ಆ್ಯಪ್ನಗರ

ಮುಗಿದಿಲ್ಲ ಅಯೋಧ್ಯಾ ವಿವಾದ! ಸುಪ್ರೀಂ ತೀರ್ಪು 'ಪುನರ್ ವಿಮರ್ಶೆ'ಗೆ ಮುಸ್ಲಿಂ ಸಂಘಟನೆ ನಿರ್ಧಾರ

ಸುಪ್ರೀಂ ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿದಿರಲು ಸುನ್ನಿ ವಕ್ಫ್‌ ಬೋರ್ಡ್‌ ತೀರ್ಮಾನಿಸಿತ್ತು. ಆದ್ರೆ, ಇದೀಗ ಜಮಿಯತ್ ಉಲೇಮಾ ಇ ಹಿಂದ್ ಸಂಘಟನೆ ವಿವಾದವನ್ನು ಮತ್ತೆ ಸುಪ್ರೀಂ ಅಂಗಳಕ್ಕೆ ಕೊಂಡೊಯ್ಯಲು ನಿರ್ಧರಿಸಿದೆ.

TIMESOFINDIA.COM 17 Nov 2019, 4:22 pm
ಹೊಸ ದಿಲ್ಲಿ: ಅಯೋಧ್ಯಾ ತೀರ್ಪನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ಗೆ ಪುನರ್‌ ವಿಮರ್ಶಾ ಅರ್ಜಿ ಸಲ್ಲಿಸಲು ಪ್ರಮುಖ ಮುಸ್ಲಿಂ ಸಂಘಟನೆಯೊಂದು ನಿರ್ಧರಿಸಿದೆ. ಜಮಿಯತ್ ಉಲೇಮಾ ಇ ಹಿಂದ್ ಸಂಸ್ಥೆಯ ಹಿರಿಯ ಮೌಲಾನಾ ಅರ್ಷದ್ ಮದನಿ ಈ ವಿಚಾರ ಪ್ರಕಟಿಸಿದ್ಧಾರೆ.
Vijaya Karnataka Web ayodhya verdict jamiat ulama i hind decided to file review petition in supreme court
ಮುಗಿದಿಲ್ಲ ಅಯೋಧ್ಯಾ ವಿವಾದ! ಸುಪ್ರೀಂ ತೀರ್ಪು 'ಪುನರ್ ವಿಮರ್ಶೆ'ಗೆ ಮುಸ್ಲಿಂ ಸಂಘಟನೆ ನಿರ್ಧಾರ


ಜಮಿಯತ್ ಸಂಘಟನೆಯ ಹಿರಿಯ ನಾಯಕರು ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರ ಸಭೆಯನ್ನು ಕರೆದು ಅಯೋಧ್ಯಾ ತೀರ್ಪು ವಿಚಾರ ಚರ್ಚಿಸಿ ಈ ತೀರ್ಮಾನ ಕೈಗೊಳ್ಳಾಗಿದೆ. ಈ ಸಭೆಯಲ್ಲಿ ಕಾನೂನು ತಜ್ಞರು ಹಾಗೂ ಹಿರಿಯ ವಕೀಲರೂ ಕೂಡಾ ಇದ್ದರು ಎಂದು ತಿಳಿದುಬಂದಿದೆ.

'5 ಎಕರೆ ಭೂ ಭಿಕ್ಷೆ ಬೇಕಿಲ್ಲ'! ಸುಪ್ರೀಂ ಅಯೋಧ್ಯಾ ತೀರ್ಪು ಕೆಣಕಿದ ಓವೈಸಿ ವಿರುದ್ಧ ದೂರು


ಮದನಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದ್ದು, ಸುಪ್ರೀಂ ತೀರ್ಪನ್ನು ಪ್ರಶ್ನಿಸಿ ಪುನರ್‌ ವಿಮರ್ಶಾ ಮೇಲ್ಮನವಿ ಸಲ್ಲಿಸಲೇಬೇಕೆಂದು ಒಕ್ಕೊರಲ ನಿರ್ಣಯ ಕೈಗೊಳ್ಳಲಾಗಿದೆ. ಸುಪ್ರೀಂ ತೀರ್ಪು ಮುಸ್ಲಿಂ ಕಕ್ಷಿದಾರರ ವಿರುದ್ಧವಾಗಿ ಬಂದಿದೆ ಎಂದು ಸಭೆಯಲ್ಲಿ ಭಾಗವಹಿಸಿದ್ದ ಕಾನೂನು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಸಂವಿಧಾನದ ಪ್ರಕಾರ ನಮಗೆ ಮೇಲ್ಮನವಿ ಸಲ್ಲಿಸುವ ಹಕ್ಕು, ಅಧಿಕಾರ ಹಾಗೂ ಆಯ್ಕೆ ಇರುವ ಕಾರಣ, ಸುಪ್ರೀಂ ಕೋರ್ಟ್‌ ಕೊಟ್ಟಿರುವ ತೀರ್ಪೇ ಅಂತಿಮವಲ್ಲ ಎಂದು ಸಭೆ ತೀರ್ಮಾನಿಸಿದೆ.

ಅಯೋಧ್ಯಾ ತೀರ್ಪು ಹೊರಬಿದ್ದ ಬೆನ್ನಲ್ಲೇ ಮೆಗಾ ಪ್ಲಾನ್ ರೆಡಿ! ಮಾಡರ್ನ್ ಆಗಲಿದೆ ಪೌರಾಣಿಕ ನಗರಿ!

ನವೆಂಬರ್ 9ರಂದು ತೀರ್ಪು ನೀಡಿದ್ದ ಸುಪ್ರೀಂ ಕೋರ್ಟ್‌, ವಿವಾದಿತ 2.77 ಎಕರೆ ಭೂಮಿಯನ್ನು ಅದರ ಹಕ್ಕುದಾರ ರಾಮಲಲ್ಲಾಗೆ ಬಿಟ್ಟುಕೊಡುವಂತೆ ತೀರ್ಪು ನೀಡಿತ್ತು. ಮುಸ್ಲಿಂ ಕಕ್ಷಿದಾರರಿಗೆ ಬಾಬ್ರಿ ಮಸೀದಿ ಕಟ್ಟಿಕೊಳ್ಳಲು ಅಯೋಧ್ಯೆಯಲ್ಲೇ 5 ಎಕರೆ ಭೂಮಿ ನೀಡಲು ಆದೇಶಿಸಿತ್ತು. ಅಷ್ಟೇ ಅಲ್ಲ, ಈ ಪ್ರಕರಣದ ಮತ್ತೊಬ್ಬ ದಾವೆದಾರ ಅಖಾರಾ ಪರಿಷತ್‌ಗೆ ರಾಮಮಂದಿರ ನಿರ್ಮಾಣ ಟ್ರಸ್ಟ್‌ನಲ್ಲಿ ಸ್ಥಾನ ನೀಡುವಂತೆ ಸೂಚಿಸಿತ್ತು. ಶತಮಾನಗಳಿಂದ ಕಗ್ಗಂಟಾಗಿ ಉಳಿದಿದ್ದ ಶ್ರೀರಾಮಂದಿರ ಹಾಗೂ ಬಾಬ್ರಿ ಮಸೀದಿ ವಿವಾದವನ್ನು ಸುಪ್ರೀಂ ಕೋರ್ಟ್‌ ಕಡೆಗೂ ಬಗೆಹರಿಸಿದೆ ಎಂದೇ ಭಾವಿಸಲಾಗಿತ್ತು. ಏಕೆಂದರೆ, ಸುಪ್ರೀಂ ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿದಿರಲು ಸುನ್ನಿ ವಕ್ಫ್‌ ಬೋರ್ಡ್‌ ತೀರ್ಮಾನಿಸಿತ್ತು. ಆದ್ರೆ, ಇದೀಗ ವಿವಾದ ಮತ್ತೆ ಸುಪ್ರೀಂ ಮೆಟ್ಟಿಲೇರುವ ಲಕ್ಷಣಗಳು ಕಂಡು ಬರ್ತಿದೆ. ಜಮಿಯತ್ ಉಲೇಮಾ ಇ ಹಿಂದ್ ಸಂಸ್ಥೆಯ ಈ ನಿರ್ಣಯಕ್ಕೆ ಸುನ್ನಿ ವಕ್ಫ್‌ ಬೋರ್ಡ್‌ ಈವರೆಗೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಅಯೋಧ್ಯೆ ಆಯ್ತು, ಈಗ 'ಕಾಶಿ-ಮಥುರಾ' ಸರದಿ? ಸಮಾಧಿಯಿಂದ ಎದ್ದು ಸದ್ದು ಮಾಡ್ತಿದೆ ಇತಿಹಾಸ!

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ