ಆ್ಯಪ್ನಗರ

ಅಸ್ಸಾಂ ಮಳೆ: ಸಂಕಷ್ಟದಲ್ಲಿ 9 ಲಕ್ಷ ಜನರ

ಬ್ರಹ್ಮಪುತ್ರ, ಬುರ್ಹಿದಿಹಿಂಗ್‌, ಧನ್‌ಸಿರಿ, ದೆಸಂಗ್‌, ಜಿಯಾ ಭರಾಲಿ, ಕೊಪಿಲಿ, ಪುಥಿಮರಿ, ಬೆಕಿ, ಕತಖಲ್‌ ಮತ್ತು ಕುಶಿಯಾರ ಸೇರಿದಂತೆ ರಾಜ್ಯದ ಎಲ್ಲಾ ಪ್ರಮುಖ ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು, ಅಕ್ಕಪಕ್ಕದ ಗ್ರಾಮಗಳ ಜನರನ್ನು ಸುರಕ್ಷಿತ ತಾಣಗಳಿಗೆ ಸ್ಥಳಾಂತರಿಸಲಾಗಿದೆ.

PTI 14 Jul 2019, 5:00 am
ಗುವಾಹಟಿ: ವರ್ಷಧಾರೆಯ ಅಬ್ಬರಕ್ಕೆ ಅಸ್ಸಾಂನಲ್ಲಿ ಅಲ್ಲೋಲಕಲ್ಲೋಲ ಸೃಷ್ಟಿಯಾಗಿದೆ. ರಾಜ್ಯದ 33ರ ಪೈಕಿ 22 ಜಿಲ್ಲೆಗಳು ಪ್ರವಾಹ ಪೀಡಿತಗೊಂಡಿವೆ. ಹತ್ತಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದು, 9 ಲಕ್ಷ ಮಂದಿ ಪ್ರವಾಹದಿಂದ ಸಂಕಷ್ಟಕ್ಕೆ ಸಿಲುಕಿದ್ದಾರೆ.
Vijaya Karnataka Web assam floods

ಬ್ರಹ್ಮಪುತ್ರ, ಬುರ್ಹಿದಿಹಿಂಗ್‌, ಧನ್‌ಸಿರಿ, ದೆಸಂಗ್‌, ಜಿಯಾ ಭರಾಲಿ, ಕೊಪಿಲಿ, ಪುಥಿಮರಿ, ಬೆಕಿ, ಕತಖಲ್‌ ಮತ್ತು ಕುಶಿಯಾರ ಸೇರಿದಂತೆ ರಾಜ್ಯದ ಎಲ್ಲಾ ಪ್ರಮುಖ ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು, ಅಕ್ಕಪಕ್ಕದ ಗ್ರಾಮಗಳ ಜನರನ್ನು ಸುರಕ್ಷಿತ ತಾಣಗಳಿಗೆ ಸ್ಥಳಾಂತರಿಸಲಾಗಿದೆ.
68 ಕಂದಾಯ ವ್ಯಾಪ್ತಿಯ 1,556 ಗ್ರಾಮಗಳ 9 ಲಕ್ಷ ಜನ ಪ್ರವಾಹದಿಂದ ಸಂತ್ರಸ್ತಗೊಂಡಿದ್ದಾರೆ ಎಂದು ಅಸ್ಸಾಂ ರಾಜ್ಯ ವಿಕೋಪ ನಿರ್ವಹಣಾ ಪ್ರಾಧಿಕಾರದ ವರದಿ ತಿಳಿಸಿದೆ.

ಉತ್ತರದಲ್ಲಿ ಸಡಗರ: ಇದುವರೆಗೆ ಬಿಸಿಲಿನ ಬೇಗೆಯಿಂದ ತತ್ತರಿಸಿದ್ದ ಉತ್ತರ ಭಾರತಕ್ಕೆ ಈಗ ಮಳೆ ಸಿಂಚನ ನೆಮ್ಮದಿ ನೀಡಿದೆ. ಉತ್ತರಾಖಂಡ , ಉತ್ತರ ಪ್ರದೇಶ, ಛತ್ತೀಸ್‌ಗಢ, ಗುಜರಾತ್‌, ರಾಜಸ್ಥಾನ, ಮಹಾರಾಷ್ಟ್ರ, ಆಂಧ್ರಪ್ರದೇಶ ಮತ್ತು ತೆಲಂಗಾಣದಲ್ಲಿ ಆರಂಭಗೊಂಡಿರುವ ಮಳೆ ಇನ್ನು ಹಲವು ದಿನ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ದಿಲ್ಲಿಯಲ್ಲಿಯೂ ತಂಪು ಹವೆ ಎಂಟ್ರಿ ಪಡೆದಿದ್ದು ಉಷ್ಣಾಂಶ 29 ಡಿಗ್ರಿ ಸೆಲ್ಸಿಯಸ್‌ಗೆ ತಗ್ಗಿದೆ.
ಹಿಮಾಚಲ ಪ್ರದೇಶ, ಜಮ್ಮು-ಕಾಶ್ಮೀರ, ಹರಿಯಾಣ ಮತ್ತು ಪಂಜಾಬ್‌ ರಾಜ್ಯಗಳಲ್ಲಿ ಜುಲೈ 14-16ರ ವೇಳೆಗೆ ಮಳೆ ಆರಂಭಗೊಳ್ಳುವ ಸಾಧ್ಯತೆ ಇದೆ ಎಂದು ಇಲಾಖೆ ತಿಳಿಸಿದೆ.

.................
ನೇಪಾಳದಲ್ಲಿ ಅಯೋಮಯ


ಕಠ್ಮಂಡು: ನೆರೆಯ ನೇಪಾಳದಲ್ಲಿ ಮುಂಗಾರು ಮಳೆಯ ರೌದ್ರಾವತಾರಕ್ಕೆ ಶನಿವಾರ 28 ಮಂದಿ ಮೃತಪಟ್ಟಿದ್ದು, 16ಕ್ಕೂ ಹೆಚ್ಚು ಮಂದಿ ಕಣ್ಮರೆಯಾಗಿದ್ದಾರೆ.
ಕಳೆದ ಹಲವು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಗೆ ಅನೇಕ ಕಡೆಗಳಲ್ಲಿ ಪ್ರವಾಹ ಪರಿಸ್ಥಿತಿ ತಲೆದೋರಿದೆ. ಭೂಕುಸಿತ ಪ್ರಕರಣಗಳು ಹೆಚ್ಚಿದ್ದು, ಪ್ರಮುಖ ಹೆದ್ದಾರಿಗಳ ಸಾರಿಗೆ ವ್ಯವಸ್ಥೆ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ.
ನದಿ ತೊರೆಗಳನು ಉಕ್ಕಿಹರಿಯುತ್ತಿದ್ದು, ದಡಗಳ ಭೂಸವಕಳಿಯು ರಕ್ಷಣಾ ತಂಡಗಳಿಗೆ ಹೊಸ ತಲೆನೋವು ಉಂಟು ಮಾಡಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ