ಆ್ಯಪ್ನಗರ

ಚಿತ್ತೋಡ್‌ಗಢ ಕೋಟೆಯಲ್ಲಿರುವ ಪದ್ಮಾವತಿ ಕುರಿತ ಮಾಹಿತಿ ಫಲಕ ಮುಚ್ಚಿದ ಇಲಾಖೆ

ಮೊಘಲ್‌ ದೊರೆ ಅಲ್ಲಾವುದ್ದೀನ್‌ ಖಿಲ್ಜಿ ಮೊದಲ ಬಾರಿಗೆ ರಾಣಿ ಪದ್ಮಾವತಿಯನ್ನು ನೋಡಿದ್ದು ಇದೇ ಕೋಟೆಯಲ್ಲಿ...

Vijaya Karnataka Web 27 Nov 2017, 4:05 pm
ಜೈಪುರ: ಪದ್ಮಾವತಿ ಚಿತ್ರದ ವಿವಾದ ಸದ್ಯಕ್ಕೆ ಬಗೆಹರಿಯುವ ಲಕ್ಷಣಗಳು ಕಾಣುತ್ತಿಲ್ಲ. ಚಿತ್ರ ಬಿಡುಗಡೆಗೆ ಮಾತ್ರವಲ್ಲ ಈಗ ಪದ್ಮಾವತಿಗೆ ಸಂಬಂಧಪಟ್ಟ ವಸ್ತುಗಳು, ಜಾಗಗಳನ್ನು ಕಾಪಾಡಿಕೊಳ್ಳಬೇಕಾದ ಪರಿಸ್ಥಿತಿ ಬಂದಿದೆ.
Vijaya Karnataka Web asi covers plaque outside padmini mahal that states khilji saw the queen
ಚಿತ್ತೋಡ್‌ಗಢ ಕೋಟೆಯಲ್ಲಿರುವ ಪದ್ಮಾವತಿ ಕುರಿತ ಮಾಹಿತಿ ಫಲಕ ಮುಚ್ಚಿದ ಇಲಾಖೆ


ರಾಜಸ್ಥಾನದ ಚಿತ್ತೋಡ್‌ಗಢದ ಕೋಟೆಯಲ್ಲಿರುವ ಪದ್ಮಾವತಿ ಕುರಿತ ಮಾಹಿತಿ ಫಲಕವನ್ನು ಈಗ ಭಾರತೀಯ ಪುರಾತತ್ವ ಇಲಾಖೆ ರಕ್ಷಿಸಲು ಮುಂದಾಗಿದೆ.

ಪದ್ಮಾವತಿಯನ್ನು ಮೊದಲ ಬಾರಿಗೆ ಮೊಘಲ್‌ ದೊರೆ ಅಲ್ಲಾವುದ್ದೀನ್‌ ಖಿಲ್ಜಿ ಇದೇ ಜಾಗದಲ್ಲಿ ನೋಡಿದ್ದ ಎಂಬುದು ಇತಿಹಾಸದ ಪುಟಗಳಲ್ಲಿ ದಾಖಲಿಸಲಾಗಿದೆ.

ಈ ಮಾಹಿತಿಯನ್ನು ಇಲ್ಲಿರುವ ಫಲಕದ ಮೇಲೆ ಕೆತ್ತಲಾಗಿದೆ. ಈ ಮಾಹಿತಿಯ ಫಲಕವನ್ನು ಇಲ್ಲಿಂದ ತೆಗೆದು ಹಾಕಬೇಕು. ಇಲ್ಲದಿದ್ದರೆ ಅದನ್ನು ನಾಶಪಡಿಸುತ್ತೇವೆ ಎಂದು ಶ್ರೀ ರಜಪೂತ ಕರ್ಣಿ ಸೇನಾ ಬೆದರಿಕೆ ಹಾಕಿದೆ.

ಇದರಿಂದ ಎಚ್ಚೆತ್ತುಕೊಂಡಿರುವ ಪುರಾತತ್ವ ಇಲಾಖೆ ಈ ಮಾಹಿತಿಯನ್ನು ಬಟ್ಟೆಯಿಂದ ಮುಚ್ಚಿದೆ.

ಕೋಟೆಯ ಈ ಭಾಗದಿಂದಲೇ ಪದ್ಮಾವತಿಯನ್ನು ಖಿಲ್ಜಿ ನೋಡಿದ್ದ ಎಂದು ಇತಿಹಾಸ ತಜ್ಞರು ತಿಳಿಸಿದ್ದಾರೆ.

ಪದ್ಮಾವತಿ ಚಿತ್ರ ಚಿತ್ರೀಕರಣ ನಡೆಯುತ್ತಿದ್ದಾಗಿನಿಂದಲೂ ಪ್ರತಿಭಟನೆ ನಡೆದ ಹಿನ್ನೆಲೆಯಲ್ಲಿ ಕೋಟೆಯ ಕೆಲವೊಂದು ಭಾಗಗಳನ್ನು ಪ್ರವಾಸಿಗರ ವೀಕ್ಷಣೆಗೆ ನಿಷೇಧಿಸಲಾಗಿದೆ.

ASI covers plaque outside Padmini Mahal that states Khilji saw the queen

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ