ಆ್ಯಪ್ನಗರ

ಬಿಜೆಪಿ ಸಂಸದೆ ರಮಾದೇವಿ ವಿರುದ್ಧ ಆಕ್ಷೇಪಾರ್ಹ ಹೇಳಿಕೆ: ಕ್ಷಮೆ ಕೋರಿದ ಆಜಂ ಖಾನ್‌

ಬಿಜೆಪಿ ಸಂಸದೆ ರಮಾದೇವಿ ವಿರುದ್ಧ ಆಕ್ಷೇಪಾರ್ಹ ಹೇಳಿಕೆಗಳನ್ನು ನೀಡಿ ವಿವಾದ ಸೃಷ್ಟಿಸಿದ್ದ ಸಮಾಜವಾದಿ ಪಕ್ಷದ ನಾಯಕ ಆಜಂ ಖಾನ್‌ ಕೊನೆಗೂ ಕ್ಷಮಾಪಣೆ ಕೋರಿದ್ದಾರೆ.

Vijaya Karnataka Web 29 Jul 2019, 4:52 pm
ಹೊಸದಿಲ್ಲಿ: ಬಿಜೆಪಿಯ ಸಂಸದೆ ರಮಾದೇವಿ ವಿರುದ್ಧ ನೀಡಿದ್ದ ಆಕ್ಷೇಪಾರ್ಹ ಹೇಳಿಕೆಗಾಗಿ ಸಮಾಜವಾದಿ ಪಕ್ಷದ ಸಂಸತ್ ಸದಸ್ಯ ಅಜಂ ಖಾನ್ ಲೋಕಸಭೆಯಲ್ಲಿ ಕ್ಷಮೆ ಕೋರಿದ್ದಾರೆ.
Vijaya Karnataka Web ರಮಾದೇವಿ, ಆಜಂ ಖಾನ್‌
ರಮಾದೇವಿ, ಆಜಂ ಖಾನ್‌


ಸಭಾಧ್ಯಕ್ಷರ ಪೀಠಕ್ಕೆ ಅಗೌರವ ತೋರುವ ಯಾವುದೇ ಇರಾದೆ ತಮಗಿರಲಿಲ್ಲ ಹಾಗೇನಾದರೂ ನೋವಾಗಿದ್ದರೆ ಕ್ಷಮೆ ಕೋರುತ್ತೇನೆ ಎಂದು ಆಜಂ ಖಾನ್‌ ತಿಳಿಸಿದರು.

ಸದನ ಎಲ್ಲರಿಗೂ ಸೇರಿದ್ದಾಗಿದ್ದು, ಪ್ರತಿಯೊಬ್ಬರ ಬೆಂಬಲದೊಂದಿಗೆ ನಡೆಯುತ್ತದೆ ಎಂದು ಲೋಕಸಭಾಧ್ಯಕ್ಷ ಓಂ ಬಿರ್ಲಾ ತಿಳಿಸಿದರು.

ಸದಸ್ಯರು ಮಾತನಾಡುವಾಗ ಸಭಾಧ್ಯಕ್ಷರನ್ನುದ್ದೇಶಿಸಿ ಮಾತನಾಡಬೇಕು ಮತ್ತು ಸದನದ ಘನತೆಗೆ ಚ್ಯುತಿ ತರುವ ಶಬ್ದ ಬಳಸಬಾರದು ಎಂದು ಓಂ ಬಿರ್ಲಾ ತಿಳಿಸಿದರು.

ಆಜಂ ಖಾನ್‌ ಕ್ಷಮೆ ಕೋರಿರುವುದನ್ನು ರಮಾದೇವಿ ತಿರಸ್ಕರಿಸಿದ್ದಾರೆ.

ಆಜಂ ಖಾನ್‌ ಅವರು ಭಾರತ ಪುರುಷರು ಮತ್ತು ಮಹಿಳೆಯರಿಗೆ ಅಗೌರವ ತೋರಿದ್ದಾರೆ. ಆಜಂ ಖಾನ್‌ ಇದೇ ಮೊದಲು ಈ ರೀತಿಯ ಹೇಳಿಕೆ ನೀಡಿಲ್ಲ. ಹಲವಾರು ಬಾರಿ ವಿವಾದಾತ್ಮಕ ಹೇಳಿಕೆಗಳನ್ನು ನೀಡಿದ್ದಾರೆ. ಇಂಥ ಹೇಳಿಕೆಗಳನ್ನು ಕೇಳಿಸಿಕೊಳ್ಳಲು ನಾನು ಇಲ್ಲಿಗೆ ಬಂದಿಲ್ಲ ಎಂದು ರಮಾದೇವಿ ಆಕ್ರೋಶದಿಂದ ಪ್ರತಿಕ್ರಿಯಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ