ಆ್ಯಪ್ನಗರ

ನಾನ್‌ಕಾನ ಗುರುದ್ವಾರ ಮೇಲೆ ದಾಳಿ: ಸಮಿತಿ ಕಳುಹಿಸಲು ಎಸ್‌ಜಿಪಿಸಿ ನಿರ್ಧಾರ

ಪಾಕಿಸ್ತಾನದಲ್ಲಿರುವ ಸಿಖ್‌ ಧಾರ್ಮಿಕ ಕೇಂದ್ರಗಳಿಗೆ ಭಾರತೀಯರು ಅತಿ ಹೆಚ್ಚು ಸಂಖ್ಯೆಯಲ್ಲಿ ಭೇಟಿ ನೀಡುತ್ತಾರೆ. ಈ ಧಾರ್ಮಿಕ ಕೇಂದ್ರದ ಮೇಲೆ ದಾಳಿ ನಡೆಸಿರುವುದು ಖಂಡನೀಯ ಎಂದು ಭಾರತ ತಿಳಿಸಿದೆ.

Vijaya Karnataka Web 4 Jan 2020, 6:45 pm
ಹೊಸದಿಲ್ಲಿ: ನಾನ್‌ಕಾನ ಸಾಹೀಬ್ ಗುರುದ್ವಾರ ವಿಚಾರದಲ್ಲಿ ಪಾಕಿಸ್ತಾನದ ವಿಧ್ವಂಸಕತೆಯನ್ನು ಭಾರತ ಬಲವಾಗಿ ಖಂಡಿಸಿದೆ. ಅಲ್ಲದೇ, ಶಿರೋಮಣಿ ಗುರುದ್ವಾರ ಪ್ರಬಂಧಕ್‌ ಸಮಿತಿ (ಎಸ್‌ಜಿಪಿಸಿ), ನಾಲ್ವರು ಸದಸ್ಯರ ಸಮಿತಿಯನ್ನು ನಾನ್‌ಕಾನಗೆ ಕಳುಹಿಸಿಕೊಡಲು ನಿರ್ಧರಿಸಿದೆ.
Vijaya Karnataka Web ನಾನ್‌ಕಾನ ಗುರುದ್ವಾರ
ನಾನ್‌ಕಾನ ಗುರುದ್ವಾರ


ಸಿಖ್ ಸಮುದಾಯದ ಸುರಕ್ಷತೆ, ಕಲ್ಯಾಣ ಮತ್ತು ಭದ್ರತೆಗೆ ತಕ್ಷಣವೇ ಸೂಕ್ತ ಕ್ರಮ ಕೈಗೊಳ್ಳುವಂತೆ ಪಾಕಿಸ್ತಾನಕ್ಕೆ ಭಾರತ ಒತ್ತಾಯಿಸಿದೆ.

ಹೊಸದಿಲ್ಲಿಯಲ್ಲಿ ಈ ಕುರಿತು ಕುರಿತು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಕಳವಳ ವ್ಯಕ್ತಪಡಿಸಿದೆ.
ಗುರುನಾನಕ್ ದೇವ್‌ಜಿ ಅವರ ಜನ್ಮಸ್ಥಳ ಪವಿತ್ರ ನಗರವಾದ ನಾನ್‌ಕಾನ ಸಾಹೀಬ್‌ನಲ್ಲಿ ನಡೆದಿರುವ ಹಿಂಸಾಚಾರ ಖಂಡನೀಯ ಎಂದು ತಿಳಿಸಿದೆ.

ದುಷ್ಕರ್ಮಿಗಳ ವಿರುದ್ಧ ತಕ್ಷಣ ಕ್ರಮ ಕೈಗೊಳ್ಳಬೇಕು; ಧಾರ್ಮಿಕ ಅಲ್ಪಸಂಖ್ಯಾತರಾಗಿರುವ ಸಿಖ್ ಸಮುದಾಯಕ್ಕೆ ಸೂಕ್ತ ರಕ್ಷಣೆ ಒದಗಿಸಬೇಕು; ನಾನ್‌ಕಾನ ಸಾಹೀಬ್ ಗುರುದ್ವಾರ ಮತ್ತು ಆಸುಪಾಸಿನ ಸ್ಥಳಗಳ ಘನತೆ ಮತ್ತು ಗೌರವ ಕಾಪಾಡಲು ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವಂತೆ ಪಾಕಿಸ್ತಾನಕ್ಕೆ ಭಾರತ ಖಡಕ್ಕಾಗಿ ಎಚ್ಚರಿಕೆ ಮಾಡಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ