೆಟ್‌, ದಿನ ಬಳಕೆಯ ಬಟ್ಟೆಗಳನ್ನು ಒಳಗೊಂಡ ಮೂರು ಕಿಟ್‌ಗಳ ವಿತರಣೆ ನಡೆಯಲಿದೆ ಎಂದು ಅವರು ಹೇಳಿದ್ದಾರೆ. ಕೇರಳದಾದ್ಯಂತ 196 ನಿರಾಶ್ರಿತ ಶಿಬಿರಗಳಲ್ಲಿ ಇನ್ನೂ 9248 ಕುಟುಂಬಗಳು ಆಶ್ರಯ ಪಡೆದಿವೆ.
Vijaya Karnataka Web rahul gandhi

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ