ಹೊಸದಿಲ್ಲಿ: ಆಯುಷ್ಮಾನ್ ಯೋಜನೆಯಿಂದ ದೇಶದಲ್ಲಿಮುಂದಿನ 5 ವರ್ಷಗಳಲ್ಲಿ11 ಲಕ್ಷ ಉದ್ಯೋಗ ಸೃಷ್ಟಿಯಾಗುವ ನಿರೀಕ್ಷೆ ಇದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಜನಸಾಮಾನ್ಯರಿಗೆ ಕೈಗೆಟಕುವ ದರದಲ್ಲಿಆರೋಗ್ಯ ಸೇವೆಗಳನ್ನು ಒದಗಿಸುವ ತಮ್ಮ ಸರಕಾರದ ಮಹತ್ವಾಕಾಂಕ್ಷಿ ಯೋಜನೆ 'ಆಯುಷ್ಮಾನ್ ಭಾರತ್' ಒಂದು ವರ್ಷ ಪೂರೈಸಿದ ಹಿನ್ನೆಲೆಯಲ್ಲಿಮಂಗಳವಾರ ನಡೆದ 'ಆರೋಗ್ಯ ಮಂಥನ' ಕಾರ್ಯಕ್ರಮದಲ್ಲಿಅವರು ಮಾತನಾಡಿದರು. ''ಆಯುಷ್ಮಾನ್ ಭಾರತ್ ಯೋಜನೆಯಿಂದ ತಮ್ಮ ರಾಜ್ಯದ ಹೊರಗಿನ ಆಸ್ಪತ್ರೆಗಳಲ್ಲಿಚಿಕಿತ್ಸೆ ಪಡೆಯುವ ಸೌಲಭ್ಯವನ್ನು ಜನತೆ ಪಡೆಯುತ್ತಿದ್ದಾರೆ. ಈ ಯೋಜನೆ ಅಡಿಯಲ್ಲಿ50 ಸಾವಿರಕ್ಕೂ ಅಧಿಕ ಮಂದಿ ಚಿಕಿತ್ಸೆ ಪಡೆದು ಸಂತೋಷ ವ್ಯಕ್ತಪಡಿಸಿದ್ದಾರೆ. ದೇಶಾದ್ಯಂತ ಅತಿಹೆಚ್ಚು ಜನರಿಗೆ ಯೋಜನೆ ತಲುಪುತ್ತಿರುವುದು ಸಂತಸದ ಸಂಗತಿ. ಕೃಷಿ ಭೂಮಿ, ಆಭರಣಗಳನ್ನು ಅಡವಿಟ್ಟು ಚಿಕಿತ್ಸೆಗಾಗಿ ಮುಂದಾಗುತ್ತಿದ್ದ ಬಡವರ ಕಷ್ಟಕ್ಕೆ ಈ ಯೋಜನೆಗೆ ಕೊನೆ ಹಾಡಿದೆ ಎನ್ನುವ ಸಮಾಧಾನವಿದೆ,'' ಎಂದು ಪ್ರಧಾನಿ ಹೇಳಿದ್ದಾರೆ. ''ಯೋಜನೆ ಅನುಷ್ಠಾನದಲ್ಲಿಸಣ್ಣಪುಟ್ಟ ದೋಷಗಳಿರುವುದು ಗಮನಕ್ಕೆ ಬಂದಿದೆ. ಅವುಗಳನ್ನು ಸರಿಪಡಿಸಲಾಗುತ್ತಿದೆ. ಅತ್ಯಾಧುನಿಕ ಚಿಕಿತ್ಸಾ ಸೌಲಭ್ಯಗಳಿರುವ ಆಸ್ಪತ್ರೆಗಳನ್ನು ಯೋಜನೆಯ ಜಾಲದಲ್ಲಿಸೇರ್ಪಡಿಸುವಿಕೆ, ಸಣ್ಣ ನಗರಗಳಿಗೂ ಯೋಜನೆಯನ್ನು ತಲುಪಿಸುವ ನಿಟ್ಟಿನಲ್ಲಿಕಾರ್ಯ ನಡೆಯುತ್ತಿದೆ,'' ಎಂದು ಮೋದಿ ಹೇಳಿದ್ದಾರೆ.
ಆಯುಷ್ಮಾನ್ ಭಾರತದಿಂದ ಮುಂದಿನ 5 ವರ್ಷಗಳಲ್ಲಿ11 ಲಕ್ಷ ಉದ್ಯೋಗ ಸೃಷ್ಟಿ
''ಯೋಜನೆ ಅನುಷ್ಠಾನದಲ್ಲಿಸಣ್ಣಪುಟ್ಟ ದೋಷಗಳಿರುವುದು ಗಮನಕ್ಕೆ ಬಂದಿದೆ. ಅವುಗಳನ್ನು ಸರಿಪಡಿಸಲಾಗುತ್ತಿದೆ. ಅತ್ಯಾಧುನಿಕ ಚಿಕಿತ್ಸಾ ಸೌಲಭ್ಯಗಳಿರುವ ಆಸ್ಪತ್ರೆಗಳನ್ನು ಯೋಜನೆಯ ಜಾಲದಲ್ಲಿಸೇರ್ಪಡಿಸುವಿಕೆ, ಸಣ್ಣ ನಗರಗಳಿಗೂ ಯೋಜನೆಯನ್ನು ತಲುಪಿಸುವ ನಿಟ್ಟಿನಲ್ಲಿಕಾರ್ಯ ನಡೆಯುತ್ತಿದೆ,'' ಎಂದು ಮೋದಿ ಹೇಳಿದ್ದಾರೆ.
PTI 2 Oct 2019, 5:00 am