ಆ್ಯಪ್ನಗರ

ಮಾತುಕತೆ ಪುನರಾರಂಭಕ್ಕೆ ಸಂಧಾನ ಸಮಿತಿ ಮನವಿ

ನಿರ್ಮೋಹಿ ಅಖಾಡ ಮತ್ತು ಸುನ್ನಿ ವಕ್ಫ್ ಬೋರ್ಡ್‌ ಸಂಧಾನ ಸಭೆ ಪುನರಾರಂಭಿಸುವಂತೆ ತಮಗೆ ಮನವಿ ಸಲ್ಲಿಸಿದ್ದರಿಂದ ಈ ಸಂಬಂಧ ನಿರ್ದೇಶನ ನೀಡಬೇಕೆಂದು ಕೋರಿ ಸಂಧಾನ ಸಮಿತಿಯು ಕೋರ್ಟ್‌ಗೆ ಸೋಮವಾರ ಮನವಿ ಸಲ್ಲಿಸಿದೆ.

PTI 17 Sep 2019, 5:00 am
ಹೊಸದಿಲ್ಲಿ: ಅಯೋಧ್ಯೆಯ ಶ್ರೀರಾಮಜನ್ಮಭೂಮಿ ಹಾಗೂ ಬಾಬ್ರಿ ಮಸೀದಿ ಭೂ ಒಡೆತನ ವಿವಾದ ಕುರಿತು ಸರ್ವಸಮ್ಮತ ಶಾಶ್ವತ ಪರಿಹಾರಕ್ಕೆ ಸುಪ್ರೀಂ ಕೋರ್ಟ್‌ ನೇಮಿಸಿದ್ದ ತ್ರಿ ಸದಸ್ಯರ ಸಂಧಾನ ಸಮಿತಿಯು ಮಾತುಕತೆ ಪುನರಾರಂಭಿಸಲು ಅನುಮತಿ ಕೋರಿ ಸಿಜೆಐ ರಂಜನ್‌ ಗೊಗೋಯ್‌ ನೇತೃತ್ವದ ಪಂಚ ಸದಸ್ಯ ಸಂವಿಧಾನ ಪೀಠಕ್ಕೆ ಮನವಿ ಸಲ್ಲಿಸಿದೆ.
Vijaya Karnataka Web ayodhya parties want talks to resume mediation panel tells supreme court
ಮಾತುಕತೆ ಪುನರಾರಂಭಕ್ಕೆ ಸಂಧಾನ ಸಮಿತಿ ಮನವಿ


ನಿರ್ಮೋಹಿ ಅಖಾಡ ಮತ್ತು ಸುನ್ನಿ ವಕ್ಫ್ ಬೋರ್ಡ್‌ ಸಂಧಾನ ಸಭೆ ಪುನರಾರಂಭಿಸುವಂತೆ ತಮಗೆ ಮನವಿ ಸಲ್ಲಿಸಿದ್ದರಿಂದ ಈ ಸಂಬಂಧ ನಿರ್ದೇಶನ ನೀಡಬೇಕೆಂದು ಕೋರಿ ಸಂಧಾನ ಸಮಿತಿಯು ಕೋರ್ಟ್‌ಗೆ ಸೋಮವಾರ ಮನವಿ ಸಲ್ಲಿಸಿದೆ. ನಿವೃತ್ತ ನ್ಯಾ.ಎಫ್‌.ಎಂ.ಖಲೀಫುಲ್ಲಾನೇತೃತ್ವದ ಸಮಿತಿಯಲ್ಲಿಆರ್ಟ್‌ ಆಫ್‌ ಲಿವಿಂಗ್‌ ಸಂಸ್ಥಾಪಕ ಶ್ರೀ ಶ್ರೀ ರವಿಶಂಕರ್‌ ಗುರೂಜಿ, ಶ್ರೀರಾಮ್‌ ಪಂಚೂ ಇದ್ದಾರೆ. ಭೂ ವಿವಾದ್ವನ್ನು ಸಂಧಾನ ಮಾತುಕತೆ ಸಾಧ್ಯವೇ ಇಲ್ಲವೆಂದು ಸಮಿತಿ ವರದಿ ಸಲ್ಲಿಸಿತ್ತು. ಆ ನಂತರ ಸುಪ್ರೀಂ ಕೋರ್ಟ್‌ ಸಾಂವಿಧಾನಿಕ ಪೀಠವು ಆಗಸ್ಟ್‌ 6ರಿಂದ ಪ್ರತಿದಿನವೂ ವಿಚಾರಣೆ ನಡೆಸುತ್ತಿದೆ.

ಪರಿಶೀಲನೆಗೆ ಸೂಚನೆ: ಅಯೋಧ್ಯೆ ವಿಚಾರಣೆಯ ಕೋರ್ಟ್‌ ಕಲಾಪಗಳ ನೇರ ಪ್ರಸಾರಕ್ಕೆ ಆಗ್ರಹಿಸಿ ಆರೆಸ್ಸೆಸ್‌ ಮಾಜಿ ನಾಯಕ ಕೆ.ಎನ್‌.ಗೋವಿಂದಾಚಾರ್ಯ ಅವರು ಸಲ್ಲಿಸಿದ ಅರ್ಜಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌, ನೇರ ಪ್ರಸಾರ ಸಾಧ್ಯವೇ ಎಂದು ಪರಿಶೀಲಿಸುವಂತೆ ತನ್ನ ರಿಜಿಸ್ಟ್ರಿಗೆ ಸೂಚಿಸಿದೆ. ಒಂದೊಮ್ಮೆ ವಿಚಾರಣಾ ಕಲಾಪಗಳ ನೇರ ಪ್ರಸಾರ ಸಾಧ್ಯವಾಗುವುದಾದರೆ ಅದನ್ನು ಕಾರ್ಯರೂಪಕ್ಕೆ ತರಲು ಎಷ್ಟು ಸಮಯ ಬೇಕಾಗಬಹುದು ಎಂಬುದನ್ನು ತಿಳಿಸುವಂತೆ ಸಿಜೆಐ ನೇತೃತ್ವದ ನ್ಯಾಯಪೀಠ ರಿಜಿಸ್ಟ್ರಿಗೆ ಸೂಚಿಸಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ