ಹೊಸದಿಲ್ಲಿ: ಎರಡು ಜೀವಗಳನ್ನು ಉಳಿಸಲು ಹೋದ ಆಟೋ ಚಾಲಕನೊಬ್ಬ ತಾನೇ ಸಾವನ್ನಪ್ಪಿದ ದುರದೃಷ್ಟಕರ ಘಟನೆ ಹೊಸದಿಲ್ಲಿಯಲ್ಲಿ ಶನಿವಾರ ನಡೆದಿದೆ.
30 ವರ್ಷದ ಪವನ್ ಶಾ ಮೃತ ದುರ್ದೈವಿ.
ಶನಿವಾರ ಮುಂಜಾನೆ 10.45ರ ಸುಮಾರಿಗೆ ಪ್ರಯಾಣಿಕರನ್ನು ನಿಗದಿತ ಸ್ಥಳಕ್ಕೆ ತಲುಪಿಸಿ ಮನೆಗೆ ಮರಳುತ್ತಿದ್ದ ಶಾ ದಿಲ್ಲಿಯ ಮೀತಾಪುರ ಕಾಲುವೆ ಮೇಲಿನ ಸೇತುವೆಯ ಮೇಲೆ ಮಹಿಳೆಯೊಬ್ಬಳು ಮಗುವನ್ನು ಎತ್ತಿಕೊಂಡು ನಿಂತಿರುವುದನ್ನು ಕಂಡಿದ್ದಾನೆ. ನೋಡನೋಡುತ್ತಿದ್ದಂತೆ ಆಕೆ ನೀರಿಗೆ ಹಾರಿದ್ದಾಳೆ. ಅದನ್ನು ಕಂಡು ಬೆಚ್ಚಿದ ಶಾ ಒಂದು ಕ್ಷಣ ಕೂಡ ಯೋಚನೆ ಮಾಡದೇ ಅವರನ್ನು ರಕ್ಷಿಸಲು ನೀರಿಗೆ ಜಿಗಿದ್ದಾನೆ. ಈಜಿ ಮಹಿಳೆ ಬಳಿ ತಲುಪಿದ ಆತ 1 ವರ್ಷದ ಮಗುವನ್ನು ತನ್ನ ತೋಳಲ್ಲಿ ಹಿಡಿದುಕೊಂಡಿದ್ದಾನೆ. ಆದರೆ ಒಂದೇ ಸಲ ಇಬ್ಬರನ್ನು ದಡಕ್ಕೆ ತರುವುದು ಸಾಧ್ಯವಿಲ್ಲವೆಂದು ಅರಿವಾಗಿ ಸಹಾಯಕ್ಕಾಗಿ ಕೂಗಿದ್ದಾನೆ. ಅಲ್ಲೇ ಹತ್ತಿರದಲ್ಲಿದ್ದ ರಾಜವೀರ್, ಜಮೀಲ್, ಸಂಜೀವ್ ಎಂಬುವವರು ಶಾ ಕೂಗನ್ನು ಕೇಳಿಕೊಂಡು ಸ್ಥಳಕ್ಕೆ ಬಂದು ನೋಡಿದ್ದಾರೆ. ಮಗು ಮತ್ತು ತಾಯಿಯ ತಲೆಯನ್ನು ನೀರಿಂದ ಮೇಲಿಟ್ಟುಕೊಳ್ಳಲು ಪ್ರಯತ್ನಿಸುತ್ತಿದ್ದ ಶಾ ಸಹಾಯಕ್ಕೆ ಧಾವಿಸಿದ ಅವರು ಮಾನವ ಸರಪಣಿ ರಚಿಸಿ ತಾಯಿ ಮಗುವನ್ನು ರಕ್ಷಿಸಿದ್ದಾರೆ. ಇನ್ನೇನು ಶಾ ಬಲಿ ಹೋಗಿ ಅವನನ್ನು ರಕ್ಷಿಸಬೇಕು ಅನ್ನುವಷ್ಟರಲ್ಲಿ ನೀರಿನ ರಭಸಕ್ಕೆ ಶಾ ಕೊಚ್ಚಿ ಹೋಗಿದ್ದಾನೆ. ಆತನನ್ನು ರಕ್ಷಿಸಲಾಗದೆ ಅಸಹಾಯಕಾರಿ ನೋಡುತ್ತ ನಿಂತ ಮೂವರು ಯುವಕರು ಪೊಲೀಸರಿಗೆ ಮಾಹಿತಿ ರವಾನಿಸಿದ್ದಾರೆ.
ನಿಸ್ವಾರ್ಥವಾಗಿ ಎರಡು ಜೀವಗಳನ್ನು ಕಾಪಾಡಲು ಹೋದ ಉದಾರಿ ತನ್ನ ಜೀವವನ್ನೇ ಕಳೆದುಕೊಂಡಿದ್ದಾನೆ.
ಮಾಹಿತಿ ಪಡೆದು ಸ್ಥಳಕ್ಕಾಗಮಿಸಿದ ಪೊಲೀಸರು, ಇತರ ಆಟೋ ಚಾಲಕರು, ಮುಳುಗು ತಜ್ಞರು ಶಾ ಗಾಗಿ ಎಷ್ಟೇ ಹುಡುಕಾಡಿದರೂ ಆತ ಪತ್ತೆಯಾಗಿಲ್ಲ.
ಆತ್ಮಹತ್ಯೆಗೆ ಯತ್ನಿಸಿದ್ದ ಮಹಿಳೆ ಮತ್ತು ಆಕೆಯ ಮಗು ಪ್ರಾಣಾಪಾಯದಿಂದ ಪಾರಾಗಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಶುಕ್ರವಾರ ರಾತ್ರಿ ಪತಿಯೊಂದಿಗೆ ಜಗಳವಾಡಿದ್ದ ಮಹಿಳೆ ಆತ್ಮಹತ್ಯೆಗೆ ಯತ್ನಿಸಿದ್ದಳು ಎಂದು ತಿಳಿದು ಬಂದಿದೆ.
ಶಾ ಹೆಸರನ್ನು ಜೀವನ ರಕ್ಷಾ ಶೌರ್ಯ ಪ್ರಶಸ್ತಿಗೆ ಶಿಫಾರಸ್ಸು ಮಾಡಲಾಗುವುದು ಎಂದು ಡಿಸಿಪಿ ಚಿನ್ಮಯ್ ಬಿಸ್ವಾಲ್ ತಿಳಿಸಿದ್ದಾರೆ.
30 ವರ್ಷದ ಪವನ್ ಶಾ ಮೃತ ದುರ್ದೈವಿ.
ಶನಿವಾರ ಮುಂಜಾನೆ 10.45ರ ಸುಮಾರಿಗೆ ಪ್ರಯಾಣಿಕರನ್ನು ನಿಗದಿತ ಸ್ಥಳಕ್ಕೆ ತಲುಪಿಸಿ ಮನೆಗೆ ಮರಳುತ್ತಿದ್ದ ಶಾ ದಿಲ್ಲಿಯ ಮೀತಾಪುರ ಕಾಲುವೆ ಮೇಲಿನ ಸೇತುವೆಯ ಮೇಲೆ ಮಹಿಳೆಯೊಬ್ಬಳು ಮಗುವನ್ನು ಎತ್ತಿಕೊಂಡು ನಿಂತಿರುವುದನ್ನು ಕಂಡಿದ್ದಾನೆ. ನೋಡನೋಡುತ್ತಿದ್ದಂತೆ ಆಕೆ ನೀರಿಗೆ ಹಾರಿದ್ದಾಳೆ. ಅದನ್ನು ಕಂಡು ಬೆಚ್ಚಿದ ಶಾ ಒಂದು ಕ್ಷಣ ಕೂಡ ಯೋಚನೆ ಮಾಡದೇ ಅವರನ್ನು ರಕ್ಷಿಸಲು ನೀರಿಗೆ ಜಿಗಿದ್ದಾನೆ. ಈಜಿ ಮಹಿಳೆ ಬಳಿ ತಲುಪಿದ ಆತ 1 ವರ್ಷದ ಮಗುವನ್ನು ತನ್ನ ತೋಳಲ್ಲಿ ಹಿಡಿದುಕೊಂಡಿದ್ದಾನೆ. ಆದರೆ ಒಂದೇ ಸಲ ಇಬ್ಬರನ್ನು ದಡಕ್ಕೆ ತರುವುದು ಸಾಧ್ಯವಿಲ್ಲವೆಂದು ಅರಿವಾಗಿ ಸಹಾಯಕ್ಕಾಗಿ ಕೂಗಿದ್ದಾನೆ. ಅಲ್ಲೇ ಹತ್ತಿರದಲ್ಲಿದ್ದ ರಾಜವೀರ್, ಜಮೀಲ್, ಸಂಜೀವ್ ಎಂಬುವವರು ಶಾ ಕೂಗನ್ನು ಕೇಳಿಕೊಂಡು ಸ್ಥಳಕ್ಕೆ ಬಂದು ನೋಡಿದ್ದಾರೆ. ಮಗು ಮತ್ತು ತಾಯಿಯ ತಲೆಯನ್ನು ನೀರಿಂದ ಮೇಲಿಟ್ಟುಕೊಳ್ಳಲು ಪ್ರಯತ್ನಿಸುತ್ತಿದ್ದ ಶಾ ಸಹಾಯಕ್ಕೆ ಧಾವಿಸಿದ ಅವರು ಮಾನವ ಸರಪಣಿ ರಚಿಸಿ ತಾಯಿ ಮಗುವನ್ನು ರಕ್ಷಿಸಿದ್ದಾರೆ. ಇನ್ನೇನು ಶಾ ಬಲಿ ಹೋಗಿ ಅವನನ್ನು ರಕ್ಷಿಸಬೇಕು ಅನ್ನುವಷ್ಟರಲ್ಲಿ ನೀರಿನ ರಭಸಕ್ಕೆ ಶಾ ಕೊಚ್ಚಿ ಹೋಗಿದ್ದಾನೆ. ಆತನನ್ನು ರಕ್ಷಿಸಲಾಗದೆ ಅಸಹಾಯಕಾರಿ ನೋಡುತ್ತ ನಿಂತ ಮೂವರು ಯುವಕರು ಪೊಲೀಸರಿಗೆ ಮಾಹಿತಿ ರವಾನಿಸಿದ್ದಾರೆ.
ನಿಸ್ವಾರ್ಥವಾಗಿ ಎರಡು ಜೀವಗಳನ್ನು ಕಾಪಾಡಲು ಹೋದ ಉದಾರಿ ತನ್ನ ಜೀವವನ್ನೇ ಕಳೆದುಕೊಂಡಿದ್ದಾನೆ.
ಮಾಹಿತಿ ಪಡೆದು ಸ್ಥಳಕ್ಕಾಗಮಿಸಿದ ಪೊಲೀಸರು, ಇತರ ಆಟೋ ಚಾಲಕರು, ಮುಳುಗು ತಜ್ಞರು ಶಾ ಗಾಗಿ ಎಷ್ಟೇ ಹುಡುಕಾಡಿದರೂ ಆತ ಪತ್ತೆಯಾಗಿಲ್ಲ.
ಆತ್ಮಹತ್ಯೆಗೆ ಯತ್ನಿಸಿದ್ದ ಮಹಿಳೆ ಮತ್ತು ಆಕೆಯ ಮಗು ಪ್ರಾಣಾಪಾಯದಿಂದ ಪಾರಾಗಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಶುಕ್ರವಾರ ರಾತ್ರಿ ಪತಿಯೊಂದಿಗೆ ಜಗಳವಾಡಿದ್ದ ಮಹಿಳೆ ಆತ್ಮಹತ್ಯೆಗೆ ಯತ್ನಿಸಿದ್ದಳು ಎಂದು ತಿಳಿದು ಬಂದಿದೆ.
ಶಾ ಹೆಸರನ್ನು ಜೀವನ ರಕ್ಷಾ ಶೌರ್ಯ ಪ್ರಶಸ್ತಿಗೆ ಶಿಫಾರಸ್ಸು ಮಾಡಲಾಗುವುದು ಎಂದು ಡಿಸಿಪಿ ಚಿನ್ಮಯ್ ಬಿಸ್ವಾಲ್ ತಿಳಿಸಿದ್ದಾರೆ.