ಆ್ಯಪ್ನಗರ

‘ರಾಮಜನ್ಮಭೂಮಿ’ಯನ್ನು ಪ್ರತಿವಾದಿ ಮಾಡೋದೇಕೆ?: ಸುಪ್ರೀಂಗೆ ಮುಸ್ಲಿಂ ಅರ್ಜಿದಾರರ ಪ್ರಶ್ನೆ

ಅಯೋಧ್ಯಾ ರಾಮಜನ್ಮಭೂಮಿ ವಿವಾದಕ್ಕೆ ಸಂಬಂಧಿಸಿದಂತೆ, ‘ಜನ್ಮಭೂಮಿ’ಯನ್ನೇ ನ್ಯಾಯಾಲಯ ಪ್ರತಿವಾದಿಯನ್ನಾಗಿ ಮಾಡಿದೆ! ಹೀಗಾಗಿ ಪ್ರಕರಣದ ವಿಚಾರಣೆ ಸಂಕೀರ್ಣವಾಗುತ್ತಾ ಸಾಗಿದೆ. ಜೊತೆಯಲ್ಲೇ ಜನ್ಮಭೂಮಿಯನ್ನು ಪ್ರತಿವಾದಿ ಮಾಡಿದ್ದೇಕೆ ಎಂದು ಮುಸ್ಲಿಂ ಅರ್ಜಿದಾರರು ಆಕ್ಷೇಪ ಎತ್ತಿದ್ದಾರೆ.

TIMESOFINDIA.COM 16 Sep 2019, 9:39 pm

ಹೊಸ ದಿಲ್ಲಿ: ರಾಮಜನ್ಮಭೂಮಿಯನ್ನು ಪ್ರತಿವಾದಿಯನ್ನಾಗಿದ ಸುಪ್ರೀಂ ಕೋರ್ಟ್ ನಿರ್ಧಾರಕ್ಕೆ ಮುಸ್ಲಿಂ ಅರ್ಜಿದಾರರು ವಿರೋಧ ವ್ಯಕ್ತಪಡಿಸಿದ್ದಾರೆ. ವಿವಾದಿತ ಸ್ಥಳದ ವಿಚಾರಕ್ಕೆ ಬೇರೆ ಯಾವುದೇ ವ್ಯಕ್ತಿ ಹಕ್ಕು ಸಾಧಿಸದೇ ಇರಲಿ ಎಂದು ಈ ರೀತಿ ಮಾಡಲಾಗ್ತಿದೆ ಅನ್ನೋದು ಮುಸ್ಲಿಂ ಅರ್ಜಿದಾರರ ವಾದ.
Vijaya Karnataka Web ayodhya supreme


ನವೆಂಬರ್‌ನಲ್ಲಿ ಅಯೋಧ್ಯಾ ರಾಮಮಂದಿರ ನಿರ್ಮಾಣ ಆರಂಭ: ಸುಬ್ರಹ್ಮಣ್ಯಂ ಸ್ವಾಮಿ

ರಾಮಜನ್ಮಭೂಮಿ ಎಂದು ಹೇಳಲಾಗಿರುವ 2.77 ಎಕರೆ ಭೂ ಪ್ರದೇಶವನ್ನು ದೈವೀ ಸ್ವರೂಪವೆಂದೇ ಭಾವಿಸಲಾಗಿದ್ದು, ಮುಸ್ಲಿಮರು ಈ ಭೂಮಿಯಲ್ಲಿ ಹಕ್ಕುಸಾಧಿಸಲು ಸಾಧ್ಯವಿಲ್ಲ ಎಂದು ‘ರಾಮ್‌ ಲಲ್ಲಾ ವಿರಾಜ್‌ಮಾನ್’ ವಾದಿಸಿತ್ತು. ಅಷ್ಟೇ ಅಲ್ಲ, ಈ ಭೂಮಿಯನ್ನು ವಿಭಜಿಸುವುದು ದೈವತ್ವಕ್ಕೆ ಎಸಗುವ ಅಪಮಾನ ಎಂಬ ವಾದವನ್ನೂ ಮಾಡಿತ್ತು.

ರಾಮಜನ್ಮಭೂಮಿಯನ್ನು ಪ್ರತಿವಾದಿಯನ್ನಾಗಿ 1989ರಲ್ಲೇ ನ್ಯಾಯಾಲಯ ಮಾಡಿದೆ. ಬೇರೆ ಯಾರೂ ಈ ವಿಚಾರದಲ್ಲಿ ಹಕ್ಕು ಸಾಧಿಸದೇ ಇರಲಿ ಅನ್ನೋ ಕಾರಣಕ್ಕೆ ಈ ತೀರ್ಮಾನ ಕೈಗೊಳ್ಳಾಗಿತ್ತು ಎಂದು ಸುನ್ನಿ ವಕ್ಫ್‌ ಬೋರ್ಡ್‌ ಪರ ವಕೀಲ ರಾಜೀವ್‌ ಧವನ್ ಅವರಿಗೆ ಮುಖ್ಯನ್ಯಾಯಮೂರ್ತಿ ರಂಜನ್ ಗೊಗೋಯ್ ಸಾರಥ್ಯದ ಪಂಚ ನ್ಯಾಯಮೂರ್ತಿಗಳ ಸಾಂವಿಧಾನಿಕ ಪೀಠ ಹೇಳಿತ್ತು.

ರಾಮಜನ್ಮಭೂಮಿ ಮಾಲೀಕತ್ವ ಸಂಬಂಧ ಯಾರೋ ಒಬ್ಬರು ಅರ್ಜಿ ಸಲ್ಲಿಸಿದ್ದರೆ ವಿವಾದ ಸರಳವಾಗಿರುತ್ತಿತ್ತು. ಆದ್ರೆ, ಇಲ್ಲಿ ಖುದ್ದು ‘ರಾಮಜನ್ಮಭೂಮಿ’ಯೇ ಪ್ರತಿವಾದಿಯಾಗಿದೆ ಎಂದು ನ್ಯಾಯಪೀಠ ಹೇಳಿದೆ. ಇದು ಕೇವಲ ರಾಮನ ವಿಗ್ರಹದ ಕುರಿತಾದ ಪ್ರಕರಣ ಆಗಿದ್ರೆ, ಯಾವಾಗಲೋ ತೀರ್ಮಾನವಾಗಿಬಿಡುತ್ತಿತ್ತು. ಆದ್ರೆ, ಇದು ಜನ್ಮಭೂಮಿಗೆ ಸಂಬಂಧಿಸಿದ್ದು, ಇಲ್ಲಿ ಎಲ್ಲರೂ ಭಾಗಿದಾರರಾಗಿರುತ್ತಾರೆ. ಕೆಲವೊಂದು ಸನ್ನಿವೇಶದಲ್ಲಿ ಈ ವಿವಾದಕ್ಕೆ ಕಾನೂನಾತ್ಮಕ ಪರಿಹಾರವೇ ಸಿಗದೆ ಹೋಗಬಹುದು ಅನ್ನೋ ಮಾತೂ ಇದೆ. ಪ್ರಕರಣದ ಸಂಬಂಧ ಪ್ರತಿದಿನ ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆ ನಡೆಯುತ್ತಿದೆ. ಈವರೆಗೆ 24 ದಿನಗಳ ಕಾಲ ವಿಚಾರಣ ಮುಕ್ತಾಯವಾಗಿದೆ.

ಜನ ಜಾಗೃತರಾದರೆ ರಾಮಮಂದಿರ ನಿರ್ಮಾಣ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ