ಆ್ಯಪ್ನಗರ

ಎಟಿಎಂ ವಿತ್‌ಡ್ರಾ ಮಿತಿ 4.500 ರೂ.ಗೆ ಹೆಚ್ಚಳ

ನೋಟು ಅಮಾನ್ಯದಿಂದ ಕಂಗೆಟ್ಟಿರುವ ಜನಸಾಮಾನ್ಯರಿಗೆ ಹೊಸ ವರ್ಷಕ್ಕೆ ಸರಕಾರ ಕೊಂಚ ರಿಲೀಫ್‌ ನೀಡಿದೆ. ನಗದು ಬಿಕ್ಕಟ್ಟು ನಿವಾರಿಸುವ ನಿಟ್ಟಿನಲ್ಲಿ ಎಟಿಎಂಗಳಿಂದ ವಿತ್‌ಡ್ರಾವಲ್‌ ಮಿತಿಯನ್ನು ದಿನಕ್ಕೆ 2,500 ರೂ.ನಿಂದ 4,500 ರೂ.ಗೆ ಹೆಚ್ಚಿಸಲಾಗಿದೆ. 2017ರ ಜನವರಿ 1ರಿಂದ ಪರಿಷ್ಕೃತ ವಿತ್‌ಡ್ರಾವಲ್‌ ನಿಯಮ ಜಾರಿಯಾಗಲಿದೆ.

ಏಜೆನ್ಸೀಸ್ 31 Dec 2016, 7:51 am
ಹೊಸದಿಲ್ಲಿ: ನೋಟು ಅಮಾನ್ಯದಿಂದ ಕಂಗೆಟ್ಟಿರುವ ಜನಸಾಮಾನ್ಯರಿಗೆ ಹೊಸ ವರ್ಷಕ್ಕೆ ಸರಕಾರ ಕೊಂಚ ರಿಲೀಫ್‌ ನೀಡಿದೆ. ನಗದು ಬಿಕ್ಕಟ್ಟು ನಿವಾರಿಸುವ ನಿಟ್ಟಿನಲ್ಲಿ ಎಟಿಎಂಗಳಿಂದ ವಿತ್‌ಡ್ರಾವಲ್‌ ಮಿತಿಯನ್ನು ದಿನಕ್ಕೆ 2,500 ರೂ.ನಿಂದ 4,500 ರೂ.ಗೆ ಹೆಚ್ಚಿಸಲಾಗಿದೆ. 2017ರ ಜನವರಿ 1ರಿಂದ ಪರಿಷ್ಕೃತ ವಿತ್‌ಡ್ರಾವಲ್‌ ನಿಯಮ ಜಾರಿಯಾಗಲಿದೆ.
Vijaya Karnataka Web atm withdraw limits increased to 4500 rs
ಎಟಿಎಂ ವಿತ್‌ಡ್ರಾ ಮಿತಿ 4.500 ರೂ.ಗೆ ಹೆಚ್ಚಳ


ಹಳೆ ನೋಟುಗಳ ಯುಗಾಂತ್ಯ:

ಬ್ಯಾಂಕ್‌, ಎಟಿಎಂಗಳ ಮುಂದೆ ಮುಂದುವರಿದ ಕ್ಯೂ, ದಂಡದ ಭೀತಿ, ಮೋದಿ ಮುಂದಿನ ನಡೆಯ ಬಗ್ಗೆ ಕುತೂಹಲ, ಹೊಸ ಸುಗ್ರೀವಾಜ್ಞೆಗೆ ರಾಷ್ಟ್ರಪತಿ ಸಹಿ ಇತ್ಯಾದಿ ಹತ್ತು ಹಲವು ಬೆಳವಣಿಗೆಗಳ ನಡುವೆಯೇ ಹಳೆಯ 500/1000 ರೂ. ನೋಟುಗಳ ಜಮೆಗೆ ಡಿ.30ರ ಗಡುವು ಮುಕ್ತಾಯಗೊಂಡಿದೆ.

10ಕ್ಕಿಂತಲೂ ಹೆಚ್ಚು ಹಳೆ ನೋಟು ಸಂಗ್ರಹ, ವಿನಿಮಯ ಮತ್ತು ವರ್ಗಾವಣೆಯನ್ನು ಕ್ರಿಮಿನಲ್‌ ಅಪರಾಧವೆಂದು ಪರಿಗಣಿಸುವ ಮತ್ತು ಕನಿಷ್ಠ 10 ಸಾವಿರ ರೂ. ದಂಡ ವಿಧಿಸಲು ಅವಕಾಶ ನೀಡುವ ಹೊಸ ಸುಗ್ರೀವಾಜ್ಞೆಗೆ ರಾಷ್ಟ್ರಪತಿಗಳ ಅಂಕಿತ ಬಿದ್ದಿದ್ದು, ಡಿ.31ರಿಂದ ಅಧಿಕೃತವಾಗಿ ಜಾರಿಯಾಗಿದೆ.

ಆದರೆ, ಕೆಲ ನಿರ್ದಿಷ್ಟ ವರ್ಗಕ್ಕೆ ಮಾತ್ರ ನಿಗದಿತ ರಿಸರ್ವ್‌ ಬ್ಯಾಂಕ್‌ ಶಾಖೆಗಳಲ್ಲಿ 2017ರ ಮಾರ್ಚ್‌ 31ರವರೆಗೂ ಹಳೆ 500/1000 ರೂ. ನೋಟುಗಳನ್ನು ಜಮೆ ಮಾಡಲು ಅವಕಾಶವಿದೆ.

ಈ ಮಧ್ಯೆ, ಡಿ.30ರವರೆಗೂ ಜಮೆಯಾದ ಒಟ್ಟು ಹಳೆ ನೋಟುಗಳ ವಿವರ ನೀಡುವಂತೆ ರಿಸರ್ವ್‌ ಬ್ಯಾಂಕ್‌ ಎಲ್ಲಾ ಬ್ಯಾಂಕ್‌ಗಳಿಗೂ ನಿರ್ದೇಶನ ನೀಡಿದೆ.

ಬೆಳೆ ವಿಮೆ: ಗಡುವು ವಿಸ್ತರಣೆ

ಹಳೆ ನೋಟು ಅಮಾನ್ಯದಿಂದ ನಗದು ಬಿಕಟ್ಟು ಎದುರಿಸುತ್ತಿರುವ ರೈತರ ನೆರವಿಗೆ ಧಾವಿಸಿರುವ ಕೇಂದ್ರ ಸರಕಾರ, 2016-17ನೇ ಸಾಲಿನ ಬೆಳೆ ವಿಮೆ ಪಾವತಿ ಗಡುವನ್ನು 10 ದಿನ ವಿಸ್ತರಿಸಿದೆ. 'ಪ್ರಧಾನ ಮಂತ್ರಿ ಫಸಲ್‌ ಬಿಮಾ ಯೋಜನೆ' ಅಡಿ ಬೆಳೆ ವಿಮೆ ಮಾಡಿಸಲು ಡಿ.31 ಅಂತಿಮ ದಿನಾಂಕವಾಗಿತ್ತು. ಈ ಗಡುವನ್ನು 2017ರ ಜ. 10ರವರೆಗೂ ವಿಸ್ತರಿಸಿ ಸರಕಾರ ಆದೇಶ ಹೊರಡಿಸಿದೆ.

ಗಡುವು ಕೊನೆ

ಹಳೆಯ 500/1000 ರೂ. ನೋಟುಗಳನ್ನು ಬ್ಯಾಂಕ್‌ಗಳಲ್ಲಿ ಜಮೆ ಮಾಡಲು 50 ದಿನಗಳ ಅಂತಿಮ ಗಡುವು ಡಿ.30ಕ್ಕೆ ಮುಕ್ತಾಯಗೊಂಡಿದ್ದು, ಇದರೊಂದಿಗೆ ಹಳೆಯ 500/1000 ರೂ. ನೋಟುಗಳ ಯುಗಾಂತ್ಯವಾಗಿದೆ.

4,313 ಕೋಟಿ ರೂ .ಕಾಳಧನ ಪತ್ತೆ

ನೋಟು ನಿಷೇಧದ ನಂತರ ಇದುವರೆಗೆ ದೇಶಾದ್ಯಂತ ನಡೆಸಲಾದ ಕಾರ್ಯಾಚರಣೆಗಳ ಮೂಲಕ ಆದಾಯ ತೆರಿಗೆ ಇಲಾಖೆಯು ಒಟ್ಟು 4,313 ಕೋಟಿ ರೂ. ಕಾಳಧನವನ್ನು ಪತ್ತೆ ಹಚ್ಚಿದೆ. ಜಪ್ತಿ ಮಾಡಿಕೊಂಡ ಹಣದಲ್ಲಿ 106.89 ಕೋಟಿ ರೂ. ಮೌಲ್ಯದ ಹೊಸ ಕರೆನ್ಸಿಗಳು ಸೇರಿವೆ ಎಂದು ಮೂಲಗಳು ಹೇಳಿವೆ.

ಇಲಾಖೆಯು ಅನುಮಾನಾಸ್ಪದ ವಹಿವಾಟು ನಡೆಸಿದ ಎಲ್ಲ ಬ್ಯಾಂಕ್‌ ಖಾತೆಗಳ ಮೇಲೆ ಕಣ್ಣಿಟ್ಟಿದ್ದು, ನವೆಂಬರ್‌ 8ರಿಂದ ಇದುವರೆಗೂ ದೇಶಾದ್ಯಂತ ಒಟ್ಟು 1061 ದಾಳಿ ನಡೆಸಿ, 5,058 ಜನರಿಗೆ ನೋಟಿಸ್‌ ಜಾರಿ ಮಾಡಿದೆ. ಒಟ್ಟಾರೆ, 4,313 ಕೋಟಿ ರೂ. ತೆರಿಗೆ ವಂಚನೆ ಹಣವನ್ನು ಪತ್ತೆ ಹಚ್ಚಲಾಗಿದೆ. ಈ ಅವಧಿಯಲ್ಲಿ ನಗದು ಹಾಗೂ ಚಿನ್ನಾಭರಣಗಳೂ ಸೇರಿದಂತೆ 554 ಕೋಟಿ ರೂ. ಮೌಲ್ಯದ ಹಣವನ್ನು ವಶಪಡಿಸಿಕೊಳ್ಳಲಾಗಿದೆ.

2016ರ ಹಿನ್ನೋಟ: ಅತೀ ಹೆಚ್ಚು ಓದಿದ ವಿಷಯಗಳು

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ