ಆ್ಯಪ್ನಗರ

ಗುಂಪು ಹಲ್ಲೆ ಭೀತಿ: ಅಜಂ ಖಾನ್‌ ಪತ್ನಿಯಿಂದ ಗೋವು ವಾಪಸ್‌

ಸ್ವಾಮೀಜಿಯೊಬ್ಬರು ಉಡುಗೊರೆ ನೀಡಿರುವ ಗೋವನ್ನು ಗುಂಪು ಹಲ್ಲೆ ಭೀತಿಯಿಂದ ವಾಪಸ್‌ ನೀಡಿರುವುದಾಗಿ ಸಮಾಜವಾದಿ ಪಕ್ಷ ದ ನಾಯಕ ಆಜಂ ಖಾನ್‌ ಪತ್ನಿ, ರಾಜ್ಯಸಭಾ ಸದಸ್ಯೆ ತಜೀಮ್‌ ಫಾತಿಮಾ ...

Vijaya Karnataka 26 Jul 2018, 10:09 am
ರಾಮಪುರ: ಸ್ವಾಮೀಜಿಯೊಬ್ಬರು ಉಡುಗೊರೆ ನೀಡಿರುವ ಗೋವನ್ನು ಗುಂಪು ಹಲ್ಲೆ ಭೀತಿಯಿಂದ ವಾಪಸ್‌ ನೀಡಿರುವುದಾಗಿ ಸಮಾಜವಾದಿ ಪಕ್ಷ ದ ನಾಯಕ ಆಜಂ ಖಾನ್‌ ಪತ್ನಿ, ರಾಜ್ಯಸಭಾ ಸದಸ್ಯೆ ತಜೀಮ್‌ ಫಾತಿಮಾ ತಿಳಿಸಿದ್ದಾರೆ.
Vijaya Karnataka Web Azam khan


ಅಕ್ರಮವಾಗಿ ಗೋಸಾಗಾಟ ಮಾಡುತ್ತಿದ್ದ ಆರೋಪದಲ್ಲಿ ರಾಜಸ್ಥಾನದ ಅಲ್ವಾರ್‌ನಲ್ಲಿ ಗುಂಪೊಂದು ವ್ಯಕ್ತಿಯನ್ನು ಹೊಡೆದು ಸಾಯಿಸಿರುವ ಕೆಲವೇ ದಿನಗಳಲ್ಲಿ ಅವರು ಈ ನಿರ್ಧಾರ ಕೈಗೊಂಡಿದ್ದಾರೆ.

''ಇದು ನಮಗೆ ಬಹಳ ನೋವಿನ ವಿಷಯವಾಗಿತ್ತು. ಯಾರಾದರೂ ಗೋವನ್ನು ಕೊಂದು, ಆರೋಪವನ್ನು ನಮ್ಮ ಮೇಲೆ ಹೊರಿಸಬಹುದು ಎಂಬ ಭೀತಿಯಿಂದ ಅದನ್ನು ವಾಪಸ್‌ ಮಾಡಿದ್ದೇವೆ,'' ಎಂದು ಫಾತಿಮಾ ಹೇಳಿದ್ದಾರೆ.

ಗೋವರ್ಧನ ಪೀಠದ ಶಂಕರಾಚಾರ್ಯ ಅಧೋಕ್ಷ ಜಾನಂದ ಮಹಾರಾಜ್‌ ಅವರು ಆಜಂ ಖಾನ್‌ ಕುಟುಂಬಕ್ಕೆ ಗೋವನ್ನು ಉಡುಗೊರೆಯಾಗಿ ನೀಡಿದ್ದರು.

ನೆರವು ವಾಪಸ್‌: ಕೆಲ ಸಮಯದ ಹಿಂದೆ ಗೋರಕ್ಷ ಣೆ, ಗಂಗಾ ಶುದ್ಧೀಕರಣಕ್ಕೆ ಬೆಂಬಲ ಸೂಚಿಸಿದ್ದ ಫಾತಿಮಾ, ಮಥುರಾ ಜಿಲ್ಲೆಯ ಗೋಶಾಲೆಯೊಂದರ ನಿರ್ವಹಣೆಗಾಗಿ 25 ಲಕ್ಷ ನೀಡುವುದಾಗಿ ಘೋಷಿಸಿದ್ದರು. ಆದರೀಗ, ಇನ್ನು ಗೋಶಾಲೆಗೆ ಧನಸಹಾಯ ಮಾಡಲಾರೆ ಎಂದು ಹೇಳಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ