ಆ್ಯಪ್ನಗರ

40 ದಿನಗಳ ಮ್ಯಾರಥಾನ್‌ ಅಯೋಧ್ಯಾ ವಿಚಾರಣೆ ಅಂತ್ಯ: ಅಂತಿಮ ತೀರ್ಪಿಗೆ ಕಾತರ

ನ. 17ಕ್ಕೆ ಮುನ್ನ ತೀರ್ಪು? ಹಕ್ಕು ಬಿಟ್ಟುಕೊಡಲು ಸುನ್ನಿ ಬೋರ್ಡ್‌ ನಿರ್ಧಾರ?........

Vijaya Karnataka 17 Oct 2019, 7:03 am
ಹೊಸದಿಲ್ಲಿ: ಸೂಕ್ಷ್ಮವಾಗಿರುವ ಅಯೋಧ್ಯೆಯ ವಿವಾದಿತ ರಾಮಜನ್ಮಧಿಭೂಮಿ-ಬಾಬರಿ ಮಸೀದಿ ಭೂವಿವಾದಕ್ಕೆ ಬಹುತೇಕ ಅಂಕದ ಪರದೆ ಎಳೆಯಲಿದೆ ಎಂದೇ ಹೇಳಲಾದ ಮಹತ್ವದ ತೀರ್ಪಿಗೆ ದಿನಗಣನೆ ಆರಂಭಗೊಂಡಿದೆ.
Vijaya Karnataka Web rama-janmabhoomi



ಅಯೋಧ್ಯೆಯ 2.77 ಎಕರೆ ಜಾಗವನ್ನು ನಿರ್ಮೋಹಿ ಅಖಾಡ, ರಾಮ ಲಲ್ಲಾ ಮತ್ತು ಸುನ್ನಿ ವಕ್ಫ್ ಬೋರ್ಡ್‌ಗೆ ಸಮನಾಗಿ ಹಂಚಿದ 2010ರ ಅಲಹಾಬಾದ್‌ ಹೈಕೋರ್ಟ್‌ ತೀರ್ಪನ್ನು ಪ್ರಶ್ನಿಸಿ ಸಲ್ಲಿಸಲಾದ 14 ಅರ್ಜಿ ವಿಚಾರಣೆಧಿಯನ್ನು ಸುಪ್ರೀಂಕೋರ್ಟ್‌ ಬುಧವಾರ ಮುಕ್ತಾಯಗೊಳಿಸಿದೆ. ಸಿಜೆಐ ರಂಜನ್‌ ಗೊಗೊಯ್‌ ಅವರ ನೇತೃತ್ವದ ಪಂಚ ಸದಸ್ಯಪೀಠ 40 ದಿನಗಳ ಸುದೀರ್ಘ ವಿಚಾರಣೆಗೆ ತೆರೆ ಎಳೆದಿದ್ದು, ನವೆಂಬರ್‌ 17ರಂದು ರಂಜನ್‌ ಗೊಗೊಯ್‌ ಅವರು ನಿವೃತ್ತರಾಗುವ ಮುನ್ನ ತೀರ್ಪು ಹೊರಬೀಳುವ ನಿರೀಕ್ಷೆ ಇದೆ.


ಮೂರು ದಿನ ಅವಕಾಶ: ನ್ಯಾಯಮೂರ್ತಿ ಗಳಾದ ಎಸ್‌.ಎ. ಬೊಬ್ಡೆ, ಡಿ.ವೈ. ಚಂದ್ರಚೂಡ್‌, ಅಶೋಕ್‌ ಭೂಷಣ್‌ ಮತ್ತು ಎಸ್‌.ಎ. ನಜೀರ್‌ ಅವರನ್ನೂ ಒಳಗೊಂಡ ನ್ಯಾಯಪೀಠವು ದೀರ್ಘಕಾಲೀನ ವಿವಾದದ ಬಗ್ಗೆ ತೀರ್ಪು ನೀಡಲು ಅನುಕೂಲವಾಗುವಂತೆ ಲಿಖಿತ ಟಿಪ್ಪಣಿಗಳನ್ನು ನೀಡಲು ಇನ್ನೂ 3 ದಿನ ಅವಕಾಶವನ್ನು ನೀಡಿದೆ.

‘ಹಿಂದೂ ದೇಗುಲ ಕಂಬದ ಮೇಲೆ ಮಸೀದಿ’: ಅಯೋಧ್ಯೆ ಉತ್ಖನನ ವೇಳೆ ಮುಸ್ಲಿಂ ಅಧಿಕಾರಿ ಭಾಗಿಯಾಗಿದ್ದು ಸತ್ಯ!

ದಾಖಲೆ ಹರಿದ ಮುಸ್ಲಿಂ ಪಾರ್ಟಿ ಪರ ವಕೀಲ


ಬುಧವಾರ ಅಂತಿಮ ದಿನದ ವಿಚಾರಣೆ ವೇಳೆ ಹಿಂದೂ ಮಹಾ ಸಭಾ ವಕೀಲರು ತಮ್ಮ ವಾದಕ್ಕೆ ಪೂರಕವಾಗಿ ಕೋರ್ಟ್‌ ಮುಂದಿಟ್ಟ ದಾಖಲೆಗಳು ಹಾಗೂ ರಾಮ ಜನ್ಮಸ್ಥಳ ಕುರಿತಾದ ನಕ್ಷೆಯನ್ನು ಸುನ್ನಿ ವಕ್ಫ್ ಬೋರ್ಡ್‌ ಮತ್ತು ಇತರೆ ಮುಸ್ಲಿಂ ಪಾರ್ಟಿಗಳ ಪರ ವಕೀಲರಾದ ರಾಜೀವ್‌ ಧವನ್‌ ಹರಿದು ಹಾಕಿದ ಹೈಡ್ರಾಮಾ ನಡೆಯಿತು. ಅಲ್ಲದೆ, ಪದೇಪದೇ ಆದ ಗದ್ದಲದಿಂದ ಸಿಟ್ಟಿಗೆದ್ದ ಸಿಜೆಐ ‘ಸಾಕು ಅಂದ್ರೆ ಸಾಕು ಅಷ್ಟೆ’ ಎಂದು ವಕೀಲರನ್ನು ತರಾಟೆಗೆ ತೆಗೆದುಕೊಂಡರು. ತಾವು ನ್ಯಾಯಪೀಠದ ಅನುಮತಿ ಪಡೆದೇ ನಕ್ಷೆ ಹರಿದು ಹಾಕಿದ್ದಾಗಿ ಧವನ್‌ ಸ್ಪಷ್ಟೀಕರಣ ನೀಡಿದ್ದು ಆಶ್ಚರ್ಯ ಮೂಡಿಸಿತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ