ಆ್ಯಪ್ನಗರ

ಕೆಲಸ ಮಾಡಿ ಹಣ ಸಂಪಾದಿಸು ಎಂದು ಬುದ್ದಿ ಹೇಳಿದ ತಂದೆಯನ್ನೇ ಕೊಂದ ಪಾಪಿ ಪುತ್ರ

ಕೆಲಸಕ್ಕೆ ಸೇರಿ ಹಣ ಸಂಪಾದಿಸುವ ಮೂಲಕ ಉತ್ತಮ ಜೀವನ ರೂಪಿಸಿಕೋ ಎಂದು ಬುದ್ಧಿವಾದ ಹೇಳಿದ ತಂದೆಯನ್ನು ಪಾಪಿ ಪುತ್ರ ಕೊಲೆ ಮಾಡಿರುವ ಘಟನೆ ಗುಜರಾತಿನ ವಡೋದರಾ ಜಿಲ್ಲೆಯ ದಬೋಯಿ ಸಮೀಪದ ಸಿಮಾದಿಯಾ ಗ್ರಾಮದಲ್ಲಿ ನಡೆದಿದೆ.

TIMESOFINDIA.COM 25 Sep 2018, 12:40 pm
ವಡೋದರಾ: ಕೆಲಸಕ್ಕೆ ಸೇರಿ ಹಣ ಸಂಪಾದಿಸುವ ಮೂಲಕ ಉತ್ತಮ ಜೀವನ ರೂಪಿಸಿಕೋ ಎಂದು ಬುದ್ಧಿವಾದ ಹೇಳಿದ ತಂದೆಯನ್ನು ಪಾಪಿ ಪುತ್ರ ಕೊಲೆ ಮಾಡಿರುವ ಘಟನೆ ಗುಜರಾತಿನ ವಡೋದರಾ ಜಿಲ್ಲೆಯ ದಬೋಯಿ ಸಮೀಪದ ಸಿಮಾದಿಯಾ ಗ್ರಾಮದಲ್ಲಿ ನಡೆದಿದೆ.
Vijaya Karnataka Web murder


ರಾಮಸಿನ್ಹ್ ತಡ್ವಿ (60) ಪುತ್ರನಿಂದಲೇ ಹತನಾದ ದುರ್ದೈವಿ. ಘಟನೆ ಸಂಬಂಧ ಆರೋಪಿ ರಾಜೇಂದ್ರ ತಡ್ವಿಯನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸಿದ್ದಾರೆ.

ಶನಿವಾರ ರಾತ್ರಿ ಊಟದ ಬಳಿಕ ರಾಜೇಂದ್ರ ಎಂದಿನಂತೆ ಸ್ನೇಹಿತರ ಜತೆ ಊರು ಸುತ್ತಲು ಸಿದ್ದತೆ ನಡೆಸಿದ್ದ. ವೃಥಾ ಕಾಲಹರಣ ಮಾಡುತ್ತಿರುವ ಪುತ್ರನ ವರ್ತನೆಯಿಂದ ಬೇಸತ್ತ ತಂದೆ, ಉಂಡಾಡಿ ಗುಂಡನಂತೆ ಊರು ಸುತ್ತುವುದನ್ನು ಬಿಟ್ಟು ಕೆಲಸಕ್ಕೆ ಸೇರುವ ವಿಚಾರ ಮಾಡು ಎಂದು ಬುದ್ದಿ ಮಾತು ಹೇಳಿದ್ದಾರೆ. ಇದರಿಂದ ಕೋಪಗೊಂಡ ಪುತ್ರ ತಂದೆ ಜತೆಯೇ ಜಗಳಕ್ಕಿಳಿದಿದ್ದಾನೆ. ಇಬ್ಬರ ನಡುವೆ ವಾಗ್ವಾದ ನಡೆದು ಪರಿಸ್ಥಿತಿ ವಿಕೋಪಕ್ಕೆ ತೆರಳಿತ್ತು. ಸಿಟ್ಟಿನಲ್ಲಿದ್ದ ಪುತ್ರ ರಾಜೇಂದ್ರ ಮರದ ದಿಮ್ಮಿಯಿಂದ ತಂದೆ ಮೇಲೆ ಹಲ್ಲೆ ನಡೆಸಿದ್ದಾನೆ. ಘಟನೆ ತೀವ್ರಗಾಯಗೊಂಡಿದ್ದ ರಾಮಸಿನ್ಹ್ ತಡ್ವಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಘಟನೆ ಸಂಬಂಧ ದಾಬೋಯಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 'ರಾಜೇಂದ್ರ ನಿರುದ್ಯೋಗಿಯಾಗಿರುವ ಕಾರಣ ಪತ್ನಿ ಸಹ ಆತನನ್ನು ತೊರೆದು ತವರು ಮನೆ ಸೇರಿದ್ದಾರೆ. ಬಾಲಿವುಡ್‌ ನಟ ಸಂಜಯ್ ದತ್ ಅವರ ಅಭಿಮಾನಿಯಾಗಿರುವ ರಾಜೇಂದ್ರ, ಅವರಂತೆಯೇ ಹೇರ್‌ಸ್ಟೈಲ್ ಮಾಡಿಕೊಂಡು ಊರು ಸುತ್ತುತ್ತಿದ್ದ' ಎಂದು ಪೊಲೀಸರು ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ