ಆ್ಯಪ್ನಗರ

ಮಸೂದ್‌ ಅಜರ್‌ ಮೌಲಾನಾ ಅಲ್ಲ, ಉಗ್ರ ನಾಯಿ: ಅಸಾದುದ್ದೀನ್‌ ಓವೈಸಿ

ನಮ್ಮಲ್ಲಿ ಪರಮಾಣು ಬಾಂಬ್‌ಗಳಿದೆ ಎಂದು ಇಮ್ರಾನ್‌ ಹೇಳಿಕೆ ಕೊಟ್ಟಿದ್ದಾರೆ. ಅವರಿಗಿಂತಲೂ ಹೆಚ್ಚು ನಮ್ಮಲ್ಲಿದೆ. ಇಂಥ ಬಾಲಿಶ ಹೇಳಿಕೆಗಳನ್ನು ಘನತೆಯುಕ್ತ ಹುದ್ದೆಯಲ್ಲಿದ್ದವರು ಹೇಳಬಾರದು.

Vijaya Karnataka Web 3 Mar 2019, 10:07 pm
ಹೈದರಾಬಾದ್: ಭಾರತೀಯ ಯೋಧರ ಸಾವಿಗೆ ಕಾರಣನಾಗಿರುವ ಜೈಷೆ ಮೊಹಮದ್ ಉಗ್ರ ಸಂಘಟನೆ ನಾಯಕ ಮಸೂದ್‌ ಅಜರ್‌, ಮೌಲಾನಾ ಅಲ್ಲ, ಆತ ಮಾನವೀಯತೆ ಕೊಲೆಗಾರ ಎಂದು ಎಐಎಂಎಂ ಮುಖ್ಯಸ್ಥ ಅಸಾದುದ್ದೀನ್‌ ಓವೈಸಿ ಕಿಡಿಕಾರಿದ್ದಾರೆ.
Vijaya Karnataka Web Owaisi


ಹೈದರಾಬಾದ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಓವೈಸಿ, ಉಗ್ರ ಸಂಘಟನೆಯನ್ನು ಹುಟ್ಟು ಹಾಕಿರುವ ಮಸೂದ್‌ ಅಜರ್‌, ಮಾನವ ರೂಪದ ರಾಕ್ಷಸ, ಉಗ್ರ ನಾಯಿ ಎಂದರು.

ಇಂಥ ರಾಕ್ಷಸ ನಾಯಿಯನ್ನು ಸಾಕುತ್ತಿರುವ ಪಾಕಿಸ್ತಾನ ಮತ್ತು ಆ ದೇಶದ ಪ್ರಧಾನಿ ಇಮ್ರಾನ್‌ ಖಾನ್‌ಗೆ ಛೀಮಾರಿ ಹಾಕಬೇಕು ಎಂದರು.

ನಮ್ಮಲ್ಲಿ ಪರಮಾಣು ಬಾಂಬ್‌ಗಳಿದೆ ಎಂದು ಇಮ್ರಾನ್‌ ಹೇಳಿಕೆ ಕೊಟ್ಟಿದ್ದಾರೆ. ಅವರಿಗಿಂತಲೂ ಹೆಚ್ಚು ನಮ್ಮಲ್ಲಿದೆ. ಇಂಥ ಬಾಲಿಶ ಹೇಳಿಕೆಗಳನ್ನು ಘನತೆಯುಕ್ತ ಹುದ್ದೆಯಲ್ಲಿದ್ದವರು ಹೇಳಬಾರದು ಎಂದು ತಿಳಿಸಿದರು.

ಪಾಕಿಸ್ತಾನದಲ್ಲಿರುವ ಉಗ್ರ ಸಂಘಟನೆಗಳನ್ನು ಮಟ್ಟ ಹಾಕಬೇಕು ಎಂದು ಓವೈಸಿ ಕರೆ ನೀಡಿದರು.

ಪಾಕ್‌ ನೆಲದಲ್ಲಿರುವ ಉಗ್ರ ನೆಲೆಗಳ ಮೇಲೆ ಭಾರತ ಸರ್ಜಿಕಲ್‌ ಸ್ಟ್ರೈಕ್ ನಡೆಸಿದ್ದು ಸೂಕ್ತವಾಗಿದೆ. ಈ ವಿಷಯದಲ್ಲಿ ನಾವು ಸಶಸ್ತ್ರ ಪಡೆಗಳು ಹಾಗೂ ಸರಕಾರದ ಬೆಂಬಲಕ್ಕೆ ಇದ್ದೇವೆ ಎಂದು ಅಸಾದುದ್ದೀನ್‌ ಓವೈಸಿ ಹೇಳಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ