ಆ್ಯಪ್ನಗರ

ಪ್ರಜಾಪ್ರಭುತ್ವದ ದೇಗುಲಕ್ಕೆ ಮೋದಿ ಬೀಗ: ಸೋನಿಯಾ ಕಣ್ಣೀರು

'ಪ್ರಜಾಪ್ರಭುತ್ವದ ದೇಗುಲಕ್ಕೆ ಬೀಗ ಹಾಕುವ' ಮೂಲಕ ನರೇಂದ್ರ ಮೋದಿ ಸರಕಾರ 'ದುರಹಂಕಾರ' ತೋರುತ್ತಿದ್ದು, 'ಬಡವರ ಭವಿಷ್ಯವನ್ನೇ ನಾಶ ಮಾಡುತ್ತಿದೆ,' ಎಂದು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಕಣ್ಣೀರು ಹಾಕಿದರು.

Vijaya Karnataka Web 20 Nov 2017, 3:54 pm
ಹೊಸದಿಲ್ಲಿ: 'ಪ್ರಜಾಪ್ರಭುತ್ವದ ದೇಗುಲಕ್ಕೆ ಬೀಗ ಹಾಕುವ' ಮೂಲಕ ನರೇಂದ್ರ ಮೋದಿ ಸರಕಾರ 'ದುರಹಂಕಾರ' ತೋರುತ್ತಿದ್ದು, 'ಬಡವರ ಭವಿಷ್ಯವನ್ನೇ ನಾಶ ಮಾಡುತ್ತಿದೆ,' ಎಂದು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಕಣ್ಣೀರು ಹಾಕಿದರು.
Vijaya Karnataka Web at cwc sonia gandhi tears into modi government for locking temple of democracy
ಪ್ರಜಾಪ್ರಭುತ್ವದ ದೇಗುಲಕ್ಕೆ ಮೋದಿ ಬೀಗ: ಸೋನಿಯಾ ಕಣ್ಣೀರು


ಗುಜರಾತ್ ಹಾಗೂ ಹಿಮಾಚಲ ಪ್ರದೇಶ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು, ಚಳಿಗಾಲದ ಅಧಿವೇಶನವನ್ನು ಮುಂದೂಡುತ್ತಿರುವ ಸರಕಾರದ ಕ್ರಮವನ್ನು ವಿರೋಧಿಸಿರುವ ಸೋನಿಯಾ, ಪ್ರಜಾಪ್ರಭುತ್ವ ಬಾಗಿಲೇ ಮುಚ್ಚುತ್ತಿದೆ, ಎಂದು ಆರೋಪಿಸಿದರು.

'ಸಂಸತ್ತನ್ನು ಎದುರಿಸಲು ಧೈರ್ಯವಿಲ್ಲದ ಸರಕಾರ, ವಿನಾಕಾರಣ ಅಧಿವೇಶನವನ್ನು ಕರೆಯಲು ಹಿಂದೇಟು ಹಾಕುತ್ತಿದೆ. ಚುನಾವಣೆ ಕಾರಣವನ್ನು ಮುಂದಿಟ್ಟುಕೊಂಡು, ಸಾಂವಿಧಾನಿಕ ಬದ್ಧತೆಯಿಂದ ಸರಕಾರ ದೂರ ಸರಿಯುತ್ತಿದೆ,' ಎಂದು ಕಾಂಗ್ರೆಸ್ ಕಾರ್ಯಕಾರಿಣಿಯಲ್ಲಿ ಸೋನಿಯಾ ಆರೋಪಿಸಿದ್ದಾರೆ.

'ದೂಷಪೂರಿತ ಹಾಗೂ ಪೂರ್ವ ತಯಾರಿಯಿಲ್ಲದ ಸರಕು ಮತ್ತು ಸೇವಾ ತೆರಿಗೆ ಆರಂಭಿಸಲು ಸಂಸತ್ತನ್ನು ಮಧ್ಯರಾತ್ರಿ ಬಳಸಿಕೊಂಡ ಮೋದಿ, ಇಂದು ಅದರ ಬಗ್ಗೆ ಮಾತನಾಡಲು ಹೆದರಿ, ಅಧಿವೇಶನವನ್ನೇ ಕರೆಯುತ್ತಿಲ್ಲ,' ಎಂದರು.

ಮೋದಿ ಸಂಸತ್ತಿನ ಸೆಂಟ್ರಲ್ ಹಾಲ್‌ನಲ್ಲಿ ಜೂ. 30ರ ರಾತ್ರಿ ಜಿಎಸ್‌ಟಿ ಎಂಬ ಕ್ರಾಂತಿಕಾರಿ ತೆರಿಗೆ ಪದ್ಧತಿಗೆ ಚಾಲನೆ ನೀಡಿದರು. ಭಾರತಕ್ಕೆ ಸ್ವಾತಂತ್ರ್ಯ ಬಂದು 50 ವರ್ಷಗಳಾದಾಗ ಸಂಭ್ರಮವನ್ನು ಆಚರಿಸಲು 1997ರಲ್ಲಿ ಸಂಸತ್ತಿನ ಈ ವರ್ತುಲಾಕಾರಾದ ಹಾಲನ್ನು ಬಳಸಿಕೊಳ್ಳಲಾಗಿತ್ತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ