ಆ್ಯಪ್ನಗರ

ದುರ್ಬಲ ಕಾಂಗ್ರೆಸ್‌ನಿಂದ ಮುಸ್ಲಿಮರಿಗೆ ಪ್ರಯೋಜನವಿಲ್ಲ: ಅಸಾದುದ್ದೀನ್ ಓವೈಸಿ

'ತಮ್ಮ ಮತ ಎಲ್ಲಿಗೆ ಹೋಗುತ್ತಿದೆ? ಏನಾಗುತ್ತಿದೆ ಎಂಬುದನ್ನು ಮುಸ್ಲಿಂ ಸಮುದಾಯ ಗಂಭೀರವಾಗಿ ಚಿಂತಿಸಲು ಇದು ಸಕಾಲ. ಕಾಂಗ್ರೆಸ್ ಈಗ ದುರ್ಬಲವಾಗಿದೆ' ಎಂದು ಓವೈಸಿ ಹೇಳಿದರು. 'ನೀವು (ಮುಸ್ಲಿಮರು ಮತ್ತು ಇತರ ಅಲ್ಪಸಂಖ್ಯಾತರು) ಕಾಂಗ್ರೆಸ್ ಮತ್ತು ಇತರ ಸೆಕ್ಯುಲರ್ ಪಕ್ಷಗಳನ್ನು ಬಿಡಲು ಸಿದ್ಧರಿಲ್ಲ. ಆದರೆ ಜನರ ಆಶೋತ್ತರಗಳನ್ನು ಈಡೇರಿಸಲು ಆ ಪಕ್ಷಗಳು ಶಕ್ತವಾಗಿಲ್ಲ' ಎಂದು ಓವೈಸಿ ಹೇಳಿದರು.

TNN 11 Jun 2019, 4:37 pm
ಹೈದರಾಬಾದ್: ದೇಶದಲ್ಲಿ ಕಾಂಗ್ರೆಸ್ ಈಗ ರಾಜಕೀಯವಾಗಿ ಅತ್ಯಂತ ದುರ್ಬಲವಾಗಿದ್ದು, ಅದಕ್ಕೆ ಮತ ಹಾಕುವ ಮುಸ್ಲಿಮರು ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದು ಎಐಎಂಐಎಂ ಅಧ್ಯಕ್ಷ ಅಸಾದುದ್ದೀನ್ ಓವೈಸಿ ಕರೆ ನೀಡಿದ್ದಾರೆ.
Vijaya Karnataka Web Asaduddin Owaisi


'ತಮ್ಮ ಮತ ಎಲ್ಲಿಗೆ ಹೋಗುತ್ತಿದೆ? ಏನಾಗುತ್ತಿದೆ ಎಂಬುದನ್ನು ಮುಸ್ಲಿಂ ಸಮುದಾಯ ಗಂಭೀರವಾಗಿ ಚಿಂತಿಸಲು ಇದು ಸಕಾಲ. ಕಾಂಗ್ರೆಸ್ ಈಗ ದುರ್ಬಲವಾಗಿದೆ' ಎಂದು ಓವೈಸಿ ಹೇಳಿದರು.

'ನೀವು (ಮುಸ್ಲಿಮರು ಮತ್ತು ಇತರ ಅಲ್ಪಸಂಖ್ಯಾತರು) ಕಾಂಗ್ರೆಸ್ ಮತ್ತು ಇತರ ಸೆಕ್ಯುಲರ್ ಪಕ್ಷಗಳನ್ನು ಬಿಡಲು ಸಿದ್ಧರಿಲ್ಲ. ಆದರೆ ಜನರ ಆಶೋತ್ತರಗಳನ್ನು ಈಡೇರಿಸಲು ಆ ಪಕ್ಷಗಳು ಶಕ್ತವಾಗಿಲ್ಲ' ಎಂದು ಓವೈಸಿ ಹೇಳಿದರು.

ಮಹಾರಾಷ್ಟ್ರದ ಔರಂಗಾಬಾದ್ ಲೋಕಸಭಾ ಕ್ಷೇತ್ರದಿಂದ ಓವೈಸಿ ಪಕ್ಷ ಗೆಲುವು ಸಾಧಿಸಿತ್ತು. ಕಿಶನ್‌ಗಂಜ್ ಕ್ಷೇತ್ರದಲ್ಲಿ ಭಾರೀ ಪ್ರಮಾಣದ ಮತ ಗಳಿಸಿತ್ತು.

ಕಾಂಗ್ರೆಸ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಅವರು, ವಯನಾಡಿನಲ್ಲಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಗೆಲುವಿಗೆ ಮುಸ್ಲಿಂ ಮತಗಳೇ ಕಾರಣ ಎಂದು ಪ್ರತಿಪಾದಿಸಿದರು. 'ರಾಹುಲ್ ಅಮೇಠಿಯಲ್ಲಿ ಸೋತಿದ್ದಾರೆ, ವಯನಾಡಿನಲ್ಲಿ ಗೆದ್ದಿದ್ದಾರೆ. ಕೇರಳದ ವಯನಾಡಿನ ಶೇ 45ರಷ್ಟು ಮತದಾರರು ಮುಸ್ಲಿಮರು ಎಂಬುದು ಅಷ್ಟೇ ಗಮನಾರ್ಹ ಸಂಗತಿ' ಎಂದು ಓವೈಸಿ ಬಣ್ಣಿಸಿದರು.

'ಪ್ರಾದೇಶಿಕ ಪಕ್ಷಗಳೇ ಬಿಜೆಪಿಗೆ ತೊಡಕಾಗಿವೆ. ದಕ್ಷಿಣ ಭಾರತದಲ್ಲಿ ಪ್ರಾದೇಶಿಕ ಪಕ್ಷಗಳು ಪ್ರಬಲವಾಗಿರದಿದ್ದರೆ ಬಿಜೆಪಿ ಇಲ್ಲೂ ಜಯಭೇರಿ ಬಾರಿಸುತ್ತಿತ್ತು' ಎಂದು ಓವೈಸಿ ಹೇಳಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ