ಗುವಾಹಟಿ: ಅಸ್ಸಾಂನ ಡರಾಂಗ್ ಜಿಲ್ಲೆಯಲ್ಲಿ ಒತ್ತುವರಿ ತೆರವು ಕಾರ್ಯಾಚರಣೆ ವೇಳೆ ಪೊಲೀಸರು ಮತ್ತು ಜನರ ನಡುವೆ ಗುರುವಾರ ನಡೆದ ಸಂಘರ್ಷದಲ್ಲಿ ಮೃತಪಟ್ಟಿದ್ದ ಇಬ್ಬರು ನಾಗರಿಕರಲ್ಲಿ 12 ವರ್ಷದ ಬಾಲಕನೊಬ್ಬ ಸೇರಿದ್ದಾನೆ. ಲಾಠಿ ಮತ್ತು ಬಂದೂಕು ಹಿಡಿದ ಪೊಲೀಸರು ಬಡಿಗೆಗಳನ್ನು ಹಿಡಿದ ಪ್ರತಿಭಟನಾಕಾರರೊಂದಿಗೆ ಸಂಘರ್ಷ ನಡೆಸುವುದು ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ಘಟನೆಯಲ್ಲಿ ಬಲಿಯಾದ ಬಾಲಕ ಶೇಖ್ ಫರೀದ್, ತನ್ನ ಆಧಾರ್ ಕಾರ್ಡ್ ತರುವುದಕ್ಕಾಗಿ ಹೊರಗೆ ತೆರಳಿದ್ದ ಎನ್ನಲಾಗಿದೆ. ಗುರುವಾರ ಬೆಳಿಗ್ಗೆ ಅಂಚೆ ಕಚೇರಿಗೆ ತೆರಳಿದ್ದ ಬಾಲಕ, ಆಧಾರ್ ಕಾರ್ಡ್ ಪಡೆದುಕೊಂಡ ಖುಷಿಯಲ್ಲಿ ಮನೆಗೆ ಮರಳುತ್ತಿದ್ದ. ಈ ಸಂದರ್ಭದಲ್ಲಿ ಆತ ಗಲಭೆ ನಡುವೆ ಸಿಲುಕಿಕೊಂಡಿದ್ದ ಎಂದು ಕುಟುಂಬದ ಸದಸ್ಯರೊಬ್ಬರು ತಿಳಿಸಿದ್ದಾರೆ.
ಧೋಲ್ಪುರದಲ್ಲಿ ಒತ್ತುವರಿ ಮಾಡಿಕೊಂಡಿರುವ ಸುಮಾರು 800 ಕುಟುಂಬಗಳನ್ನು ತೆರವುಗೊಳಿಸಲು ಸೋಮವಾರ ಕಾರ್ಯಾಚರಣೆ ಆರಂಭಿಸಲಾಗಿತ್ತು. ಕೃಷಿ ಯೋಜನೆಗಳಿಗೆ 4,500 ಹೆಕ್ಟೇರ್ನಷ್ಟು ಸರ್ಕಾರಿ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲು ಅಸ್ಸಾಂ ಸರ್ಕಾರ ಬಯಸಿದೆ. ಬಾಂಗ್ಲಾದೇಶದಿಂದ ಅಕ್ರಮವಾಗಿ ನುಸುಳಿರುವ ಜನರು ಒತ್ತುವರಿ ಮಾಡಿಕೊಂಡಿದ್ದು, ಅವರನ್ನು ತೆರವುಗೊಳಿಸುತ್ತಿರುವುದಾಗಿ ಅಸ್ಸಾಂ ಸರ್ಕಾರ ಹೇಳಿದೆ.
ಫರೀದ್ನ ಕುಟುಂಬಕ್ಕೆ ಒತ್ತುವರಿ ತೆರವು ಸಂಬಂಧ ಯಾವುದೇ ನೋಟಿಸ್ ಬಂದಿರಲಿಲ್ಲ ಎನ್ನಲಾಗಿದೆ. ನಾಲ್ಕು ಮಕ್ಕಳಲ್ಲಿ ಕೊನೆಯವನಾದ ಫರೀದ್ನ ಮನೆ ಹಿಂಸಾಚಾರ ನಡೆದ ಜಾಗದಿಂದ ಎರಡು ಕಿಮೀ ದೂರದಲ್ಲಿದೆ. ಪ್ರತಿಭಟನಾ ಸ್ಥಳಕ್ಕೆ ಬಂದಾಗ ಸ್ಥಳೀಯರು ಕಲ್ಲುಗಳಿಂದ ತಮ್ಮ ಮೇಲೆ ದಾಳಿ ನಡೆಸಿದರು. ಇದರಿಂದ ಬಲಪ್ರಯೋಗ ನಡೆಸಬೇಕಾಯಿತು ಎಂದು ಪೊಲೀಸರು ಹೇಳಿದ್ದಾರೆ.
ಆಧಾರ್ ಕಾರ್ಡ್ ತರಲು ಹೋಗಿದ್ದ ಬಾಲಕ ವಾಪಸ್ ಬರುವಾಗ, ಅಲ್ಲಿ ನೂರಾರು ಜನರು ಪ್ರತಿಭಟನೆಗೆ ಸೇರಿರುವುದನ್ನು ಕಂಡಿದ್ದ. ಹೀಗಾಗಿ ಅದನ್ನು ನೋಡುತ್ತಾ ಅಲ್ಲೇ ನಿಂತಿದ್ದ. ಪೊಲೀಸರು ಅವನಿಗೆ ಎದುರಿನಿಂದಲೇ ಗುಂಡು ಹಾರಿಸಿದ್ದಾರೆ. ಗುಂಡು ಆತನ ಎದೆಗೆ ಹೊಕ್ಕಿದ್ದು, ಅಲ್ಲಿಯೇ ಮೃತಪಟ್ಟಿದ್ದಾನೆ ಎಂದು ಸಂಬಂಧಿಯೊಬ್ಬರು ತಿಳಿಸಿದ್ದಾರೆ.
ಛಾಯಾಗ್ರಾಹಕನ ಬಂಧನ
ಮೃತಪಟ್ಟ ಮತ್ತೊಬ್ಬನನ್ನು ಮೊಯಿನುಲ್ ಹಕ್ ಎಂದು ಗುರುತಿಸಲಾಗಿದೆ. ಬಡಿಗೆ ಹಿಡಿದಿದ್ದ ಆತ ಪೊಲೀಸರ ಕಡೆಗೆ ನುಗ್ಗಿ ಬಂದಿದ್ದು, ಆತನ ಮೇಲೆ ಪೊಲೀಸರು ಗುಂಡು ಹಾರಿಸಿದ್ದು ಹಾಗೂ ಆತ ಕಾಲ್ತುಳಿತದಲ್ಲಿ ಮೃತಪಟ್ಟಿದ್ದು ವಿಡಿಯೋದರಲ್ಲಿ ಸೆರೆಯಾಗಿದೆ. ಆತನ ಮೇಲೆ ಪೊಲೀಸರು ದಾಳಿ ಮಾಡುವ ಘಟನೆಯನ್ನು ಚಿತ್ರೀಕರಿಸಿದ್ದ ಸರ್ಕಾರಿ ಛಾಯಾಗ್ರಾಹಕನೊಬ್ಬ, ಯಾವುದೇ ಚಲನೆಯಿಲ್ಲದೆ ಬಿದ್ದಿದ್ದ ಆತನ ದೇಹದ ಮೇಲೆ ಕುಣಿದು ಕುಪ್ಪಳಿಸಿ ಮತ್ತೆ ಹಲ್ಲೆ ಮಾಡುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಅಮಾನವೀಯ ವರ್ತನೆಗೆ ವ್ಯಾಪಕ ಖಂಡನೆ ವ್ಯಕ್ತವಾಗಿದ್ದು, ಆ ಛಾಯಾಗ್ರಾಹಕನನ್ನು ಬಂಧಿಸಲಾಗಿದೆ.
ಮೃತಪಟ್ಟ ಇಬ್ಬರೂ ಅಕ್ರಮ ವಲಸಿಗರಲ್ಲ, ಬದಲಾಗಿ ಹಲವಾರು ವಂಶಗಳಿಂದ ಅವರ ಕುಟುಂಬಗಳು ಅಸ್ಸಾಂನಲ್ಲಿವೆ ಎಂದು ಹೇಳಲಾಗಿದೆ. ಈ ಹಿಂಸಾಚಾರವು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಪ್ರಾಯೋಜಿತ. ಇದಕ್ಕೆ ಕೋಮು ಆಯಾಮವಿದೆ ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಾಂತ ಬಿಸ್ವ ಶರ್ಮಾ ಹೇಳಿದ್ದಾರೆ.
ಧೋಲ್ಪುರದಲ್ಲಿ ಒತ್ತುವರಿ ಮಾಡಿಕೊಂಡಿರುವ ಸುಮಾರು 800 ಕುಟುಂಬಗಳನ್ನು ತೆರವುಗೊಳಿಸಲು ಸೋಮವಾರ ಕಾರ್ಯಾಚರಣೆ ಆರಂಭಿಸಲಾಗಿತ್ತು. ಕೃಷಿ ಯೋಜನೆಗಳಿಗೆ 4,500 ಹೆಕ್ಟೇರ್ನಷ್ಟು ಸರ್ಕಾರಿ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲು ಅಸ್ಸಾಂ ಸರ್ಕಾರ ಬಯಸಿದೆ. ಬಾಂಗ್ಲಾದೇಶದಿಂದ ಅಕ್ರಮವಾಗಿ ನುಸುಳಿರುವ ಜನರು ಒತ್ತುವರಿ ಮಾಡಿಕೊಂಡಿದ್ದು, ಅವರನ್ನು ತೆರವುಗೊಳಿಸುತ್ತಿರುವುದಾಗಿ ಅಸ್ಸಾಂ ಸರ್ಕಾರ ಹೇಳಿದೆ.
ಫರೀದ್ನ ಕುಟುಂಬಕ್ಕೆ ಒತ್ತುವರಿ ತೆರವು ಸಂಬಂಧ ಯಾವುದೇ ನೋಟಿಸ್ ಬಂದಿರಲಿಲ್ಲ ಎನ್ನಲಾಗಿದೆ. ನಾಲ್ಕು ಮಕ್ಕಳಲ್ಲಿ ಕೊನೆಯವನಾದ ಫರೀದ್ನ ಮನೆ ಹಿಂಸಾಚಾರ ನಡೆದ ಜಾಗದಿಂದ ಎರಡು ಕಿಮೀ ದೂರದಲ್ಲಿದೆ. ಪ್ರತಿಭಟನಾ ಸ್ಥಳಕ್ಕೆ ಬಂದಾಗ ಸ್ಥಳೀಯರು ಕಲ್ಲುಗಳಿಂದ ತಮ್ಮ ಮೇಲೆ ದಾಳಿ ನಡೆಸಿದರು. ಇದರಿಂದ ಬಲಪ್ರಯೋಗ ನಡೆಸಬೇಕಾಯಿತು ಎಂದು ಪೊಲೀಸರು ಹೇಳಿದ್ದಾರೆ.
ಆಧಾರ್ ಕಾರ್ಡ್ ತರಲು ಹೋಗಿದ್ದ ಬಾಲಕ ವಾಪಸ್ ಬರುವಾಗ, ಅಲ್ಲಿ ನೂರಾರು ಜನರು ಪ್ರತಿಭಟನೆಗೆ ಸೇರಿರುವುದನ್ನು ಕಂಡಿದ್ದ. ಹೀಗಾಗಿ ಅದನ್ನು ನೋಡುತ್ತಾ ಅಲ್ಲೇ ನಿಂತಿದ್ದ. ಪೊಲೀಸರು ಅವನಿಗೆ ಎದುರಿನಿಂದಲೇ ಗುಂಡು ಹಾರಿಸಿದ್ದಾರೆ. ಗುಂಡು ಆತನ ಎದೆಗೆ ಹೊಕ್ಕಿದ್ದು, ಅಲ್ಲಿಯೇ ಮೃತಪಟ್ಟಿದ್ದಾನೆ ಎಂದು ಸಂಬಂಧಿಯೊಬ್ಬರು ತಿಳಿಸಿದ್ದಾರೆ.
ಛಾಯಾಗ್ರಾಹಕನ ಬಂಧನ
ಮೃತಪಟ್ಟ ಮತ್ತೊಬ್ಬನನ್ನು ಮೊಯಿನುಲ್ ಹಕ್ ಎಂದು ಗುರುತಿಸಲಾಗಿದೆ. ಬಡಿಗೆ ಹಿಡಿದಿದ್ದ ಆತ ಪೊಲೀಸರ ಕಡೆಗೆ ನುಗ್ಗಿ ಬಂದಿದ್ದು, ಆತನ ಮೇಲೆ ಪೊಲೀಸರು ಗುಂಡು ಹಾರಿಸಿದ್ದು ಹಾಗೂ ಆತ ಕಾಲ್ತುಳಿತದಲ್ಲಿ ಮೃತಪಟ್ಟಿದ್ದು ವಿಡಿಯೋದರಲ್ಲಿ ಸೆರೆಯಾಗಿದೆ. ಆತನ ಮೇಲೆ ಪೊಲೀಸರು ದಾಳಿ ಮಾಡುವ ಘಟನೆಯನ್ನು ಚಿತ್ರೀಕರಿಸಿದ್ದ ಸರ್ಕಾರಿ ಛಾಯಾಗ್ರಾಹಕನೊಬ್ಬ, ಯಾವುದೇ ಚಲನೆಯಿಲ್ಲದೆ ಬಿದ್ದಿದ್ದ ಆತನ ದೇಹದ ಮೇಲೆ ಕುಣಿದು ಕುಪ್ಪಳಿಸಿ ಮತ್ತೆ ಹಲ್ಲೆ ಮಾಡುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಅಮಾನವೀಯ ವರ್ತನೆಗೆ ವ್ಯಾಪಕ ಖಂಡನೆ ವ್ಯಕ್ತವಾಗಿದ್ದು, ಆ ಛಾಯಾಗ್ರಾಹಕನನ್ನು ಬಂಧಿಸಲಾಗಿದೆ.
ಮೃತಪಟ್ಟ ಇಬ್ಬರೂ ಅಕ್ರಮ ವಲಸಿಗರಲ್ಲ, ಬದಲಾಗಿ ಹಲವಾರು ವಂಶಗಳಿಂದ ಅವರ ಕುಟುಂಬಗಳು ಅಸ್ಸಾಂನಲ್ಲಿವೆ ಎಂದು ಹೇಳಲಾಗಿದೆ. ಈ ಹಿಂಸಾಚಾರವು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಪ್ರಾಯೋಜಿತ. ಇದಕ್ಕೆ ಕೋಮು ಆಯಾಮವಿದೆ ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಾಂತ ಬಿಸ್ವ ಶರ್ಮಾ ಹೇಳಿದ್ದಾರೆ.