ಹೊಸದಿಲ್ಲಿ: ನ್ಯಾಯಮೂರ್ತಿಯೊಬ್ಬರ ಅಲಭ್ಯತೆಯಿಂದಾಗಿ ಅಯೋಧ್ಯೆ ಭೂ ವಿವಾದದ ವಿಚಾರಣೆ ಎಂಟನೇ ದಿನವಾದ ಸೋಮವಾರ ನಡೆಯಲಿಲ್ಲ. ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೋಯ್ ನೇತೃತ್ವದ ಪಂಚ ಸದಸ್ಯರ ಸಂವಿಧಾನ ಪೀಠವಿ ವಿಚಾರಣೆ ನಡೆಸುತ್ತಿದೆ. ಪೀಠದ ಸದಸ್ಯರಲ್ಲಿ ಒಬ್ಬರಾಗಿರುವ ನ್ಯಾಯಮೂರ್ತಿ ಎಸ್.ಎ. ಬೋಬ್ಡೆ ಅವರು ಅಲಭ್ಯವಾದ ಹಿನ್ನೆಲೆಯಲ್ಲಿ ವಿಚಾರಣೆ ನಡೆಯುವುದಿಲ್ಲ ಎಂದು ಸಂಬಂಧಿಸಿ ವಕೀಲರಿಗೆ ಸೋಮವಾರ ಬೆಳಗ್ಗೆ ಮಾಹಿತಿ ನೀಡಲಾಯಿತು. 'ರಾಮ ಲಲ್ಲಾ ವಿರಾಜಮನ್' ಪರ ವಕೀಲ ಸಿ.ಎಸ್. ವೈದ್ಯನಾಥನ್ ವಾದ ಮಂಡಿಸುತ್ತಿದ್ದು, ವಿವಾದಿತ ಕಟ್ಟಡವು ರಾಮನ ಜನ್ಮಸ್ಥಳವಾಗಿತ್ತು ಎಂಬುದಕ್ಕೆ ಹಲವು ಐತಿಹಾಸಿಕ ದಾಖಲೆಗಳನ್ನು ಕೋರ್ಟ್ ಮುಂದೆ ಇರಿಸಿದ್ದಾರೆ.
8ನೇ ದಿನ ನಡೆಯದ ಅಯೋಧ್ಯೆ ವಿಚಾರಣೆ
ನ್ಯಾಯಮೂರ್ತಿ ಎಸ್.ಎ. ಬೋಬ್ಡೆ ಅವರು ಅಲಭ್ಯವಾದ ಹಿನ್ನೆಲೆಯಲ್ಲಿ ವಿಚಾರಣೆ ನಡೆಯುವುದಿಲ್ಲ ಎಂದು ಸಂಬಂಧಿಸಿ ವಕೀಲರಿಗೆ ಸೋಮವಾರ ಬೆಳಗ್ಗೆ ಮಾಹಿತಿ ನೀಡಲಾಯಿತು.
Agencies 20 Aug 2019, 5:00 am