ಆ್ಯಪ್ನಗರ

ಸರಕಾರಿ ಅನುದಾನಿತ ಮದರಸಾಗಳನ್ನು ಮುಚ್ಚಲು ಅಸ್ಸಾಂ ಸರಕಾರ ತೀರ್ಮಾನ..!

ಸರಕಾರಿ ಅನುದಾನಿತ ಎಲ್ಲ ಮದರಸಾಗಳನ್ನು ಮುಚ್ಚುವ ಸಂಬಂಧ ಮುಂದಿನ ತಿಂಗಳು ಸರಕಾರದ ಅಧಿಸೂಚನೆ ಹೊರಬೀಳಲಿದೆ. ಆದರೆ ಖಾಸಗಿ ಸಂಸ್ಥೆಗಳು ಮತ್ತು ವ್ಯಕ್ತಿಗಳ ನೆರವಿನಿಂದ ನಡೆಸಲಾಗುತ್ತಿರುವ ಮದರಸಾಗಳ ಚಟುವಟಿಕೆಗಳಿಗೆ ಸರಕಾರ ಅಡ್ಡಿಯಾಗಲ್ಲ ಎಂದು ಹಿಮಂತಾ ಬಿಸ್ವಾ ಶರ್ಮಾ ಸ್ಪಷ್ಟಪಡಿಸಿದ್ದಾರೆ.

Vijaya Karnataka 10 Oct 2020, 6:13 am
ಗುವಾಹಟಿ: ಸಾರ್ವಜನಿಕರ ತೆರಿಗೆ ಹಣದಲ್ಲಿ ಧಾರ್ಮಿಕ ಶಿಕ್ಷಣ ಸಂಸ್ಥೆಗಳು ಕಾರ್ಯನಿರ್ವಹಿಸಲು ಅವಕಾಶ ನೀಡಲ್ಲ. ಹಾಗಾಗಿ ಸರಕಾರಿ ಅನುದಾನಿತ ಎಲ್ಲ ಮದರಸಾಗಳನ್ನು ಮುಚ್ಚುವಂತೆ ಅಧಿಕೃತ ಆದೇಶ ಹೊರಡಿಸಲಾಗುವುದು ಎಂದು ಅಸ್ಸಾಂನ ಹಣಕಾಸು ಸಚಿವ ಹಿಮಂತಾ ಬಿಸ್ವಾ ಶರ್ಮಾ ಹೇಳಿದ್ದಾರೆ.
Vijaya Karnataka Web madarasa


ರಾಹುಲ್ ಗಾಂಧಿ ಆಪ್ತನ ವಿರುದ್ಧ ದೇಶದ್ರೋಹ ಪ್ರಕರಣ ದಾಖಲಿಸಿದ ಹತ್ರಾಸ್ ಪೊಲೀಸರು

ಸರಕಾರಿ ಅನುದಾನಿತ ಎಲ್ಲ ಮದರಸಾಗಳನ್ನು ಮುಚ್ಚುವ ಸಂಬಂಧ ಮುಂದಿನ ತಿಂಗಳು ಸರಕಾರದ ಅಧಿಸೂಚನೆ ಹೊರಬೀಳಲಿದೆ. ಆದರೆ ಖಾಸಗಿ ಸಂಸ್ಥೆಗಳು ಮತ್ತು ವ್ಯಕ್ತಿಗಳ ನೆರವಿನಿಂದ ನಡೆಸಲಾಗುತ್ತಿರುವ ಮದರಸಾಗಳ ಚಟುವಟಿಕೆಗಳಿಗೆ ಸರಕಾರ ಅಡ್ಡಿಯಾಗಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಹತ್ರಾಸ್‌ನಲ್ಲಿ ಟೈಟ್‌ ಸೆಕ್ಯೂರಿಟಿ; ಸಂತ್ರಸ್ತೆಯ ಮನೆಗೆ ಎಂಟು ಸಿಸಿಟಿವಿ, 60 ಪೊಲೀಸರ ನಿಯೋಜನೆ

ಶರ್ಮಾ ಘೋಷಣೆಗೆ ಖಾರವಾಗಿ ಪ್ರತಿಕ್ರಿಯಿಸಿರುವ ಸಂಸದ ಹಾಗೂ ಎಐಯುಡಿಎಫ್‌ ಮುಖ್ಯಸ್ಥ ಬದ್ರುದ್ದೀನ್‌ ಅಜ್ಮಲ್‌, ‘ಈಗ ಬಿಜೆಪಿ ಸರಕಾರ ಮದರಸಾಗಳನ್ನು ಮುಚ್ಚಿದರೆ ಮುಚ್ಚಲಿ. ನಮ್ಮ ಪಕ್ಷಕ್ಕೆ ಅಧಿಕಾರ ಸಿಕ್ಕ ಕೂಡಲೇ ಮುಚ್ಚಿದ ಮದರಾಸಗಳನ್ನು ಪುನಃ ಆರಂಭಿಸುತ್ತೇವೆ. ಮುಂದಿನ ವರ್ಷದ ವಿಧಾನಸಭೆ ಚುನಾವಣೆಯಲ್ಲಿ ನಮ್ಮ ಪಕ್ಷವೇ ಅಧಿಕಾರಕ್ಕೆ ಏರಲಿದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಟಿಆರ್‌ಪಿ ಹಗರಣ: ನಾಲ್ವರು ಆರೋಪಿಗಳು ಪೊಲೀಸ್‌ ಕಸ್ಟಡಿಗೆ, ರಿಪಬ್ಲಿಕ್‌ ಟಿವಿ ಸಿಎಫ್‌ಒಗೆ ಸಮನ್ಸ್‌

ಅಸ್ಸಾಂನಲ್ಲಿ ಒಟ್ಟು 614 ಸರಕಾರಿ ಅನುದಾನಿತ ಮದರಸಾಗಳಿದ್ದು, 900 ಖಾಸಗಿ ಮದರಸಾಗಳು ಕಾರ್ಯನಿರ್ವಹಿಸುತ್ತಿವೆ. ಪ್ರತಿ ವರ್ಷ 3 ರಿಂದ 4 ಕೋಟಿ ರೂ.ನಷ್ಟು ಅನುದಾನವನ್ನು ಮದರಸಾಗಳಿಗೆ ಸರಕಾರ ನೀಡುತ್ತಿದೆ. ಇದರೊಂದಿಗೆ ಸರಕಾರಿ ಅನುದಾನಿತ 100 ಸಂಸ್ಕೃತ ಶಾಲೆಗಳು ಮತ್ತು 500 ಖಾಸಗಿ ಕೇಂದ್ರಗಳು ಕೂಡ ರಾಜ್ಯದಲ್ಲಿವೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ